ಇಲ್ಲೇ ಇರುವೆ..

ಆಶೆ ಬಿಡು ಎಂದ ಬುದ್ಧ
ಏನು ಮಾಡಲಿ ನಾನಿಲ್ಲ ಸಿದ್ಧ.

ಬಯಸದೆ ಹುಟ್ಟಿ ಬಂದೆ
ಬಯಕೆಯ ಬುಟ್ಟಿಯಾದೆ

ಬುಟ್ಟಿಯನ್ನೇ ನೆಚ್ಚಿಕೊಂಡೆ
ಗಂಡ ಮಕ್ಕಳ ಹಚ್ಚಿಕೊಂಡೆ

ಬದುಕನ್ನ ಒಪ್ಪಿಕೊಂಡೆ
ಬೆಂಕಿಯನ್ನ ಅಪ್ಪಿಕೊಂಡೆ

ಆಶೆ ಬಿಡು ಎಂದ ಬುದ್ಧ
ಏನು ಮಾಡಲಿ ನಾ ಬದ್ಧ

ಸಂಸಾರ ಸಾಗರವಂತೆ
ದುಃಖದ ಆಗರವಂತೆ
ಇದ್ದೂ ಇಲ್ಲದಂತಿರಬೇಕಂತೆ
ನೀರೊಳಗಿನ ತಾವರೆ ಎಲೆಯಂತೆ

ಎಲ್ಲವ ತಿಳಿದೂ ತಿಳಿದೂ
ಇರುವೆ ಯಾಕೋ ಇನ್ನೂ ಸಾಕೆನಿಸಿಲ್ಲ ಗುರುವೆ

ನಾ ಪಡಕೊ ಬಂದದ್ದೇ ಈ ಸಂತೆ
ನಾನಿಲ್ಲೇ ಹೀಗೆ… ನಿಶ್ಚಿಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟೋಪಿ ಮಾರುತಿ
Next post ಛಿ! ನಾನೊಬ್ಬ ಕೃತಘ್ನಳು

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…