ಸಮಾಧಿ

ರಜತ ರಶ್ಮಿ ಪ್ರಸ್ಫುರಿತಕಿರಣೆ ಯಾರಿವಳು ತಾರಕೆಯು ದಿಗಂಬರೇ
ದೃಷ್ಟಿ ಕ್ಷಿತಿಜದಲಿ ತೇಲಿ ಬಹಳು ಗುಡಿಗಟ್ಟಿಗೊಂಡ ಸೋಮಾವಸರೆ
ತಿಳಿ ನೀಲಿಯ ಬಾನಂಚಿನ ಕರೆಗೆ ಪ್ರಭಂಜನವೇ ಅಡಿಕಿಲವಾಗೆ
ಇಗೊ ಜಡಜಲಧಿಯ ಪಸರವ ಮುಸುಕಿದೆ ಶಮ ಮೂರ್ಚೆಯ ಹಾ

ಮನವೋ ಅಸ್ಮಿತೆಯನ್ನು ಮುಟ್ಟಿತ್ತಸ್ಪಂದ ಸಮಾಧಿಯಲಿ
ಹೃದಯ ಮೌನದಲಿ ಗುಪ್ತವಾಗಿ ಸಾನಂದ ಗರ್ಭವಾಗಿ
ವಿವಿಧೇಂದ್ರಿಯ ಪ್ರಸ್ಫುರಣ ನಾಟ್ಯದಾವರಣ ಹರಿದು ಹೋಗಿ
ಮೂಕ ಮೈಯೊಳಾವುದೊ ಒಲೆ ಹೊತ್ತಿತು ಝಗ್ಗೆನೆ ಪ್ರಭೆಯಾ

ಸರ್ಗಸುಸಜ್ಜೇ ಓ ತಾರಗೆಯೇ ನಿರ್ಮಲೆ, ಸ್ವಚ್ಛಂದೇ
ಅಜ್ಞಾತಾನಂದಾಬ್ಧಿಯೊಳೆದ್ದಾ ಪರಿವೇಷಿತ ಚಂದ್ರೇ
ಪುರೋಭಾವಿಯಾದಾತ್ಮ ಪರಿಣತಿಯದಿದೊ ಝಂಝೋಚ್ಛ್ವಾಸ
ಏಕಮೇವ ಆನಂದ ಸಾಗರದ ಆತ್ಮಲೀನವಾಸ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀಕೃಷ್ಣನ ಕೊಳಲಿಗೆ
Next post ವಾಗ್ದೇವಿ – ೫೫

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys