ಇಲ್ಲೇ ಇರುವೆ..

ಆಶೆ ಬಿಡು ಎಂದ ಬುದ್ಧ
ಏನು ಮಾಡಲಿ ನಾನಿಲ್ಲ ಸಿದ್ಧ.

ಬಯಸದೆ ಹುಟ್ಟಿ ಬಂದೆ
ಬಯಕೆಯ ಬುಟ್ಟಿಯಾದೆ

ಬುಟ್ಟಿಯನ್ನೇ ನೆಚ್ಚಿಕೊಂಡೆ
ಗಂಡ ಮಕ್ಕಳ ಹಚ್ಚಿಕೊಂಡೆ

ಬದುಕನ್ನ ಒಪ್ಪಿಕೊಂಡೆ
ಬೆಂಕಿಯನ್ನ ಅಪ್ಪಿಕೊಂಡೆ

ಆಶೆ ಬಿಡು ಎಂದ ಬುದ್ಧ
ಏನು ಮಾಡಲಿ ನಾ ಬದ್ಧ

ಸಂಸಾರ ಸಾಗರವಂತೆ
ದುಃಖದ ಆಗರವಂತೆ
ಇದ್ದೂ ಇಲ್ಲದಂತಿರಬೇಕಂತೆ
ನೀರೊಳಗಿನ ತಾವರೆ ಎಲೆಯಂತೆ

ಎಲ್ಲವ ತಿಳಿದೂ ತಿಳಿದೂ
ಇರುವೆ ಯಾಕೋ ಇನ್ನೂ ಸಾಕೆನಿಸಿಲ್ಲ ಗುರುವೆ

ನಾ ಪಡಕೊ ಬಂದದ್ದೇ ಈ ಸಂತೆ
ನಾನಿಲ್ಲೇ ಹೀಗೆ… ನಿಶ್ಚಿಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟೋಪಿ ಮಾರುತಿ
Next post ಛಿ! ನಾನೊಬ್ಬ ಕೃತಘ್ನಳು

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…