ಅಕ್ಕನ ದಾರಿ

ಗೆದ್ದವಳು ನೀನು ಲಿಂಗಮುಖದಿಂದ
ಮನದೊಳು ಭಾವ ಲಿಂಗವ ಅರಳಿಸಿ
ಉಡುತಡಿಯಿಂದ ಕದಳಿಯವರೆಗೆ
ಹರಡಿ ಹಾಸಿದ ಜ್ಞಾನ ಬೆಳದಿಂಗಳು
ಧರೆಯಲ್ಲಾ ಪಸರಿಸಿ ಶರಣಸತಿ ನೀನು.

ಜಗ ನಂಬಿದ ಲಿಂಗದ ಘನವ
ನಿಮ್ಮ ನೆರೆ ನಂಬಿದ ಸದ್ಭಕ್ತರಿಗೆ ತೋರಿ
ಉಭಯ ಸಂಗವ ಅರಿಯದೆ ಪರಿಣಾಮಿಯಾಗಿ
ಅರಿವಿನೊಳಗೆ ಅರಿವ ಬೆಳಕು ಬೆಳಗಿದ ಅಕ್ಕ ನೀನು

ಕಂಗಳ ನೋಟ ಕರುವಿಟ್ಟಭಾವ ಹಿಂಗದ ಮೋಹ
ಎಂದೆಂದೂ ಚೆನ್ನಮಲ್ಲಿಕಾರ್ಜುನನ ಶಿಶು ನೀನು
ಅಗ್ನಿ ಶಿವನ ಆಚಾರ ಸರ್‍ವವ್ಯಾಪಕ ಹರಡಿ ಹಾನಿ
ಆತ್ಮ ಜ್ಞಾನವ ಪ್ರತಿಬಿಂಬಿಸಿ ಅವನೊಡಲ ಪ್ರಾಣ
ನೀನು ಘಮ

ನೀ ಹೆಜ್ಜೆ ಇರಿಸಿದ ಕಡೆಯೆಲ್ಲಾ ಕ್ಯಾದಿಗೆ ಘಮ
ನೆರಳ ತಂಪು ಕತ್ತಲೆಯ ಕರಗಿಸಿ ಬೆಳ್ಳಿ ಚಿಕ್ಕಿಗಳು
ತನ್ನ ತಾನರಿಯೆ ಅಂಗೈಯ ಲಿಂಗಧಾರಣೆ ಮಾಡಿ
ಭೂಲೋಕ ಸಮಸ್ತ ಜೀವಿಗಳಿಗೆ ಪ್ರಸಾದಿ
ಪ್ರಾಣಲಿಂಗಿಯಾದೆ.

ಮಾನವ ಬೆರಗು ನಿಬ್ಬೆರಗು ಆಗಿ ಅವನ ಲೋಕದ
ಶ್ಮದ್ಧ ಅನುಭಾವ ಮಂಟಪದಲಿ ನೀ ಹಾಡಿದ
ವಚನಗಳು ಮಲ್ಲಿಕಾರ್‍ಜುನನ ಮಹಿಮೆ ಅರುಹಿ
ಪರಾತ್ಪರ ಸತ್ಯ ಸದಾಚಾರ ಗುರುಲಿಂಗ ಜಂಗಮಕೆ
ಸಮರ್‍ಪಿಸುವೆ.

ಬಲ್ಲವರೊಡನೆ ಸಂಗಮಾಡಿ ಬೆಣ್ಣೆ ಕಡೆದು
ಕುಲಭ್ರಮೆ, ಜಾತಿ ಭ್ರಮೆ ಸರಿಸಿ ಸರ್‍ವ ಅಲಂಕಾರ ತುಪ್ಪ
ಕಾಯಿಸಿ, ಶಿವಶಕ್ತಿ ಶಿವ ಭಕ್ತಿ, ಶಿವಪ್ರಸಾದ
ಮಾಡಿ ಅಡಿಗಡಿಗೆ ಗುರುಪಾದಕೆ ನೈರ್‍ಮಲ್ಯ ನೀಡಿ ಧನ್ಯವಾದೆ.

ಅಕ್ಕ ಎಂದರೆ ಅಭಿನ್ನ ಜ್ಞಾನ. ಯತ್ರ ಜೀವ ತತ್ರಶಿವ
ಅಕ್ಕ ಎಂದರೆ ಹಿಂಗದ ಅನುಭಾವದ ನೀರಿನ ಭಾವಿ.
ಅಕ್ಕ ಎಂದರೆ ಇಹದಸುಖ ಪರದ ಗತಿಯ ದಾರಿ.
ಅಕ್ಕ ಎಂದರೆ ತನ್ನತಾನರಿತ ಕಂಗಳ ನೋಟ ಮನದ ಸೊಗಸು…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವನಾರೇ ಗೆಳತಿ ಅವನಾರೇ
Next post ಮಿಂಚು

ಸಣ್ಣ ಕತೆ

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…