ಅಮರ

ಈಗ ಆಗ ಹಗಲು ಇರುಳು
ಒಂದೊಂದು ಮುಖ ಚಹರೆ,
ಬೀದಿಯ ರಚ್ಚೆಯ ಮಾತುಗಳು,
ಘಟಿತ ಚರಿತ್ರೆಯ ಸಾಲುಗಳು,
ಒಳ ಹೊರಗೆ ಗೊತ್ತಿಲ್ಲದ ಗೊಂದಲ.

ಕತ್ತಲೆಯೊಳಗೆ ಬೆಳಕ ಕಿರಣಗಳು,
ತಾನು ತನ್ನದೆಂಬ ಮೋಹ ಕಳಚಿದ
ಅನುಭವ ಮಂಟಪದ ಅಕ್ಕ ಆಲಿಸಿದಳು.
ನಿರ್ಣಯವಿಲ್ಲದ ನಿರಾಕಾರದ ಗಡಿಬಿಡಿ
ಮತಿನಂತಿಲ್ಲ ಘನದ ಪರಿ ಮಹಾ ಕಗ್ಗಂಟು

ಸಾವನರಿಯದ ಲೋಕದ ಗಜಿಬಿಜಿ
ಸಂತೆಯಲಿ ಅರೆಮರುಳುಗಳ ಅರಿವು,
ಅಕ್ಷರಗಳ ಸರ್ವವ್ಯಾಪ್ತಿ ಸರ್ವ ವಿದ್ಯೆ
ಬುದ್ಧಿಯನರಿಯದ ಪ್ರಾಣಿ ವಿಚಾರ
ಬಯಲು ತುಂಬ ಸರಳ ಮಂಜಿನ ಕಾಳಗತ್ತಲೆ,

ಲಾಂಛನ ಹೊತ್ತವರು, ರಂಜಕನೂ ಭುಂಜಕನೂ
ತೊಳಲಿ ಬಳಲಿ ಸವೆದ ದಾರಿಯ ತುಂಬ.
ಕಲ್ಲು ಮುಳ್ಳುಗಳು ಮಾಯದ ಹುಣ್ಣು ಹತ್ತಿ.
ಸೋರೆಯ ಬಣ್ಣದ ಹಿರಿಯರು ಯುಗ ಯುಗ
ಬಲ್ಲೆನೆಂದು ಬೀಗುವರು ನಿಮ್ಮನ್ನು ಎತ್ತ ಅರಿವರು.

ಅವರಿವರ ಜಗ ಬರಡು, ಅವರಿವರ ಯೋಗ
ಭಂಗ, ಸಂಗದ ಸುಖ ಅರಿಯದವರ ಭಂಗಿ,
ಭ್ರಾಂತಿ ಭ್ರಮೆಯಲಿ ಬಳಲುತ್ತಿರಲು ಅಜ್ಞಾನಿಗೆ,
ಮುಂದಣ ಸೂಕ್ಷ್ಮ ಕಾಣುವ ಪರಿಧಿಯೊಳಗೆ
ನಾನು ನಿನ್ನಲ್ಲಿ ಒಂದಾಗಿ ಕಾಂತಿಯುತ
ಬೆಳಗು ಕಂಡೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...