ಮಿಂಚು

ಮಿಂಚು ಬಾರೆ ಮಿಂಚು ರಾಣಿ !
ಮುದ್ದು ಮೊಗವ ತೋರೆ ಜಾಣಿ !!

ಮುಗಿಲಿನಲ್ಲಿ ಮಲಗಿಕೊಂಡು
ಮೋಡಗಳಲಿ ಮುಸುಕಿಕೊಂಡು
ಸೂರ್‍ಯನಿಲ್ಲದ ಸಮಯದಲ್ಲಿ
ಕತ್ತಲೇರುವ ಕಾಲದಲ್ಲಿ
ಕಣ್ಣು ಮುಚ್ಚಲು ಕಾಣಿಸಿಕೊಳ್ಳುವಿ !
ಕೈಯಚಾಚಲು ಕಾಲುತೆಗೆಯುಸಿ !

ಮಿಂಚು ಬಾರೆ ಮಿಂಚು ರಾಣಿ !
ಮುದ್ದು ಮೊಗವ ತೋರೆ ಜಾಣಿ !!

ಮುತ್ತಿನ ಮೂಗುತಿಯಿಟ್ಟುಕೊಂಡು
ಜರದ ಕುಪ್ಪಸ ತೊಟ್ಟುಕೊಂಡು
ಹೊಳೆವ ಸೀರೆಯನುಟ್ಟುಕೊಂಡು
ಚಕ್ಕಪಕ್ಕನೆ ಕಾಣಿಸಿಕೊಂಡು
ಕಳ್ಳ ಕುಣಿತವ ಕುಣಿಯುತಿಹಿ !
ಕಣ್ಣು ಸನ್ನೆಯ ಮಾಡುತಿಹಿ !

ಮಿಂಚು ಬಾರೆ ಮಿಂಚು ರಾಣಿ !
ಮುದ್ದು ಮೊಗವ ತೋರೆ ಜಾಣಿ !!

ಏನ ಹುಡುಗಿ ನಿನ್ನ ಮಿಂಚು
ನಿನ್ನಗಾಗಿ ಹಾಕಿ ಹೊಂಚು
ಕತ್ತಲಲ್ಲಿ ತಿರುಗಿ ತಿರುಗಿ
ಮನಸಿನಲ್ಲಿ ಮರುಗಿ ಮರುಗಿ
ನೊಂದೆ ಬೆಂದೆ ಬಾರೆ ಮಿಂಚು !
ತರುಣ ಹೃದಯದಲ್ಲಿ ಮಿಂಚು !

ಮಿಂಚು ಬಾರೆ ಮಿಂಚು ರಾಣಿ !
ಮುದು ಮೊಗವ ತೋರ ಜಾಣಿ !!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕನ ದಾರಿ
Next post ವಚನ ವಿಚಾರ – ಅತಿಮಥನ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…