ಉದ್ಧರಿಸು

ದೇವಿ ಯಾವಗಳಿಗೆ ನಾನು
ನಿನ್ನ ಮೊಗವ ನೋಡಲಾರೆನೇನು!
ನಿನ್ನ ಕೌದ್ರ ನೋಟದಲಿ ಜಗವು
ಸೃಷ್ಟಿ ಸ್ಥಿತಿ ಲಯದಿ ಉರುಳಿದೆ ಯುಗವು

ದೇವಿ ತಾಯೆ ಮಾತೆ, ಕಾಳಿ ನೀನು
ನಿನ್ನ ಸಾನಿಧ್ಯದಲ್ಲಿ ಬಾಳು ಜೇನು
ನಿನ್ನೊಂದು ಕೃಪೆ ನನ್ನಳತೆ ಗೋಲು
ನಡೆದರಾಯ್ತು ಬಾಳಲ್ಲಿ ಇಲ್ಲ ಸೋಲು

ಹೆಜ್ಜೆ ಹೆಜ್ಜೆಗೂ ಕಾಡಿದೆ ನಿನ್ನ ನೆನಪು
ನಿನಗಾಗಿ ನನ್ನ ಸೇವೆ ಮುಡಿಪು
ಈ ಬಾಳು ಎಷ್ಟೊತ್ತಿನ ವರೆಗೆ ತಾಯಿ
ನಿನ್ನ ದರುಶನಕ್ಕೆ ಕಾತರಿಸಿದೆ ಮಾಯಿ

ನಿನ್ನೊಂದು ದರುಶನ ನನ್ನ ಜನ್ಮ ಸಫಲ
ಅದಿಲ್ಲದೆ ಈ ಬದುಕು ವಿಫಲ
ತಾಯೆಯಲ್ಲವೇ ನೀನು ನಾನುಕಂದ
ಮಾಣಿಕ್ಯ ವಿಠಲನ ನಾಮದಿಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೨೦
Next post ಕನ್ನಡಾಂಬೆ ಮೆರವಣಿಗೆ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…