ಅಮರ

ಈಗ ಆಗ ಹಗಲು ಇರುಳು
ಒಂದೊಂದು ಮುಖ ಚಹರೆ,
ಬೀದಿಯ ರಚ್ಚೆಯ ಮಾತುಗಳು,
ಘಟಿತ ಚರಿತ್ರೆಯ ಸಾಲುಗಳು,
ಒಳ ಹೊರಗೆ ಗೊತ್ತಿಲ್ಲದ ಗೊಂದಲ.

ಕತ್ತಲೆಯೊಳಗೆ ಬೆಳಕ ಕಿರಣಗಳು,
ತಾನು ತನ್ನದೆಂಬ ಮೋಹ ಕಳಚಿದ
ಅನುಭವ ಮಂಟಪದ ಅಕ್ಕ ಆಲಿಸಿದಳು.
ನಿರ್ಣಯವಿಲ್ಲದ ನಿರಾಕಾರದ ಗಡಿಬಿಡಿ
ಮತಿನಂತಿಲ್ಲ ಘನದ ಪರಿ ಮಹಾ ಕಗ್ಗಂಟು

ಸಾವನರಿಯದ ಲೋಕದ ಗಜಿಬಿಜಿ
ಸಂತೆಯಲಿ ಅರೆಮರುಳುಗಳ ಅರಿವು,
ಅಕ್ಷರಗಳ ಸರ್ವವ್ಯಾಪ್ತಿ ಸರ್ವ ವಿದ್ಯೆ
ಬುದ್ಧಿಯನರಿಯದ ಪ್ರಾಣಿ ವಿಚಾರ
ಬಯಲು ತುಂಬ ಸರಳ ಮಂಜಿನ ಕಾಳಗತ್ತಲೆ,

ಲಾಂಛನ ಹೊತ್ತವರು, ರಂಜಕನೂ ಭುಂಜಕನೂ
ತೊಳಲಿ ಬಳಲಿ ಸವೆದ ದಾರಿಯ ತುಂಬ.
ಕಲ್ಲು ಮುಳ್ಳುಗಳು ಮಾಯದ ಹುಣ್ಣು ಹತ್ತಿ.
ಸೋರೆಯ ಬಣ್ಣದ ಹಿರಿಯರು ಯುಗ ಯುಗ
ಬಲ್ಲೆನೆಂದು ಬೀಗುವರು ನಿಮ್ಮನ್ನು ಎತ್ತ ಅರಿವರು.

ಅವರಿವರ ಜಗ ಬರಡು, ಅವರಿವರ ಯೋಗ
ಭಂಗ, ಸಂಗದ ಸುಖ ಅರಿಯದವರ ಭಂಗಿ,
ಭ್ರಾಂತಿ ಭ್ರಮೆಯಲಿ ಬಳಲುತ್ತಿರಲು ಅಜ್ಞಾನಿಗೆ,
ಮುಂದಣ ಸೂಕ್ಷ್ಮ ಕಾಣುವ ಪರಿಧಿಯೊಳಗೆ
ನಾನು ನಿನ್ನಲ್ಲಿ ಒಂದಾಗಿ ಕಾಂತಿಯುತ
ಬೆಳಗು ಕಂಡೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡಾಂಬೆ ಮೆರವಣಿಗೆ
Next post ಜರಾಸಂಧ ಸಂಹಾರ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…