ದೇವರು ಎಲ್ಲರಿಗಾಗಿ

ಸನ್ಯಾಸಿಗಳಿಗಷ್ಟೆ ಅಲ್ಲ ದೇವರ ದರುಶನ
ಗೃಹಸ್ಥರಿಗೂ ಅವನು ಕಾಣುತ್ತಾನೆ
ಅಚಲ ಶೃದ್ಧಾಭಕ್ತಿ ವ್ಯಾಕುಲತೆಯೊಂದೇ
ಕಂಡು ತನ್ನ ರೂಪು ತೋರುತ್ತಾನೆ

ಭಗವಾನ ಶ್ರೀ ರಾಮಕೃಷ್ಣ ಪರಮಹಂಸರು
ಹೇಳಿದರು ಈ ಭೂಜನರಿಗೆ ತಾವು
ಸಂತ ಸಜ್ಜನರ ಸಹವಾಸ ಏಕಾಂತ
ನಿರ್ಜನ ಸ್ಥಳಗಳಲಿ ಜಪಿಸಿ ನೀವು

ನಿಮ್ಮದೆಲ್ಲವ ಅವಗೆ ಅರ್ಪಿಸಬೇಕು
ಅಹಂಕಾರ ಸ್ವಾರ್ಥಗಳು ತೊಡೆಯಬೇಕು
ಪ್ರಪಂಚದ ವ್ಯಾಮೋಹ ಮರೆಯಬೇಕು
ಪಾರಮಾರ್ಥ ನಿತ್ಯವೂ ಸಾಧಿಸಬೇಕು

ಸಂತತಿ ಪಡೆದರಾಯ್ತು ದಂಪತಿಯರು
ಅಣ್ಣ ತಂಗಿಯರಂತೆ ಬಾಳಬೇಕು
ಮಾಡುವ ಪ್ರೀತಿ ಕಾರ್ಯಗಳಲ್ಲೂ
ದೇವರಿಗೆ ಧ್ಯಾನಿಸಿ ಬೇಡಬೇಕು

ಕಂಗಳು ಅತ್ತು ತಾನು ಮೊರೆಯಿಡಬೇಕು
ದರ್ಪಣದ ಹಾಗೆ ಸ್ವಚ್ಛ ಹೃದಯಬೇಕು
ಆಗ ಪರಮಾತ್ಮನೆಂಬ ಚುಂಬಕವು
ಮಾಣಿಕ್ಯ ವಿಠಲನಾಗಿ ನಲಿಯಬೇಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೯
Next post ಅವನಾರೇ ಗೆಳತಿ ಅವನಾರೇ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys