ಅಮರ

ಈಗ ಆಗ ಹಗಲು ಇರುಳು
ಒಂದೊಂದು ಮುಖ ಚಹರೆ,
ಬೀದಿಯ ರಚ್ಚೆಯ ಮಾತುಗಳು,
ಘಟಿತ ಚರಿತ್ರೆಯ ಸಾಲುಗಳು,
ಒಳ ಹೊರಗೆ ಗೊತ್ತಿಲ್ಲದ ಗೊಂದಲ.

ಕತ್ತಲೆಯೊಳಗೆ ಬೆಳಕ ಕಿರಣಗಳು,
ತಾನು ತನ್ನದೆಂಬ ಮೋಹ ಕಳಚಿದ
ಅನುಭವ ಮಂಟಪದ ಅಕ್ಕ ಆಲಿಸಿದಳು.
ನಿರ್ಣಯವಿಲ್ಲದ ನಿರಾಕಾರದ ಗಡಿಬಿಡಿ
ಮತಿನಂತಿಲ್ಲ ಘನದ ಪರಿ ಮಹಾ ಕಗ್ಗಂಟು

ಸಾವನರಿಯದ ಲೋಕದ ಗಜಿಬಿಜಿ
ಸಂತೆಯಲಿ ಅರೆಮರುಳುಗಳ ಅರಿವು,
ಅಕ್ಷರಗಳ ಸರ್ವವ್ಯಾಪ್ತಿ ಸರ್ವ ವಿದ್ಯೆ
ಬುದ್ಧಿಯನರಿಯದ ಪ್ರಾಣಿ ವಿಚಾರ
ಬಯಲು ತುಂಬ ಸರಳ ಮಂಜಿನ ಕಾಳಗತ್ತಲೆ,

ಲಾಂಛನ ಹೊತ್ತವರು, ರಂಜಕನೂ ಭುಂಜಕನೂ
ತೊಳಲಿ ಬಳಲಿ ಸವೆದ ದಾರಿಯ ತುಂಬ.
ಕಲ್ಲು ಮುಳ್ಳುಗಳು ಮಾಯದ ಹುಣ್ಣು ಹತ್ತಿ.
ಸೋರೆಯ ಬಣ್ಣದ ಹಿರಿಯರು ಯುಗ ಯುಗ
ಬಲ್ಲೆನೆಂದು ಬೀಗುವರು ನಿಮ್ಮನ್ನು ಎತ್ತ ಅರಿವರು.

ಅವರಿವರ ಜಗ ಬರಡು, ಅವರಿವರ ಯೋಗ
ಭಂಗ, ಸಂಗದ ಸುಖ ಅರಿಯದವರ ಭಂಗಿ,
ಭ್ರಾಂತಿ ಭ್ರಮೆಯಲಿ ಬಳಲುತ್ತಿರಲು ಅಜ್ಞಾನಿಗೆ,
ಮುಂದಣ ಸೂಕ್ಷ್ಮ ಕಾಣುವ ಪರಿಧಿಯೊಳಗೆ
ನಾನು ನಿನ್ನಲ್ಲಿ ಒಂದಾಗಿ ಕಾಂತಿಯುತ
ಬೆಳಗು ಕಂಡೆ.
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...