ಆತ್ಮ ಮಿಲನ

ಆಕಾಶದ ನೀಲಿಯಲಿ ಅದ್ದಿದ ಬಟ್ಟೆ,
ಕನಸುಗಳ ನೇಯ್ದು ಒಂದು ದಿವಸ,
ಬದುಕಿನ ವಸಂತ ಅರಳಿದ ಬಿಸಿಲಿನ
ದಗೆಗೆ ಕುಡಿಯುತ್ತಿರುವ ನೀರು ಆಕಾಶದ ಹನಿ.

ಗಜ ಬಟ್ಟೆಯ ಜೋಳಿಗೆಯ ತುಂಬ,
ಅವರಿವರ ಒಲವು ಮಾತು ಬಿರಿಸು,
ಮಾತಾಪು, ಮತ್ತೆ ನನ್ನ ನಲ್ಲನ ವಸಗೆ
ಮೋಡಗಳು ಎದೆತೆರೆದು ಹನಿ ಬೆಳದಿಂಗಳ ಇರುಳು.

ಈ ಅಸ್ತಿಯಲಿ ಮಾಗಿಯ ಚಳಿ ಇಳಿಯುತ್ತಿದ್ದಂತೆ,
ನೀನು ಹೊದಿಸಿದ ಬೆಚ್ಚನೆಯ ಕಂಬಳಿ ಹಾಸು,
ಒಲೆಯಲಿ ಕಟ್ಟಿಗೆ ಉರಿದು ಅಡುಗೆ ಮನೆ ತುಂಬ
ಹಸಿರು ಚಹಾದ ಎಲೆಗಳು ಕುದಿದು ಘಮ ಘಮ.

ಇಂದು ಎಲ್ಲವನ್ನು ಮಾತನಾಡೋಣ. ನಾಳೆಯ
ಬಣ್ಣ ಬದಲಾಯಿಸಿ ಏನು ಅನಾಹುತ ಕಾದಿದೆಯೋ?
ಹರಿದ ಕಾಗದದ ತುಂಡುಗಳು ಕೂಡಿಸಿ, ಒಂದು
ಕೃತಘ್ನತೆಯ ಕವಿತೆಯ ಸಾಲುಗಳ ಗಿಚೋಣ.

ನಮ್ಮ ವಸಂತಗಳನ್ನು ನಾವೀಗ ದಾಟಿದ್ದೇವೆ.
ಬದುಕಿನ ಚಳಿಗಾಲದ ಈ ಸಂಜೆಗಳನ್ನು
ಹಾಗೆಯೇ ಮುರಿದು ಕಳೆದು ಹೋದ ಮಾತುಗಳ,
ಒಂದು ಭರವಸೆಯ ಎಳೆಯಲಿ ಪೋಣಿಸೋಣ.
ಇದು ನೀ ತೆರೆದ ಆಕಾಶದಿಂದ ನನ್ನ ಮನೆಯ
ಬಾಗಿಲಿಗೆ ಬಂದು ನಿಲ್ಲುವ ಸರಿಯಾದ ಸಮಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತ ಮಾತೆ
Next post ಹಸ್ತಿನಾಪುರಕ್ಕೆ ಬಂದ ಪಾಂಡವರು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…