ಆತ್ಮಾರ್ಥಿ-ಸ್ವಾರ್ಥಿ

`ಅಹಂಕಾರರಹಿತ ನಾನು ಮುಕ್ತ ಆತ್ಮನಂದನು-
ಸುಡಲಿ ಊಟ ಬರದು ಏಕೆ ಕೂಡಲೆ ತಾನೆ’೦ದನು.
ಅವನಿಗೆಂದೆ `ಏಕೊ ರೋಷ?’ `ಎಂಥ ರೋಷ ಎದರದು?
ಉದರದೇವ ಹಸಿದುಕೊಂಡ ಆ ಗರ್ಜನೆ ಆದರದು!’

`ಹೀಗೊ’ ಎಂದೆ- ‘ಹೌದು’ ಎಂದ `ಎಲ್ಲ ಆಟ ಅವನದು
ಹಸಿಯೆ ನುಸಿಯೆ ನನ್ನ ಬದುಕು ಶುದ್ಧ ಸ್ವಯಂಭವನದು
ಏನು ಆದರೇನು ನನಗೆ ಇಂದು ನಾಡಿದು’
`ನಿಜವೊ’ ಎಂದೆ ಅನ್ನರಾಗ ಎಳೆದು ಮತ್ತೆ ಹಾಡಿದು ?

`ಅಚ್ಚಾ’ ಎಂದಾ ‘ನಿನ್ನ ಶಂಕೆ ನನ್ನ ತಲೆಗು ಸೋ೦ಕಿತು
ಒಮ್ಮೆ ಮುಕ್ತ ಸದಾಮುಕ್ತ ಉಳಿದುದೇನು ಕೊಂಕಿತು ?
ಒದ್ದಾಡಿದೆ ಗುದ್ದಾಡಿದೆ ಕಾದ್ದಾಡಿದೆ ಆಗಲಿ
ಹಸಿವು ಹುಸಿವು ಕಸುವು ಕುಸಿವು ಹೇಗೊ ಹಾಗೆ ಸಾಗಲಿ

ಆತ್ಮಜ್ಞಾನ ಮುಕ್ತಗಾಸ; ಉಳಿದ ತಾನ ಮಾನವು
ತಾಳ ಬಿಡಲಿ, ಮೇಳ ಕೆಡಲಿ ಅದರದೇಕೆ ಭಾನವು ?’
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉನ್ಮಾದಿನಿ
Next post ವಾಗ್ದೇವಿ – ೪೧

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…