ಬಾಯಾರಿದೆ ಹೃದಯ

ಹೂತು ಹೋಗಿದೆ ಒಲವಿನ ಮಾತು
ಉಸಿರು ನರಳಿದೆ ಸೆಣಸುತ ಸೋತು
ಸಾಯುವ ಮುಂಚೆ ನೀರು ಕೊಡಿ
ಬಾಯಾರಿದೆ ಹೃದಯ.

ಹೊಟ್ಟೆಯ ಒಳಗಿನ ಸುಟ್ಟ ವಾಸನೆ
ಬೀದಿಗೆ ಹರಿದು ಬಡತನ ಬಯಲು
ಮೂಗು ಮುಚ್ಚಿದೆ ಮನೆ ಮನೆ ಸಾಲು
ಬೀದಿ ಬೀದಿಯಲಿ ಹುಡುಕಿ ನೋಡಿದರು
ಹೃದಯದ ವಿಳಾಸ ಅಲ್ಲಿಲ್ಲ
ಬೆವರು ಬಸಿದರೂ ಸಿಗಲಿಲ್ಲ.

ಸಾಯುವ ಮುಂಚೆ ನೀರು ಕೊಡಿ
ಬಾಯಾರಿದೆ ಹೃದಯ.

ನೆಲಮಾಳಿಗೆ ಮನಸು
ಸೆರೆವಾಸದ ಕನಸು
ಬೆತ್ತಲ ಭಾವನೆ ಕೊಯ್ಯುವ ಕತ್ತಲು
ಇದ್ದರು ಪ್ರಾಣ, ಗೋರಿಯ ಬದುಕು
ಒಣ ವೇದಾಂತದ ವಿಷ ಸಾಕು
ಸಾಯುವ ಮುಂಚೆ ನೀರು ಕೊಡಿ
ಬಾಯಾರಿದೆ ಹೃದಯ
ಇನ್ನೆಲ್ಲಿದೆ ಸಮಯ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಡ್ಡರ್ಸೆ ರಘುರಾಮಶೆಟ್ಟಿ ಅವರ ‘ಬಹುರೂಪಿ ಅರಸು’-ನೇರ ಅನುಸಂಧಾನ
Next post ಆಡಿ ಬಾರೋ ರಂಗ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…