ಆಡಿ ಬಾರೋ ರಂಗ

ಆಡಿ ಬಾರೋ ರಂಗ
ಅಂಗಾಲ ತೊಳೆದು ನಿನ್ನಾ
ಅಪ್ಪಿ ಮುದ್ದಾಡುವೆ ಅನುಗಾಲ|
ಅಕ್ಕರೆಯಿಂದಲಿ
ಚೊಕ್ಕಮಾಡುತ ನಿನ್ನ
ಸೇವೆಯಮಾಡುವೆ ನೂರು ಕಾಲ||

ಬೆಳ್ಳಿಬಟ್ಟಲ ಹಾಲು
ಹಣ್ಣು ಫಲಹಾರವ ಅಣಿ
ಮಾಡಿರುವೆ ನಿನಗಾಗಿ|
ಅದನ್ನೆಲ್ಲಾ ನೀ ಸೇವಿಸೆ
ಅಮ್ಮಾ ಸಾಕು ಎಂದೊಮ್ಮೆ
ಕರೆಸಿಕೊಳ್ಳುವ ಆಸೆ||

ಬಿಸಿ ಬಿಸಿ ನೀರಲಿ
ಜಳಕ ಮಜ್ಜನ ಮಾಡಿಸಿ
ಜರತಾರಿ ಪೀತಾಂಬರ ತೊಡಿಸಿ
ಮುದ್ದಿಸಿ ಆನಂದಿಸುವೆ ನಿನ್ನಾ|
ಯಾರ ದೃಷ್ಟಿ ತಾಗದಿರಲೆಂದು
ಕಪ್ಪು ಬೊಟ್ಟನೊಂದಿರಿಸಿ
ನೀರಿಂದ ನಿವಾಳಿಸುವೆ||

ತೂಗು ತೊಟ್ಟಿಲ ಕಟ್ಟಿ
ಚೆಂದದ ಜೋಗುಳ ಹಾಡಿ ಲಾಲಿಸುವೆ|
ನಿನ್ನ ಕೈಬೆರಳ ಬಾಯಿಂದ ತೆಗೆದು
ಪ್ರೀತಿಯ ಮುತ್ತಾನೀಡುವೆ|
ನೀನು ಎದ್ದೇಳುವುದರೊಳಗಾಗಿ
ನಿನಗೆ ಸಿಹಿ ತಿಂಡಿಗಳ ಮಾಡುತ
ನಿನ್ನಾ ಸೇವೆಯಲೇ ಈ ಜನ್ಮಕಳೆಯುವೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಯಾರಿದೆ ಹೃದಯ
Next post ಅಗಲಿಕೆ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…