ಆಡಿ ಬಾರೋ ರಂಗ

ಆಡಿ ಬಾರೋ ರಂಗ
ಅಂಗಾಲ ತೊಳೆದು ನಿನ್ನಾ
ಅಪ್ಪಿ ಮುದ್ದಾಡುವೆ ಅನುಗಾಲ|
ಅಕ್ಕರೆಯಿಂದಲಿ
ಚೊಕ್ಕಮಾಡುತ ನಿನ್ನ
ಸೇವೆಯಮಾಡುವೆ ನೂರು ಕಾಲ||

ಬೆಳ್ಳಿಬಟ್ಟಲ ಹಾಲು
ಹಣ್ಣು ಫಲಹಾರವ ಅಣಿ
ಮಾಡಿರುವೆ ನಿನಗಾಗಿ|
ಅದನ್ನೆಲ್ಲಾ ನೀ ಸೇವಿಸೆ
ಅಮ್ಮಾ ಸಾಕು ಎಂದೊಮ್ಮೆ
ಕರೆಸಿಕೊಳ್ಳುವ ಆಸೆ||

ಬಿಸಿ ಬಿಸಿ ನೀರಲಿ
ಜಳಕ ಮಜ್ಜನ ಮಾಡಿಸಿ
ಜರತಾರಿ ಪೀತಾಂಬರ ತೊಡಿಸಿ
ಮುದ್ದಿಸಿ ಆನಂದಿಸುವೆ ನಿನ್ನಾ|
ಯಾರ ದೃಷ್ಟಿ ತಾಗದಿರಲೆಂದು
ಕಪ್ಪು ಬೊಟ್ಟನೊಂದಿರಿಸಿ
ನೀರಿಂದ ನಿವಾಳಿಸುವೆ||

ತೂಗು ತೊಟ್ಟಿಲ ಕಟ್ಟಿ
ಚೆಂದದ ಜೋಗುಳ ಹಾಡಿ ಲಾಲಿಸುವೆ|
ನಿನ್ನ ಕೈಬೆರಳ ಬಾಯಿಂದ ತೆಗೆದು
ಪ್ರೀತಿಯ ಮುತ್ತಾನೀಡುವೆ|
ನೀನು ಎದ್ದೇಳುವುದರೊಳಗಾಗಿ
ನಿನಗೆ ಸಿಹಿ ತಿಂಡಿಗಳ ಮಾಡುತ
ನಿನ್ನಾ ಸೇವೆಯಲೇ ಈ ಜನ್ಮಕಳೆಯುವೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಯಾರಿದೆ ಹೃದಯ
Next post ಅಗಲಿಕೆ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…