ಕಂಪ್ಯುಟರ್

ತಾತ ನೀನು ಕಥೆ ಹೇಳಿರುವೆ
ನಿನಗೆ ಕಂಪ್ಯೂಟರ್ ಬಗ್ಗೆ ಹೇಳುವ

ಮೊದಲಿಗೆ ಒತ್ತಿ ಆನ್ ಗುಂಡಿ
ಬೆಳ್ಳಿ ಪರದೆ ಮೂಡಿತು ನೋಡಿ

ಇದಕ್ಕೆ ಹೇಳುವರು ಮೌಸೆಂದು
ಗಣಪತಿ ವಾಹನ ಇಲಿಯೆಂದು

ಕನ್ನಡ ನುಡಿ ಫಾಂಟಾವನ್ನು
ಗಣಕ ಪರಿಷತ್ತು ನೀಡಿದೆ.

ಕನ್ನಡ ನುಡಿಯ ಅಕ್ಷರಧಾಮ
ಇಲ್ಲಿವೆ ನೋಡಿ ಗಿಣಿ ರಾಮ

ಪತ್ರ ಲೇಖನ ಪದ್ಯಗಳನ್ನು
ಬರೆಯಬಹುದು ಬೇಕಾದಷ್ಟನ್ನು

ತಪ್ಪಾದರೆ ಡಿಲೀಟು ಬಟನ್ ಒತ್ತಲು
ಅಳಿಸಿ ಹೋಗುವುದು ಬರೆದುದೆಲ್ಲ

ಇಂಕು ಚೀತ್ಕಾಟ ಏನೂ ಇಲ್ಲ
ನೋಡಲು ಖುಷಿಯು ತೀರದಲ್ಲ

ಒಂದು ಹಾಳೆಯ ತಯಾರಿಕೆಗೆ
ಮರವೊಂದು ಸರಿವುದು ತೆರೆಗೆ

ಕಂಪ್ಯುಟರ್ ಬಳಕೆ ಮಾಡಿದರೆ
ಉಳಿವದು ಅರಣ್ಯ ನಮ್ಮ ಪಾಲಿಗೆ

ಪ್ರಾಣಿ ಪಕ್ಷಿ ನದಿ ಸಸ್ಯ ಉಳಿವಿಗೆ
ಬೇಕು ವನ ವನ ನಮ್ಮ ಬಾಳಿಗೆ

ಕಂಪ್ಯುಟರ್‌ದಿಂದ ಸುದ್ದಿಯನು
ಕಳಿಸಬಹುದೆಲ್ಲೆಡೆ ಕ್ಷಣದಲಿ

ಅಂಚೆ-ಗಿಂಚೆ ಬೇಕಿಲ್ಲ
ವಿಳಂಬ ಮಾತೇ ಇಲ್ಲ.

ಬಹೂಪಯೋಗಿ ಕಂಪ್ಯುಟರ್ ಜಾಲ
ನಮ್ಮಯ ಬದುಕಿನ ಊರುಗೋಲು
*****
೨೭.೦೯.೨೦೧೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೀತಾಚಾರ್‍ಯ
Next post ಎಷ್ಟೊಂದು ಅಬ್ಬರ, ಎಷ್ಟೊಂದು ನೊರೆ ತೆರೆ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…