ಕಂಪ್ಯುಟರ್

ತಾತ ನೀನು ಕಥೆ ಹೇಳಿರುವೆ
ನಿನಗೆ ಕಂಪ್ಯೂಟರ್ ಬಗ್ಗೆ ಹೇಳುವ

ಮೊದಲಿಗೆ ಒತ್ತಿ ಆನ್ ಗುಂಡಿ
ಬೆಳ್ಳಿ ಪರದೆ ಮೂಡಿತು ನೋಡಿ

ಇದಕ್ಕೆ ಹೇಳುವರು ಮೌಸೆಂದು
ಗಣಪತಿ ವಾಹನ ಇಲಿಯೆಂದು

ಕನ್ನಡ ನುಡಿ ಫಾಂಟಾವನ್ನು
ಗಣಕ ಪರಿಷತ್ತು ನೀಡಿದೆ.

ಕನ್ನಡ ನುಡಿಯ ಅಕ್ಷರಧಾಮ
ಇಲ್ಲಿವೆ ನೋಡಿ ಗಿಣಿ ರಾಮ

ಪತ್ರ ಲೇಖನ ಪದ್ಯಗಳನ್ನು
ಬರೆಯಬಹುದು ಬೇಕಾದಷ್ಟನ್ನು

ತಪ್ಪಾದರೆ ಡಿಲೀಟು ಬಟನ್ ಒತ್ತಲು
ಅಳಿಸಿ ಹೋಗುವುದು ಬರೆದುದೆಲ್ಲ

ಇಂಕು ಚೀತ್ಕಾಟ ಏನೂ ಇಲ್ಲ
ನೋಡಲು ಖುಷಿಯು ತೀರದಲ್ಲ

ಒಂದು ಹಾಳೆಯ ತಯಾರಿಕೆಗೆ
ಮರವೊಂದು ಸರಿವುದು ತೆರೆಗೆ

ಕಂಪ್ಯುಟರ್ ಬಳಕೆ ಮಾಡಿದರೆ
ಉಳಿವದು ಅರಣ್ಯ ನಮ್ಮ ಪಾಲಿಗೆ

ಪ್ರಾಣಿ ಪಕ್ಷಿ ನದಿ ಸಸ್ಯ ಉಳಿವಿಗೆ
ಬೇಕು ವನ ವನ ನಮ್ಮ ಬಾಳಿಗೆ

ಕಂಪ್ಯುಟರ್‌ದಿಂದ ಸುದ್ದಿಯನು
ಕಳಿಸಬಹುದೆಲ್ಲೆಡೆ ಕ್ಷಣದಲಿ

ಅಂಚೆ-ಗಿಂಚೆ ಬೇಕಿಲ್ಲ
ವಿಳಂಬ ಮಾತೇ ಇಲ್ಲ.

ಬಹೂಪಯೋಗಿ ಕಂಪ್ಯುಟರ್ ಜಾಲ
ನಮ್ಮಯ ಬದುಕಿನ ಊರುಗೋಲು
*****
೨೭.೦೯.೨೦೧೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೀತಾಚಾರ್‍ಯ
Next post ಎಷ್ಟೊಂದು ಅಬ್ಬರ, ಎಷ್ಟೊಂದು ನೊರೆ ತೆರೆ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…