ದೇವರು ಎಲ್ಲರಿಗಾಗಿ

ಸನ್ಯಾಸಿಗಳಿಗಷ್ಟೆ ಅಲ್ಲ ದೇವರ ದರುಶನ
ಗೃಹಸ್ಥರಿಗೂ ಅವನು ಕಾಣುತ್ತಾನೆ
ಅಚಲ ಶೃದ್ಧಾಭಕ್ತಿ ವ್ಯಾಕುಲತೆಯೊಂದೇ
ಕಂಡು ತನ್ನ ರೂಪು ತೋರುತ್ತಾನೆ

ಭಗವಾನ ಶ್ರೀ ರಾಮಕೃಷ್ಣ ಪರಮಹಂಸರು
ಹೇಳಿದರು ಈ ಭೂಜನರಿಗೆ ತಾವು
ಸಂತ ಸಜ್ಜನರ ಸಹವಾಸ ಏಕಾಂತ
ನಿರ್ಜನ ಸ್ಥಳಗಳಲಿ ಜಪಿಸಿ ನೀವು

ನಿಮ್ಮದೆಲ್ಲವ ಅವಗೆ ಅರ್ಪಿಸಬೇಕು
ಅಹಂಕಾರ ಸ್ವಾರ್ಥಗಳು ತೊಡೆಯಬೇಕು
ಪ್ರಪಂಚದ ವ್ಯಾಮೋಹ ಮರೆಯಬೇಕು
ಪಾರಮಾರ್ಥ ನಿತ್ಯವೂ ಸಾಧಿಸಬೇಕು

ಸಂತತಿ ಪಡೆದರಾಯ್ತು ದಂಪತಿಯರು
ಅಣ್ಣ ತಂಗಿಯರಂತೆ ಬಾಳಬೇಕು
ಮಾಡುವ ಪ್ರೀತಿ ಕಾರ್ಯಗಳಲ್ಲೂ
ದೇವರಿಗೆ ಧ್ಯಾನಿಸಿ ಬೇಡಬೇಕು

ಕಂಗಳು ಅತ್ತು ತಾನು ಮೊರೆಯಿಡಬೇಕು
ದರ್ಪಣದ ಹಾಗೆ ಸ್ವಚ್ಛ ಹೃದಯಬೇಕು
ಆಗ ಪರಮಾತ್ಮನೆಂಬ ಚುಂಬಕವು
ಮಾಣಿಕ್ಯ ವಿಠಲನಾಗಿ ನಲಿಯಬೇಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೯
Next post ಅವನಾರೇ ಗೆಳತಿ ಅವನಾರೇ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…