ಅವನಾರೇ ಗೆಳತಿ ಅವನಾರೇ

ಬಾಳಿನ ಬದುಕಿಗೆ
ಆಸೆಯ ಕೊಟ್ಟವ
ನೇಸರ ಬದುಕಿಗೆ
ಬಣ್ಣ ಕೊಟ್ಟವ
ಅವನಾರೇ ಗೆಳತಿ ಅವನಾರೇ

ಆಸರೆ ಕೊಟ್ಟ
ಬಂಧ ಬಂಧನ
ನಡುವೆ ಪ್ರೀತಿಯ
ನೇಯ್ಗೆ ನೈಯ್ದವ
ಅವನಾರೇ ಗೆಳತಿ ಅವನಾರೇ

ಸೆರೆಯಾದ ಪ್ರೀತಿಗೆ
ಚೈತನ್ಯ ತುಂಬಿ
ಸೋಬಾನೆ ಹಾಡಿಗೆ
ಕೆಳೆಯ ಕಟ್ಟಿಹ
ಅವನಾರೇ ಗೆಳತಿ ಅವನಾರೇ

ಕಡಲ ತೀರದ
ಸಂಸಾರ ಅಂಬಿಗ
ಭಾವದ ಹರಿಗೋಲು
ದಡವ ಸೇರಿಸುವ
ಅವನಾರೇ ಗೆಳತಿ ಅವನಾರೇ

ಕಾನನ ಸಿರಿಯ
ಬೆಡಗು ಬಂಗಾರ
ಜೀವದ ಹಸಿರ
ಉಸಿರ ಚೇತನವು
ಅವನಾರೇ ಗೆಳತಿ ಅವನಾರೇ

ಪಚ್ಚೆ ಹವಳ
ಮುದ್ದು ಮೊಗದಾ
ಕಂದನ ಕನಸಿಗೆ
ತಣ್ಣೆರ ಎರೆಯುವ
ಅವನಾರೇ ಗೆಳತಿ ಅವನಾರೇ

ಸೃಷ್ಟಿ ನಿಷ್ಠೆಯಲ್ಲಿ
ಧರ್ಮ ಕರ್ಮದಲ್ಲಿ
ಕಂಡು ಕಾಣದಾಗಿಹ
ಅವನಾರೇ ಗೆಳತಿ ಅವನಾರೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರು ಎಲ್ಲರಿಗಾಗಿ
Next post ಅಕ್ಕನ ದಾರಿ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…