ವಚನ ವಿಚಾರ – ಕಲ್ಲಿನಲಿ ಕಠಿಣ

ವಚನ ವಿಚಾರ – ಕಲ್ಲಿನಲಿ ಕಠಿಣ

ಕಲ್ಲಿನಲ್ಲಿ ಕಠಿಣ
ಖುಲ್ಲರಲ್ಲಿ ದುರ್ಗುಣ
ಬಲ್ಲವರಲ್ಲಿ ಸುಗುಣ
ಉಂಟೆಂದೆಲ್ಲರೂ ಬಲ್ಲರು
ಇಂತೀ ಇವು ಎಲ್ಲರ ಗುಣ
ಅಲ್ಲಿಗಲ್ಲಿಗೆ ಸರಿಯೆಂದು ಗೆಲ್ಲ ಸೋಲಕ್ಕೆ ಹೋರದೆ
ನಿಜವೆಲ್ಲಿತ್ತು ಅಲ್ಲಿಯೆ ಸುಖವೆಂದನಂಬಿಗ ಚೌಡಯ್ಯ

[ಖುಲ್ಲರಲ್ಲಿ-ದುಷ್ಟರಲ್ಲಿ]

ಅಂಬಿಗ ಚೌಡಯ್ಯನ ವಚನ. ಕಲ್ಲಿನಲ್ಲಿ ಕಾಠಿಣ್ಯವಿದೆ, ಕೆಟ್ಟವರಲ್ಲಿ ದುರ್ಗುಣ ಇದೆ, ಬಲ್ಲವರಲ್ಲಿ ಸದ್ಗುಣ ಇದೆ ಅನ್ನುವುದು ಎಲ್ಲರಿಗೂ ಗೊತ್ತಲ್ಲವೇ? ಸರಿ ಮತ್ತೆ. ಸರಿ, ತಪ್ಪು ಎಂಬ ಹೋರಾಟವೇಕೆ? ಇರುವ ನಿಜವನ್ನು ಇರುವಂತೆ ಒಪ್ಪಿದಾಗಲೇ ಸುಖ ಅಲ್ಲವೇ?

ಗೆಲ್ಲುವ ಹಟ ಇದೆಯಲ್ಲ ಅದೇ ಸುಖಕ್ಕೆ ತೊಡಕು. ಲೋಕವನ್ನು ಬದಲಾಯಿಸಬೇಕೆಂಬ ಹಟವೂ ಅಷ್ಟೇ. ಎರಡೂ ಹೋರಾಟಗಳೇ. ಹೋರಾಟ ಇದ್ದಾಗ ಸುಖ ಎಲ್ಲಿರುತ್ತದೆ. `ಅಲ್ಲಿಗಲ್ಲಿಗೆ ಸರಿ’ ಇರುವುದೆಲ್ಲ ಇರುವ ಹಾಗೆ ಇದೆ, ಅದೇ ಸತ್ಯ ಎಂದು ಒಪ್ಪಿಕೊಂಡರೆ ಸಾಕು. ಆದರೆ ಅದೇ ಅತ್ಯಂತ ಕಷ್ಟದ ಕೆಲಸವೂ ಹೌದಲ್ಲವೇ? ನಮ್ಮ ಶಿಕ್ಷಣ, ಸಂಸ್ಕೃತಿ, ಧರ್ಮ ಎಲ್ಲವೂ ಇರುವುದನ್ನು ಇನ್ನು ಹೇಗೋ ಮಾಡಲು ಪ್ರಯತ್ನಿಸುವುದನ್ನೇ ಕಲಿಸುತ್ತವೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದ್ರುಪದನ ಗರ್ವಭಂಗ
Next post ಪಯಣ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…