ಯಾವುದೇ ಪಯಣ
ಗೊತ್ತಿಲ್ಲ ಗುರಿಯಿಲ್ಲ
ಆದಿಯೆಲ್ಲಿ? ಅಂತ್ಯವೆಲ್ಲಿ?
ಸಾಗಿದೆ ತಿಳಿಯಲಾಗದ
ಲೋಕಕೆ, ಮಾಯಾಲೋಕಕೆ
ಬದುಕಿದು ಬರೀ ಬೆರಗು
ಕಣ್ಣು ಕಟ್ಟು ಆಟದ ಮೆರಗು
ಅರಿತವರಿಲ್ಲ ಸೃಷ್ಟಿಯ ಮೂಲ
ನದೀ ಮೂಲ ಋಷಿ ಮೂಲ
ಹಾಗೆಯೇ ದೇವ ಮೂಲ.
ಹತ್ತುವರು ಇಳಿಯುವರು
ಪಯಣದಲಿ ಜೊತೆಯಾಗುವರು
ಸಂಬಂಧಗಳ ಬೆಸೆಯುವರು
ಸ್ನೇಹಪ್ರೀತಿ ಮೋಹ ಮಮಕಾರ
ಬಿಡಿಸಲಾಗದ ಭಾವಗಳ ಮಹಾಪೂರ.
ಎತ್ತ ಒಯ್ಯುತಿದೆ ಪಯಣಿಗರನೆಲ್ಲ
ಇಳಿದವರು ಮತ್ತೆ ಹತ್ತಲಿಲ್ಲ
ಎಲ್ಲಿ ಹೋದರು? ಎತ್ತ ಹೋದರು?
ಮಿಂಚಿನಂತೆ ಸುಳಿದು ಮಾಯ
ಯಾವುದದು ಹೊಸ ಲೋಕ
ನಾಕವೋ ನರಕ
ಒಬ್ಬರಾದರೂ ಬಂದು ಹೇಳಲಿಲ್ಲ.
ನಿರೀಕ್ಷೆಯಲಿ ಸಾಗುತಿದೆ ಜಗವೆಲ್ಲ.
*****
Related Post
ಸಣ್ಣ ಕತೆ
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
-
ಅಜ್ಜಿಯ ಪ್ರೇಮ
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…
-
ತೊಳೆದ ಮುತ್ತು
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…