ಉರಿಯುತ್ತಿದೆ ಬೆಂಕಿ
ಧಗಧಗ
ಕೆನ್ನಾಲಿಗೆಯ ಚಾಚಿ
ಭಗ ಭಗ
ಮುಗಿಲೆತ್ತರ ವ್ಯಾಪಿಸಿ
ಆಕ್ರಮಿಸುತ್ತಿದೆ ಉದ್ದಗಲ
ನೋಡಲೆಷ್ಟು ಚೆನ್ನ
ಸಪ್ತ ವರ್ಣಗಳ ನರ್ತನ
ಕಣ್ತುಂಬಿಸಿ ಮನ ತುಂಬಿಸಿ
ಆನಂದಿಸುವ ಪರಿ
ಕೇಕೆ ಹಾಕಿದ ಕೂಗಿಗೆ
ಮುಗಿಲಲ್ಲಿ ಪ್ರತಿಧ್ವನಿ
ಒಬ್ಬರಿಗಾದರೂ ಇಲ್ಲ ಬೆಂಕಿ
ಆರಿಸುವ ಎದೆಗಾರಿಕೆ.
ಉರಿವ ಬೆಂಕಿಗೆ ತುಪ್ಪ
ಸುರಿದು ಮೈ ಕಾಯಿಸುವ ಉನ್ಮಾದ
ಬೆಂಕಿ ಹತ್ತಿದಾದರೂ ಹೇಗೆ?
ಯಾರು ಹೊತ್ತಿಸಿದರೋ
ಯಾಕೆ ಹತ್ತಿಸಿದರೋ
ಅರಿಯುವುದಾದರೂ ಎಲ್ಲಿ?
ಋಷಿ ಮೂಲ, ನದಿ ಮೂಲ
ಬೆಂಕಿಯ ಮೂಲ
ಅರಿಯದಿರುವುದೇ ಜಾಣತನ.
*****
Related Post
ಸಣ್ಣ ಕತೆ
-
ಅಹಮ್ ಬ್ರಹ್ಮಾಸ್ಮಿ
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…
-
ಜೀವಂತವಾಗಿ…ಸ್ಮಶಾನದಲ್ಲಿ…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
-
ಸಾವು
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…