Home / ಕವನ / ಕವಿತೆ / ಅಕ್ಕನ ದಾರಿ

ಅಕ್ಕನ ದಾರಿ

ಗೆದ್ದವಳು ನೀನು ಲಿಂಗಮುಖದಿಂದ
ಮನದೊಳು ಭಾವ ಲಿಂಗವ ಅರಳಿಸಿ
ಉಡುತಡಿಯಿಂದ ಕದಳಿಯವರೆಗೆ
ಹರಡಿ ಹಾಸಿದ ಜ್ಞಾನ ಬೆಳದಿಂಗಳು
ಧರೆಯಲ್ಲಾ ಪಸರಿಸಿ ಶರಣಸತಿ ನೀನು.

ಜಗ ನಂಬಿದ ಲಿಂಗದ ಘನವ
ನಿಮ್ಮ ನೆರೆ ನಂಬಿದ ಸದ್ಭಕ್ತರಿಗೆ ತೋರಿ
ಉಭಯ ಸಂಗವ ಅರಿಯದೆ ಪರಿಣಾಮಿಯಾಗಿ
ಅರಿವಿನೊಳಗೆ ಅರಿವ ಬೆಳಕು ಬೆಳಗಿದ ಅಕ್ಕ ನೀನು

ಕಂಗಳ ನೋಟ ಕರುವಿಟ್ಟಭಾವ ಹಿಂಗದ ಮೋಹ
ಎಂದೆಂದೂ ಚೆನ್ನಮಲ್ಲಿಕಾರ್ಜುನನ ಶಿಶು ನೀನು
ಅಗ್ನಿ ಶಿವನ ಆಚಾರ ಸರ್‍ವವ್ಯಾಪಕ ಹರಡಿ ಹಾನಿ
ಆತ್ಮ ಜ್ಞಾನವ ಪ್ರತಿಬಿಂಬಿಸಿ ಅವನೊಡಲ ಪ್ರಾಣ
ನೀನು ಘಮ

ನೀ ಹೆಜ್ಜೆ ಇರಿಸಿದ ಕಡೆಯೆಲ್ಲಾ ಕ್ಯಾದಿಗೆ ಘಮ
ನೆರಳ ತಂಪು ಕತ್ತಲೆಯ ಕರಗಿಸಿ ಬೆಳ್ಳಿ ಚಿಕ್ಕಿಗಳು
ತನ್ನ ತಾನರಿಯೆ ಅಂಗೈಯ ಲಿಂಗಧಾರಣೆ ಮಾಡಿ
ಭೂಲೋಕ ಸಮಸ್ತ ಜೀವಿಗಳಿಗೆ ಪ್ರಸಾದಿ
ಪ್ರಾಣಲಿಂಗಿಯಾದೆ.

ಮಾನವ ಬೆರಗು ನಿಬ್ಬೆರಗು ಆಗಿ ಅವನ ಲೋಕದ
ಶ್ಮದ್ಧ ಅನುಭಾವ ಮಂಟಪದಲಿ ನೀ ಹಾಡಿದ
ವಚನಗಳು ಮಲ್ಲಿಕಾರ್‍ಜುನನ ಮಹಿಮೆ ಅರುಹಿ
ಪರಾತ್ಪರ ಸತ್ಯ ಸದಾಚಾರ ಗುರುಲಿಂಗ ಜಂಗಮಕೆ
ಸಮರ್‍ಪಿಸುವೆ.

ಬಲ್ಲವರೊಡನೆ ಸಂಗಮಾಡಿ ಬೆಣ್ಣೆ ಕಡೆದು
ಕುಲಭ್ರಮೆ, ಜಾತಿ ಭ್ರಮೆ ಸರಿಸಿ ಸರ್‍ವ ಅಲಂಕಾರ ತುಪ್ಪ
ಕಾಯಿಸಿ, ಶಿವಶಕ್ತಿ ಶಿವ ಭಕ್ತಿ, ಶಿವಪ್ರಸಾದ
ಮಾಡಿ ಅಡಿಗಡಿಗೆ ಗುರುಪಾದಕೆ ನೈರ್‍ಮಲ್ಯ ನೀಡಿ ಧನ್ಯವಾದೆ.

ಅಕ್ಕ ಎಂದರೆ ಅಭಿನ್ನ ಜ್ಞಾನ. ಯತ್ರ ಜೀವ ತತ್ರಶಿವ
ಅಕ್ಕ ಎಂದರೆ ಹಿಂಗದ ಅನುಭಾವದ ನೀರಿನ ಭಾವಿ.
ಅಕ್ಕ ಎಂದರೆ ಇಹದಸುಖ ಪರದ ಗತಿಯ ದಾರಿ.
ಅಕ್ಕ ಎಂದರೆ ತನ್ನತಾನರಿತ ಕಂಗಳ ನೋಟ ಮನದ ಸೊಗಸು…..
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...