ಕಂಪ್ಯುಟರ್

ತಾತ ನೀನು ಕಥೆ ಹೇಳಿರುವೆ
ನಿನಗೆ ಕಂಪ್ಯೂಟರ್ ಬಗ್ಗೆ ಹೇಳುವ

ಮೊದಲಿಗೆ ಒತ್ತಿ ಆನ್ ಗುಂಡಿ
ಬೆಳ್ಳಿ ಪರದೆ ಮೂಡಿತು ನೋಡಿ

ಇದಕ್ಕೆ ಹೇಳುವರು ಮೌಸೆಂದು
ಗಣಪತಿ ವಾಹನ ಇಲಿಯೆಂದು

ಕನ್ನಡ ನುಡಿ ಫಾಂಟಾವನ್ನು
ಗಣಕ ಪರಿಷತ್ತು ನೀಡಿದೆ.

ಕನ್ನಡ ನುಡಿಯ ಅಕ್ಷರಧಾಮ
ಇಲ್ಲಿವೆ ನೋಡಿ ಗಿಣಿ ರಾಮ

ಪತ್ರ ಲೇಖನ ಪದ್ಯಗಳನ್ನು
ಬರೆಯಬಹುದು ಬೇಕಾದಷ್ಟನ್ನು

ತಪ್ಪಾದರೆ ಡಿಲೀಟು ಬಟನ್ ಒತ್ತಲು
ಅಳಿಸಿ ಹೋಗುವುದು ಬರೆದುದೆಲ್ಲ

ಇಂಕು ಚೀತ್ಕಾಟ ಏನೂ ಇಲ್ಲ
ನೋಡಲು ಖುಷಿಯು ತೀರದಲ್ಲ

ಒಂದು ಹಾಳೆಯ ತಯಾರಿಕೆಗೆ
ಮರವೊಂದು ಸರಿವುದು ತೆರೆಗೆ

ಕಂಪ್ಯುಟರ್ ಬಳಕೆ ಮಾಡಿದರೆ
ಉಳಿವದು ಅರಣ್ಯ ನಮ್ಮ ಪಾಲಿಗೆ

ಪ್ರಾಣಿ ಪಕ್ಷಿ ನದಿ ಸಸ್ಯ ಉಳಿವಿಗೆ
ಬೇಕು ವನ ವನ ನಮ್ಮ ಬಾಳಿಗೆ

ಕಂಪ್ಯುಟರ್‌ದಿಂದ ಸುದ್ದಿಯನು
ಕಳಿಸಬಹುದೆಲ್ಲೆಡೆ ಕ್ಷಣದಲಿ

ಅಂಚೆ-ಗಿಂಚೆ ಬೇಕಿಲ್ಲ
ವಿಳಂಬ ಮಾತೇ ಇಲ್ಲ.

ಬಹೂಪಯೋಗಿ ಕಂಪ್ಯುಟರ್ ಜಾಲ
ನಮ್ಮಯ ಬದುಕಿನ ಊರುಗೋಲು
*****
೨೭.೦೯.೨೦೧೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೀತಾಚಾರ್‍ಯ
Next post ಎಷ್ಟೊಂದು ಅಬ್ಬರ, ಎಷ್ಟೊಂದು ನೊರೆ ತೆರೆ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys