Home / ಕವನ / ಕವಿತೆ / ಕನ್ನಡಾಂಬೆ ಮೆರವಣಿಗೆ

ಕನ್ನಡಾಂಬೆ ಮೆರವಣಿಗೆ

ಹೊರಟೈತೆ ಮೆರವಣಿಗೆ
ನಮ್ಮೂರಿಗೆ ಭೂದೇವಿ
ಸಿರಿದೇವಿ ವನದೇವಿ
ಮುತ್ತಿನಾರತಿ ಎತ್ತಿರೆ ಕನ್ನಡಾಂಬೆಗೆ ||

ಬರುತಾಳೆ ಕಾವೇರಮ್ಮ
ಕಾಲ್ ತೊಳೆಯೆ ನಿನ್ನ ….
ನಿನ್ನ ಮಕ್ಕಳ ಹರಸಮ್ಮ
ಜಗದಾಂಬೆ ಕನ್ನಡಾಂಬೆಯೆ ||

ನಿನ್ನ ಹೃದಯಂಗಳದಿ
ಹಸಿರ ತಂಪೆರೆಯಲಿ
ಹೋಲಗದ್ದೆಗಳೆ ಗುಡಿಗೋಪುರ
ರೈತ ಹೈಕಳ ಜೋಡಿ ನಿನ್ನ ಪೂಜಾರಿ
ನೇಗಿಲು ಹಲುಬೆಗಳೆ ಪೂಜಾಸಾಮಗ್ರಿ

ಹೂಗೊಂಚಲ ತರುಲತೆ ಶೃಂಗಾರಾಭರಣ
ಸೂರ್‍ಯ ಚಂದ್ರರೆ ಕರ್‍ಣದೋಲೆಗಳು
ಬೆಳ್ಳಿ ಶಿಖರಗಳೇ ಕಿರೀಟವು
ಮುತ್ತೈದೆ ವೀರಗಾಥೆಯೆ ತಿಲಕ

ಪಚ್ಚೆತೆನೆ ಧವಸಧಾನ್ಯ ನೈವೇದ್ಯ
ಕಬ್ಬಿನ ಜಲ್ಲೆ ಜೇನ ಕಣ ಅಭಿಷೇಕಾಮೃತ
ನಿನ್ನ ಮಕ್ಕಳ ಬೆವರ ಹನಿಯೆ
ಭಕ್ತಿಯ ಸ್ಮರಣೆ ಕರ್‍ಪೂರದಾರತಿ ||

ಇಳಿಯೆಂಬ ಹೊಸ್ತಿಲಲ್ಲಿ ಅಂಬರವೇ
ಪುಷ್ಪಕ ವಿಮಾನ ಲತಾಮಂಟಪ
ಸುಗ್ಗಿಯ ಸೊಬಗೇ ನಿನ್ನ ತೇರು
ಋತುಗಳೆ ತೇರನ್ನೆಳೆಯುವ ದಾತರು
ಸಂಸ್ಕೃತಿ ಸಂಪನ್ನಗಳೆ ಶ್ವೇತಾಂಬರ ರವಿಕೆ
ಶ್ರೀ ಗಂಧವೆ ಧೂಪ ತರಂಗಿಣಿ ಸೆಲೆಯೆ ತೀರ್‍ಥ

ಸಂವತ್ಸರಗಳೆ ನಿನಗೆ ಸುಪ್ರಭಾತ
ಸಂಧ್ಯಾರಾಗ ಸಮತಾಭಾವ ನಿನಗೋಕುಳಿ
ಸದ್ಗುಣ ಜ್ಞಾನಾರ್‍ಜನೆಯೆ ದೀವಿಗೆ
ಕೋಕಿಲ ಗಾನವೇ ಮಂತ್ರಾರ್‍ಚನೆ
ಪವನದೇವ ಪಂಖ ಬೀಸಲು ||

ಕೊಂಬು ಕಂಸಾಳೆ ಡೋಲು
ದುಡಿ ಮದ್ದಲೆ ದುಂದುಭಿ
ನಾಗಸ್ವರ ಮೇಳ ಹಿಮ್ಮೇಳವು
ದೇವ ಕಿನ್ನರಿ ಜವ್ವನೆಯರ ನರ್ತನ
ವೈಭವದಿಂದ ಬರುತಿರೆ ಮೆರವಣಿಗೆ ||

ನೋಡಲು ಕಣ್ಣುಗಳು ಸಾಲದಮ್ಮ
ನಿನ್ನ ವರ್‍ಣಿಸಲು ಅಸದಳವು
ಮುತ್ತೈದೆಯರು ಮುತ್ತಿನಾರತಿ ಎತ್ತಿರೆ
ತಾಯೆ ಸಿರಿದೇವಿಗೆ ತೇಲಿಬಾಗಿ
ನಮಿಸಿರೆ ಕನ್ನಡಾಂಬೆಗೆ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...