ಮಾಗಿದ ಕನಸುಗಳು

ನನ್ನ ಬಾಗಿ ಕಾಮನಬಿಲಾದ ಬೆನ್ನು
ಗುಳಿಬಿದ್ದ ಕಣ್ಣು ಸುಕ್ಕುಗಟ್ಟಿ
ಗೆರೆಮೂಡಿ ಮಾಗಿದ ಮುಖ
ನಡುಗುತ್ತಿರುವ ಕೈಗಳಲ್ಲಿ
ನನ್ನ ಕನಸಿನ ವಸಂತಗಳನ್ನು
ಭದ್ರವಾಗಿ ಹಿಡಿದಿಡಲು
ನಿರಂತರ ತವಕಿಸುತ್ತೇನೆ.

ನನ್ನವನ ಪ್ರೀತಿ ತುಂಬಿದ ಪತ್ರಗಳನ್ನು
ಹಳೆಯ ಪೆಟ್ಟಿಗೆಯಿಂದ ಹೊರತೆಗೆದು
ಪ್ರೀತಿಯಿಂದ ನಡುಗುವ ಕೈ ಸವರಿ
ಆತ್ಮೀಯವಾಗಿ ಓದಿದಾಗ ಹಸಿರಾಗುತ್ತೇನೆ.
ಎಪ್ಪತ್ತರ ಅಂಚಿನಲ್ಲಿಯೂ ನಾನು
ಇಪ್ಪತ್ತರ ಹರೆಯ ಅನುಭವಿಸುತ್ತೇನೆ.

ದಿನಗಳು ಉರುಳಿ – ನೆರಳು ಬೆಳಕಿನಾಟ
ಕಾಲದ ಭೂತದಲ್ಲಿ ಹುಗಿದ ನೆನಪುಗಳು
ನೆನಪಿನಾಳದಲಿ ಹೂತ ಅಮರ ಪತ್ರಗಳು
ನನ್ನ ಕಣ್ಣು ರೆಪ್ಪೆಯಲ್ಲಿ ಬಚ್ಚಿಟ್ಟ
ಅಸಂಖ್ಯ ಅರ್ಥಗಳು – ಕಥೆಗಳು

ಮುಚ್ಚಿದ ನನ್ನ ಕಣ್ಣುಗಳಿಂದ
ಘಮ್ಮೆಂದು ಹೊರಸೂಸುವ
ಆತ್ಮದ ಅನುಭವದ ಸುಗಂಧ ಪರಿಮಳ
ಪಕ್ಕೆಗೂಡುಗಳ ಮೇಲೆ ತೇಲುವ
ಎಲುಬಿನ ಬರೀ ಹಂದರದಲಿ
ಕನಸಿನ ನಕ್ಷತ್ರಗಳ ಲೋಕವಿದೆ
ಭವಿಷ್ಯತ್ತಿನಲಿ ಹೊಸ ನಿರ್ಮಾಣ
ಕಾಣಲು ತವಕಿಸುವ ಹಂಬಲವಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕ ನೀ ನೋಡಬೇಕೆ
Next post ಗೀತಾಚಾರ್‍ಯ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys