ಕನ್ನಡಾಂಬೆ ಮೆರವಣಿಗೆ

ಹೊರಟೈತೆ ಮೆರವಣಿಗೆ
ನಮ್ಮೂರಿಗೆ ಭೂದೇವಿ
ಸಿರಿದೇವಿ ವನದೇವಿ
ಮುತ್ತಿನಾರತಿ ಎತ್ತಿರೆ ಕನ್ನಡಾಂಬೆಗೆ ||

ಬರುತಾಳೆ ಕಾವೇರಮ್ಮ
ಕಾಲ್ ತೊಳೆಯೆ ನಿನ್ನ ….
ನಿನ್ನ ಮಕ್ಕಳ ಹರಸಮ್ಮ
ಜಗದಾಂಬೆ ಕನ್ನಡಾಂಬೆಯೆ ||

ನಿನ್ನ ಹೃದಯಂಗಳದಿ
ಹಸಿರ ತಂಪೆರೆಯಲಿ
ಹೋಲಗದ್ದೆಗಳೆ ಗುಡಿಗೋಪುರ
ರೈತ ಹೈಕಳ ಜೋಡಿ ನಿನ್ನ ಪೂಜಾರಿ
ನೇಗಿಲು ಹಲುಬೆಗಳೆ ಪೂಜಾಸಾಮಗ್ರಿ

ಹೂಗೊಂಚಲ ತರುಲತೆ ಶೃಂಗಾರಾಭರಣ
ಸೂರ್‍ಯ ಚಂದ್ರರೆ ಕರ್‍ಣದೋಲೆಗಳು
ಬೆಳ್ಳಿ ಶಿಖರಗಳೇ ಕಿರೀಟವು
ಮುತ್ತೈದೆ ವೀರಗಾಥೆಯೆ ತಿಲಕ

ಪಚ್ಚೆತೆನೆ ಧವಸಧಾನ್ಯ ನೈವೇದ್ಯ
ಕಬ್ಬಿನ ಜಲ್ಲೆ ಜೇನ ಕಣ ಅಭಿಷೇಕಾಮೃತ
ನಿನ್ನ ಮಕ್ಕಳ ಬೆವರ ಹನಿಯೆ
ಭಕ್ತಿಯ ಸ್ಮರಣೆ ಕರ್‍ಪೂರದಾರತಿ ||

ಇಳಿಯೆಂಬ ಹೊಸ್ತಿಲಲ್ಲಿ ಅಂಬರವೇ
ಪುಷ್ಪಕ ವಿಮಾನ ಲತಾಮಂಟಪ
ಸುಗ್ಗಿಯ ಸೊಬಗೇ ನಿನ್ನ ತೇರು
ಋತುಗಳೆ ತೇರನ್ನೆಳೆಯುವ ದಾತರು
ಸಂಸ್ಕೃತಿ ಸಂಪನ್ನಗಳೆ ಶ್ವೇತಾಂಬರ ರವಿಕೆ
ಶ್ರೀ ಗಂಧವೆ ಧೂಪ ತರಂಗಿಣಿ ಸೆಲೆಯೆ ತೀರ್‍ಥ

ಸಂವತ್ಸರಗಳೆ ನಿನಗೆ ಸುಪ್ರಭಾತ
ಸಂಧ್ಯಾರಾಗ ಸಮತಾಭಾವ ನಿನಗೋಕುಳಿ
ಸದ್ಗುಣ ಜ್ಞಾನಾರ್‍ಜನೆಯೆ ದೀವಿಗೆ
ಕೋಕಿಲ ಗಾನವೇ ಮಂತ್ರಾರ್‍ಚನೆ
ಪವನದೇವ ಪಂಖ ಬೀಸಲು ||

ಕೊಂಬು ಕಂಸಾಳೆ ಡೋಲು
ದುಡಿ ಮದ್ದಲೆ ದುಂದುಭಿ
ನಾಗಸ್ವರ ಮೇಳ ಹಿಮ್ಮೇಳವು
ದೇವ ಕಿನ್ನರಿ ಜವ್ವನೆಯರ ನರ್ತನ
ವೈಭವದಿಂದ ಬರುತಿರೆ ಮೆರವಣಿಗೆ ||

ನೋಡಲು ಕಣ್ಣುಗಳು ಸಾಲದಮ್ಮ
ನಿನ್ನ ವರ್‍ಣಿಸಲು ಅಸದಳವು
ಮುತ್ತೈದೆಯರು ಮುತ್ತಿನಾರತಿ ಎತ್ತಿರೆ
ತಾಯೆ ಸಿರಿದೇವಿಗೆ ತೇಲಿಬಾಗಿ
ನಮಿಸಿರೆ ಕನ್ನಡಾಂಬೆಗೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದ್ಧರಿಸು
Next post ಅಮರ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys