Home / ಕವನ / ಕವಿತೆ / ಕನ್ನಡಾಂಬೆ ಮೆರವಣಿಗೆ

ಕನ್ನಡಾಂಬೆ ಮೆರವಣಿಗೆ

ಹೊರಟೈತೆ ಮೆರವಣಿಗೆ
ನಮ್ಮೂರಿಗೆ ಭೂದೇವಿ
ಸಿರಿದೇವಿ ವನದೇವಿ
ಮುತ್ತಿನಾರತಿ ಎತ್ತಿರೆ ಕನ್ನಡಾಂಬೆಗೆ ||

ಬರುತಾಳೆ ಕಾವೇರಮ್ಮ
ಕಾಲ್ ತೊಳೆಯೆ ನಿನ್ನ ….
ನಿನ್ನ ಮಕ್ಕಳ ಹರಸಮ್ಮ
ಜಗದಾಂಬೆ ಕನ್ನಡಾಂಬೆಯೆ ||

ನಿನ್ನ ಹೃದಯಂಗಳದಿ
ಹಸಿರ ತಂಪೆರೆಯಲಿ
ಹೋಲಗದ್ದೆಗಳೆ ಗುಡಿಗೋಪುರ
ರೈತ ಹೈಕಳ ಜೋಡಿ ನಿನ್ನ ಪೂಜಾರಿ
ನೇಗಿಲು ಹಲುಬೆಗಳೆ ಪೂಜಾಸಾಮಗ್ರಿ

ಹೂಗೊಂಚಲ ತರುಲತೆ ಶೃಂಗಾರಾಭರಣ
ಸೂರ್‍ಯ ಚಂದ್ರರೆ ಕರ್‍ಣದೋಲೆಗಳು
ಬೆಳ್ಳಿ ಶಿಖರಗಳೇ ಕಿರೀಟವು
ಮುತ್ತೈದೆ ವೀರಗಾಥೆಯೆ ತಿಲಕ

ಪಚ್ಚೆತೆನೆ ಧವಸಧಾನ್ಯ ನೈವೇದ್ಯ
ಕಬ್ಬಿನ ಜಲ್ಲೆ ಜೇನ ಕಣ ಅಭಿಷೇಕಾಮೃತ
ನಿನ್ನ ಮಕ್ಕಳ ಬೆವರ ಹನಿಯೆ
ಭಕ್ತಿಯ ಸ್ಮರಣೆ ಕರ್‍ಪೂರದಾರತಿ ||

ಇಳಿಯೆಂಬ ಹೊಸ್ತಿಲಲ್ಲಿ ಅಂಬರವೇ
ಪುಷ್ಪಕ ವಿಮಾನ ಲತಾಮಂಟಪ
ಸುಗ್ಗಿಯ ಸೊಬಗೇ ನಿನ್ನ ತೇರು
ಋತುಗಳೆ ತೇರನ್ನೆಳೆಯುವ ದಾತರು
ಸಂಸ್ಕೃತಿ ಸಂಪನ್ನಗಳೆ ಶ್ವೇತಾಂಬರ ರವಿಕೆ
ಶ್ರೀ ಗಂಧವೆ ಧೂಪ ತರಂಗಿಣಿ ಸೆಲೆಯೆ ತೀರ್‍ಥ

ಸಂವತ್ಸರಗಳೆ ನಿನಗೆ ಸುಪ್ರಭಾತ
ಸಂಧ್ಯಾರಾಗ ಸಮತಾಭಾವ ನಿನಗೋಕುಳಿ
ಸದ್ಗುಣ ಜ್ಞಾನಾರ್‍ಜನೆಯೆ ದೀವಿಗೆ
ಕೋಕಿಲ ಗಾನವೇ ಮಂತ್ರಾರ್‍ಚನೆ
ಪವನದೇವ ಪಂಖ ಬೀಸಲು ||

ಕೊಂಬು ಕಂಸಾಳೆ ಡೋಲು
ದುಡಿ ಮದ್ದಲೆ ದುಂದುಭಿ
ನಾಗಸ್ವರ ಮೇಳ ಹಿಮ್ಮೇಳವು
ದೇವ ಕಿನ್ನರಿ ಜವ್ವನೆಯರ ನರ್ತನ
ವೈಭವದಿಂದ ಬರುತಿರೆ ಮೆರವಣಿಗೆ ||

ನೋಡಲು ಕಣ್ಣುಗಳು ಸಾಲದಮ್ಮ
ನಿನ್ನ ವರ್‍ಣಿಸಲು ಅಸದಳವು
ಮುತ್ತೈದೆಯರು ಮುತ್ತಿನಾರತಿ ಎತ್ತಿರೆ
ತಾಯೆ ಸಿರಿದೇವಿಗೆ ತೇಲಿಬಾಗಿ
ನಮಿಸಿರೆ ಕನ್ನಡಾಂಬೆಗೆ ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...