ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು

ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು
ಬಂದವನ ಘನಕಾವ್ಯ ಹಾರಿಸಿದ ಹೆಮ್ಮೆಯ
ತುಂಬು ಹಾಯಿಯೆ ನನ್ನ ಭಾವಗಳ ಹೂಳಿದ್ದು
ಹೊತ್ತ ಬಸಿರೊಳೆ ಅದಕೆ ಗೋರಿಯನು ಕಟ್ಟಿದ್ದು ?
ಇರುಳ ಶಕ್ತಿಗಳ ನೆರವಿಂದ ಮರ್ತ್ಯರ ಮೀರಿ
ಬರೆಯಬಲ್ಲವನ ಸತ್ವವೆ ನನ್ನಮೆಟ್ಟಿದ್ದು ?
ಅಲ್ಲ ಖಂಡಿತ ಅಲ್ಲ ನನ್ನ ಕವಿತೆಯ ದಾರಿ
ಅವನಲ್ಲ, ಇರುಳ ಕೆಳೆಯೂ ಅಲ್ಲ ಮುಚ್ಚಿದ್ದು.
ನನ್ನ ಮೌನ ತಮ್ಮ ಗೆಲುವು ಎನ್ನುವ ಕೂಗು
ಸಲ್ಲದ್ದು ಅವನಿಗೂ, ರಾತ್ರಿ ಪ್ರೇರಣೆ ನೀಡಿ
ಮಂಕು ಚೆಲ್ಲುವ ಅವನ ನಗುಮೊಗದ ಮರುಳಿಗೂ,
ನಾನಾಗಲಿಲ್ಲ ಅವರೆದುರು ಎಂದೂ ಹೇಡಿ.
ನಿನ್ನ ಸಿರಿಮೊಗ ಅವನ ಕವಿತೆಯನು ತುಂಬಿತು
ಉಳಿಯಿತೇನೆನಗೆ, ಆಗೆನ್ನ ಎದೆ ಕುಂದಿತು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 86
Was it the proud full sail of his great verse

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾವಣಾಂತರಂಗ – ೧೩
Next post ನ್ಯಾಯ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…