ಗೀತಾಚಾರ್‍ಯ

ಅರ್‍ಜುನನ ಹೃದಯದಲಿ ಪ್ರತಿಬಿಂಬಿಸಿದ ದೇವ
ಪರ್ಜನ್ಯನೊಲು ಆತ್ಮ ಸುಜ್ಞಾನಗಳ ತಿಳಿವ
ನಿರ್ಜೀವರಾದೆಮಗೆ ಧಾರೆಯೆರೆದೀ ಜಳವ
ವರ್ಜಿಸಿದೆ ಬೋಧಿಸುತ ನಿನ್ನ ವಚನಾಮೃತವ.

ಸೌಜನ್ಯ ಬೆಳೆ ಬಿತ್ತಿ ಬೆಳೆದೇರಿ ಪೂಫಲವ
ನಾರ್ಜಿಸಿದೆವಾವಿಂದು ನಿನ್ನ ಕೃಪೆಯಿಂದೋಲವ
ಪೂಜ್ಯಮಾದುದು ಸವಿದು ಗೀತಾ ಸುಧಾರಸವ.

ಒಂದೊಂದು ಮಾತಿನಲಿ ಹೃದಯವನೆ ತೆರೆಯಿಸುವೆ
ಎಂದೆಂದು ಮರೆಯದೊಲು ಸವಿಮಾತನಾಡಿರುವೆ
ಅಂದಿನಿನ್ನಿನ್ನೆವರ ಮುಂದೆಯುಂ ಸೊಗಯಿಸುವೆ
ಹಂದೆಗಳ ಹೇಡಿಗಳ ಹುರಿಮಾಡಿ ಮೆರೆಯಿಸುವೆ

ಮಂದಾರಮನ್ನಿತ್ತು ಲೋಕಮಂ ಬೆಳಗಿರುವೆ
ನಂದನೋದ್ಯಾನವನೆ ಜಗದ ಮೇಲಿಟ್ಟಿರುವೆ
ತಂದೆಯಲ್ಲಿಹುದೆಲ್ಲ ಸುರಭಿ – ಕಲ್ಪದ್ರುಮವೆ.

ಧರೆಯು ಕೆರ್‍ಚನು ಮರೆತು ಮೌಢ್ಯಮೇ ಪೆರ್ಚು ತಿರೆ
ಸರುವಕುಂ ತಾನು ಹೊಣೆಯನ ಗರುವ ಮೂಡುತಿರೆ
ಧರುಮ ಕರುಮಗಳಳತಯೇನೊಂದನರಿಯದಿರೆ
ಮೊರೆಯುತಿದೆ ನಿನ್ನಮೃತವಾಣತಾಮರೆಯದಿರೆ

ಕರುಣದಿಂದೀಕ್ಷಿಸಿದೆ ಕಲಿಯುಗವ ನೀನರರೆ
ಸರುವ ಲೋಕದೊಳೆಂದು ಮಾಸದಿಹ ಧರುಮ ಕರೆ
ಪರಮಪಾವನ ಶರಣು ಇರಲಿರಲಿ ಕೃಪೆಯ ಮರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಗಿದ ಕನಸುಗಳು
Next post ಕಂಪ್ಯುಟರ್

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys