ಅಮರ

ಈಗ ಆಗ ಹಗಲು ಇರುಳು
ಒಂದೊಂದು ಮುಖ ಚಹರೆ,
ಬೀದಿಯ ರಚ್ಚೆಯ ಮಾತುಗಳು,
ಘಟಿತ ಚರಿತ್ರೆಯ ಸಾಲುಗಳು,
ಒಳ ಹೊರಗೆ ಗೊತ್ತಿಲ್ಲದ ಗೊಂದಲ.

ಕತ್ತಲೆಯೊಳಗೆ ಬೆಳಕ ಕಿರಣಗಳು,
ತಾನು ತನ್ನದೆಂಬ ಮೋಹ ಕಳಚಿದ
ಅನುಭವ ಮಂಟಪದ ಅಕ್ಕ ಆಲಿಸಿದಳು.
ನಿರ್ಣಯವಿಲ್ಲದ ನಿರಾಕಾರದ ಗಡಿಬಿಡಿ
ಮತಿನಂತಿಲ್ಲ ಘನದ ಪರಿ ಮಹಾ ಕಗ್ಗಂಟು

ಸಾವನರಿಯದ ಲೋಕದ ಗಜಿಬಿಜಿ
ಸಂತೆಯಲಿ ಅರೆಮರುಳುಗಳ ಅರಿವು,
ಅಕ್ಷರಗಳ ಸರ್ವವ್ಯಾಪ್ತಿ ಸರ್ವ ವಿದ್ಯೆ
ಬುದ್ಧಿಯನರಿಯದ ಪ್ರಾಣಿ ವಿಚಾರ
ಬಯಲು ತುಂಬ ಸರಳ ಮಂಜಿನ ಕಾಳಗತ್ತಲೆ,

ಲಾಂಛನ ಹೊತ್ತವರು, ರಂಜಕನೂ ಭುಂಜಕನೂ
ತೊಳಲಿ ಬಳಲಿ ಸವೆದ ದಾರಿಯ ತುಂಬ.
ಕಲ್ಲು ಮುಳ್ಳುಗಳು ಮಾಯದ ಹುಣ್ಣು ಹತ್ತಿ.
ಸೋರೆಯ ಬಣ್ಣದ ಹಿರಿಯರು ಯುಗ ಯುಗ
ಬಲ್ಲೆನೆಂದು ಬೀಗುವರು ನಿಮ್ಮನ್ನು ಎತ್ತ ಅರಿವರು.

ಅವರಿವರ ಜಗ ಬರಡು, ಅವರಿವರ ಯೋಗ
ಭಂಗ, ಸಂಗದ ಸುಖ ಅರಿಯದವರ ಭಂಗಿ,
ಭ್ರಾಂತಿ ಭ್ರಮೆಯಲಿ ಬಳಲುತ್ತಿರಲು ಅಜ್ಞಾನಿಗೆ,
ಮುಂದಣ ಸೂಕ್ಷ್ಮ ಕಾಣುವ ಪರಿಧಿಯೊಳಗೆ
ನಾನು ನಿನ್ನಲ್ಲಿ ಒಂದಾಗಿ ಕಾಂತಿಯುತ
ಬೆಳಗು ಕಂಡೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...