ಏಳು ಕಂದಾ ಮುದ್ದು ಕಂದಾ

ಏಳು ಕಂದಾ ಮುದ್ದು ಕಂದಾ
ತಂದೆ ಶ್ರೀಗುರು ಕರೆದನು
ಮಕ್ಕಳಾಟವು ಸಾಕು ಮಗುವೆ
ವ್ಯರ್ಥ ಸಾಕು ಎಂದನು

ಕೈಯ ಹಿಡಿದನು ಕರುಣೆ ಮಿಡಿದನು
ಮೇಲು ಮೇಲಕೆ ಕರೆದನು
ಮೇಲು ಮೇಲಿನ ಮೇಲು ಮಠದಾ
ಪ್ರೇಮ ಪಾಠವ ಕೊಟ್ಟನು

ಮಾತು ಜ್ಯೋತಿರ್ಲಿಂಗವಾಗಲಿ
ಮನವು ಆರತಿ ಬೆಳಗಲಿ
ಸೇವೆ ಸುಂದರ ಕಮಲವಾಗಲಿ
ತೇರು ನವಯುಗ ಸೇರಲಿ

ನಿರ್ಮಲಾತ್ಮರೆ ಲೋಕ ಪೂಜ್ಯರೆ
ಶರಣ ಗಾನವು ತುಂಬಲಿ
ಕಾಯ ಕಾಂಚನ ಕಮಲ ಅರಳಲಿ
ವಿಶ್ವ ಜಂಗಮವಾಗಲಿ

ಗುರುವೆ ಲಿಂಗವು ಲಿಂಗ ಜಂಗಮ
ಶರಣ ಸಂಗಮ ಅನುಪಮ
ಭಕ್ತ ಶಕ್ತಿಗೆ ಜ್ಞಾನ ಶಕ್ತಿಯು
ತುಂಬಿ ಬಂದರೆ ನಿರುಪಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಾಂತಿಮಂತ್ರ
Next post ಆಧುನಿಕ ಕೃಷಿಗಾರು ಸೂತ್ರಧಾರಿಗಳು?

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys