Home / ಕವನ / ಕವಿತೆ / ಕನ್ನಡಾಂಬೆ ಮೆರವಣಿಗೆ

ಕನ್ನಡಾಂಬೆ ಮೆರವಣಿಗೆ

ಹೊರಟೈತೆ ಮೆರವಣಿಗೆ
ನಮ್ಮೂರಿಗೆ ಭೂದೇವಿ
ಸಿರಿದೇವಿ ವನದೇವಿ
ಮುತ್ತಿನಾರತಿ ಎತ್ತಿರೆ ಕನ್ನಡಾಂಬೆಗೆ ||

ಬರುತಾಳೆ ಕಾವೇರಮ್ಮ
ಕಾಲ್ ತೊಳೆಯೆ ನಿನ್ನ ….
ನಿನ್ನ ಮಕ್ಕಳ ಹರಸಮ್ಮ
ಜಗದಾಂಬೆ ಕನ್ನಡಾಂಬೆಯೆ ||

ನಿನ್ನ ಹೃದಯಂಗಳದಿ
ಹಸಿರ ತಂಪೆರೆಯಲಿ
ಹೋಲಗದ್ದೆಗಳೆ ಗುಡಿಗೋಪುರ
ರೈತ ಹೈಕಳ ಜೋಡಿ ನಿನ್ನ ಪೂಜಾರಿ
ನೇಗಿಲು ಹಲುಬೆಗಳೆ ಪೂಜಾಸಾಮಗ್ರಿ

ಹೂಗೊಂಚಲ ತರುಲತೆ ಶೃಂಗಾರಾಭರಣ
ಸೂರ್‍ಯ ಚಂದ್ರರೆ ಕರ್‍ಣದೋಲೆಗಳು
ಬೆಳ್ಳಿ ಶಿಖರಗಳೇ ಕಿರೀಟವು
ಮುತ್ತೈದೆ ವೀರಗಾಥೆಯೆ ತಿಲಕ

ಪಚ್ಚೆತೆನೆ ಧವಸಧಾನ್ಯ ನೈವೇದ್ಯ
ಕಬ್ಬಿನ ಜಲ್ಲೆ ಜೇನ ಕಣ ಅಭಿಷೇಕಾಮೃತ
ನಿನ್ನ ಮಕ್ಕಳ ಬೆವರ ಹನಿಯೆ
ಭಕ್ತಿಯ ಸ್ಮರಣೆ ಕರ್‍ಪೂರದಾರತಿ ||

ಇಳಿಯೆಂಬ ಹೊಸ್ತಿಲಲ್ಲಿ ಅಂಬರವೇ
ಪುಷ್ಪಕ ವಿಮಾನ ಲತಾಮಂಟಪ
ಸುಗ್ಗಿಯ ಸೊಬಗೇ ನಿನ್ನ ತೇರು
ಋತುಗಳೆ ತೇರನ್ನೆಳೆಯುವ ದಾತರು
ಸಂಸ್ಕೃತಿ ಸಂಪನ್ನಗಳೆ ಶ್ವೇತಾಂಬರ ರವಿಕೆ
ಶ್ರೀ ಗಂಧವೆ ಧೂಪ ತರಂಗಿಣಿ ಸೆಲೆಯೆ ತೀರ್‍ಥ

ಸಂವತ್ಸರಗಳೆ ನಿನಗೆ ಸುಪ್ರಭಾತ
ಸಂಧ್ಯಾರಾಗ ಸಮತಾಭಾವ ನಿನಗೋಕುಳಿ
ಸದ್ಗುಣ ಜ್ಞಾನಾರ್‍ಜನೆಯೆ ದೀವಿಗೆ
ಕೋಕಿಲ ಗಾನವೇ ಮಂತ್ರಾರ್‍ಚನೆ
ಪವನದೇವ ಪಂಖ ಬೀಸಲು ||

ಕೊಂಬು ಕಂಸಾಳೆ ಡೋಲು
ದುಡಿ ಮದ್ದಲೆ ದುಂದುಭಿ
ನಾಗಸ್ವರ ಮೇಳ ಹಿಮ್ಮೇಳವು
ದೇವ ಕಿನ್ನರಿ ಜವ್ವನೆಯರ ನರ್ತನ
ವೈಭವದಿಂದ ಬರುತಿರೆ ಮೆರವಣಿಗೆ ||

ನೋಡಲು ಕಣ್ಣುಗಳು ಸಾಲದಮ್ಮ
ನಿನ್ನ ವರ್‍ಣಿಸಲು ಅಸದಳವು
ಮುತ್ತೈದೆಯರು ಮುತ್ತಿನಾರತಿ ಎತ್ತಿರೆ
ತಾಯೆ ಸಿರಿದೇವಿಗೆ ತೇಲಿಬಾಗಿ
ನಮಿಸಿರೆ ಕನ್ನಡಾಂಬೆಗೆ ||
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...