ಕಂಪ್ಯುಟರ್

ತಾತ ನೀನು ಕಥೆ ಹೇಳಿರುವೆ
ನಿನಗೆ ಕಂಪ್ಯೂಟರ್ ಬಗ್ಗೆ ಹೇಳುವ

ಮೊದಲಿಗೆ ಒತ್ತಿ ಆನ್ ಗುಂಡಿ
ಬೆಳ್ಳಿ ಪರದೆ ಮೂಡಿತು ನೋಡಿ

ಇದಕ್ಕೆ ಹೇಳುವರು ಮೌಸೆಂದು
ಗಣಪತಿ ವಾಹನ ಇಲಿಯೆಂದು

ಕನ್ನಡ ನುಡಿ ಫಾಂಟಾವನ್ನು
ಗಣಕ ಪರಿಷತ್ತು ನೀಡಿದೆ.

ಕನ್ನಡ ನುಡಿಯ ಅಕ್ಷರಧಾಮ
ಇಲ್ಲಿವೆ ನೋಡಿ ಗಿಣಿ ರಾಮ

ಪತ್ರ ಲೇಖನ ಪದ್ಯಗಳನ್ನು
ಬರೆಯಬಹುದು ಬೇಕಾದಷ್ಟನ್ನು

ತಪ್ಪಾದರೆ ಡಿಲೀಟು ಬಟನ್ ಒತ್ತಲು
ಅಳಿಸಿ ಹೋಗುವುದು ಬರೆದುದೆಲ್ಲ

ಇಂಕು ಚೀತ್ಕಾಟ ಏನೂ ಇಲ್ಲ
ನೋಡಲು ಖುಷಿಯು ತೀರದಲ್ಲ

ಒಂದು ಹಾಳೆಯ ತಯಾರಿಕೆಗೆ
ಮರವೊಂದು ಸರಿವುದು ತೆರೆಗೆ

ಕಂಪ್ಯುಟರ್ ಬಳಕೆ ಮಾಡಿದರೆ
ಉಳಿವದು ಅರಣ್ಯ ನಮ್ಮ ಪಾಲಿಗೆ

ಪ್ರಾಣಿ ಪಕ್ಷಿ ನದಿ ಸಸ್ಯ ಉಳಿವಿಗೆ
ಬೇಕು ವನ ವನ ನಮ್ಮ ಬಾಳಿಗೆ

ಕಂಪ್ಯುಟರ್‌ದಿಂದ ಸುದ್ದಿಯನು
ಕಳಿಸಬಹುದೆಲ್ಲೆಡೆ ಕ್ಷಣದಲಿ

ಅಂಚೆ-ಗಿಂಚೆ ಬೇಕಿಲ್ಲ
ವಿಳಂಬ ಮಾತೇ ಇಲ್ಲ.

ಬಹೂಪಯೋಗಿ ಕಂಪ್ಯುಟರ್ ಜಾಲ
ನಮ್ಮಯ ಬದುಕಿನ ಊರುಗೋಲು
*****
೨೭.೦೯.೨೦೧೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೀತಾಚಾರ್‍ಯ
Next post ಎಷ್ಟೊಂದು ಅಬ್ಬರ, ಎಷ್ಟೊಂದು ನೊರೆ ತೆರೆ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…