ಆತ್ಮ ಮಿಲನ

ಆಕಾಶದ ನೀಲಿಯಲಿ ಅದ್ದಿದ ಬಟ್ಟೆ,
ಕನಸುಗಳ ನೇಯ್ದು ಒಂದು ದಿವಸ,
ಬದುಕಿನ ವಸಂತ ಅರಳಿದ ಬಿಸಿಲಿನ
ದಗೆಗೆ ಕುಡಿಯುತ್ತಿರುವ ನೀರು ಆಕಾಶದ ಹನಿ.

ಗಜ ಬಟ್ಟೆಯ ಜೋಳಿಗೆಯ ತುಂಬ,
ಅವರಿವರ ಒಲವು ಮಾತು ಬಿರಿಸು,
ಮಾತಾಪು, ಮತ್ತೆ ನನ್ನ ನಲ್ಲನ ವಸಗೆ
ಮೋಡಗಳು ಎದೆತೆರೆದು ಹನಿ ಬೆಳದಿಂಗಳ ಇರುಳು.

ಈ ಅಸ್ತಿಯಲಿ ಮಾಗಿಯ ಚಳಿ ಇಳಿಯುತ್ತಿದ್ದಂತೆ,
ನೀನು ಹೊದಿಸಿದ ಬೆಚ್ಚನೆಯ ಕಂಬಳಿ ಹಾಸು,
ಒಲೆಯಲಿ ಕಟ್ಟಿಗೆ ಉರಿದು ಅಡುಗೆ ಮನೆ ತುಂಬ
ಹಸಿರು ಚಹಾದ ಎಲೆಗಳು ಕುದಿದು ಘಮ ಘಮ.

ಇಂದು ಎಲ್ಲವನ್ನು ಮಾತನಾಡೋಣ. ನಾಳೆಯ
ಬಣ್ಣ ಬದಲಾಯಿಸಿ ಏನು ಅನಾಹುತ ಕಾದಿದೆಯೋ?
ಹರಿದ ಕಾಗದದ ತುಂಡುಗಳು ಕೂಡಿಸಿ, ಒಂದು
ಕೃತಘ್ನತೆಯ ಕವಿತೆಯ ಸಾಲುಗಳ ಗಿಚೋಣ.

ನಮ್ಮ ವಸಂತಗಳನ್ನು ನಾವೀಗ ದಾಟಿದ್ದೇವೆ.
ಬದುಕಿನ ಚಳಿಗಾಲದ ಈ ಸಂಜೆಗಳನ್ನು
ಹಾಗೆಯೇ ಮುರಿದು ಕಳೆದು ಹೋದ ಮಾತುಗಳ,
ಒಂದು ಭರವಸೆಯ ಎಳೆಯಲಿ ಪೋಣಿಸೋಣ.
ಇದು ನೀ ತೆರೆದ ಆಕಾಶದಿಂದ ನನ್ನ ಮನೆಯ
ಬಾಗಿಲಿಗೆ ಬಂದು ನಿಲ್ಲುವ ಸರಿಯಾದ ಸಮಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತ ಮಾತೆ
Next post ಹಸ್ತಿನಾಪುರಕ್ಕೆ ಬಂದ ಪಾಂಡವರು

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys