ಗೀತಾಚಾರ್‍ಯ

ಅರ್‍ಜುನನ ಹೃದಯದಲಿ ಪ್ರತಿಬಿಂಬಿಸಿದ ದೇವ
ಪರ್ಜನ್ಯನೊಲು ಆತ್ಮ ಸುಜ್ಞಾನಗಳ ತಿಳಿವ
ನಿರ್ಜೀವರಾದೆಮಗೆ ಧಾರೆಯೆರೆದೀ ಜಳವ
ವರ್ಜಿಸಿದೆ ಬೋಧಿಸುತ ನಿನ್ನ ವಚನಾಮೃತವ.

ಸೌಜನ್ಯ ಬೆಳೆ ಬಿತ್ತಿ ಬೆಳೆದೇರಿ ಪೂಫಲವ
ನಾರ್ಜಿಸಿದೆವಾವಿಂದು ನಿನ್ನ ಕೃಪೆಯಿಂದೋಲವ
ಪೂಜ್ಯಮಾದುದು ಸವಿದು ಗೀತಾ ಸುಧಾರಸವ.

ಒಂದೊಂದು ಮಾತಿನಲಿ ಹೃದಯವನೆ ತೆರೆಯಿಸುವೆ
ಎಂದೆಂದು ಮರೆಯದೊಲು ಸವಿಮಾತನಾಡಿರುವೆ
ಅಂದಿನಿನ್ನಿನ್ನೆವರ ಮುಂದೆಯುಂ ಸೊಗಯಿಸುವೆ
ಹಂದೆಗಳ ಹೇಡಿಗಳ ಹುರಿಮಾಡಿ ಮೆರೆಯಿಸುವೆ

ಮಂದಾರಮನ್ನಿತ್ತು ಲೋಕಮಂ ಬೆಳಗಿರುವೆ
ನಂದನೋದ್ಯಾನವನೆ ಜಗದ ಮೇಲಿಟ್ಟಿರುವೆ
ತಂದೆಯಲ್ಲಿಹುದೆಲ್ಲ ಸುರಭಿ – ಕಲ್ಪದ್ರುಮವೆ.

ಧರೆಯು ಕೆರ್‍ಚನು ಮರೆತು ಮೌಢ್ಯಮೇ ಪೆರ್ಚು ತಿರೆ
ಸರುವಕುಂ ತಾನು ಹೊಣೆಯನ ಗರುವ ಮೂಡುತಿರೆ
ಧರುಮ ಕರುಮಗಳಳತಯೇನೊಂದನರಿಯದಿರೆ
ಮೊರೆಯುತಿದೆ ನಿನ್ನಮೃತವಾಣತಾಮರೆಯದಿರೆ

ಕರುಣದಿಂದೀಕ್ಷಿಸಿದೆ ಕಲಿಯುಗವ ನೀನರರೆ
ಸರುವ ಲೋಕದೊಳೆಂದು ಮಾಸದಿಹ ಧರುಮ ಕರೆ
ಪರಮಪಾವನ ಶರಣು ಇರಲಿರಲಿ ಕೃಪೆಯ ಮರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಗಿದ ಕನಸುಗಳು
Next post ಕಂಪ್ಯುಟರ್

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…