Home / ಕವನ / ಕವಿತೆ / ಛಿ! ನಾನೊಬ್ಬ ಕೃತಘ್ನಳು

ಛಿ! ನಾನೊಬ್ಬ ಕೃತಘ್ನಳು

ನನ್ನಮ್ಮ ಬಂದಳು ನನ್ನಪ್ಪ ಬಂದರು
ನನ್ನಣ್ಣ ತಮ್ಮದಿರು ನನ್ನಕ್ಕ ತಂಗೇರು,
ನನ್ನವರು ಬಂದರೆಂದು ಸಂಭ್ರಮ ಪಡುವಂಗಿಲ್ಲ
ಸ್ವತಂತ್ರವಾಗಿ ಒಂದು ಕರ್ರಂದು ಬೆಳ್ಳಂದು ಮಾಡಿಡುವಂಗಿಲ್ಲ
ಕಷ್ಟ, ನಷ್ಟ ಅಂದರೆ ಕೈಲಾದ್ದ ಮಾಡುವಂಗಿಲ್ಲ
ಆದರೂ… ಈ ಮನೆ, ಆಸ್ತಿಯ ಸಹ ಯಜಮಾನಿ!

ಅಪ್ಪ ಅಮ್ಮನ ದಿನಗಳು ಆಗುತ್ತ ಬಂದವು
ಸಾಕೋದು, ಸೇವೆ ಮಾಡುವುದಂತೂ ಆಗಲಿಲ್ಲ
ಎಡಕ್ಕೂ ಬಲಕ್ಕೂ ಹೋಗಿ ನೋಡಿಕೊಂಡು, ಮಾತಾಡಿಸಿಕೊಂಡು
ಬರೋಣಾಂದ್ರೆ

ನನ್ನಿಚ್ಛೆಯಲ್ಲ,
ಇವರ ಮರ್ಜಿ ಹಿಡಿಬೇಕು
ಕಟ್ಟು ಮಾಡಿದಂಗೆ ಬಂದು ಬಿಡಬೇಕು
ತಪ್ಪಿದರೆ ಇದೇ ಕೊನೆ ಅಂಡ್ಕೊಂಡು ಬಿಡಬೇಕು,
ಇದು ನನ್ನ ಅವಸ್ಥೆ ನೋಡಿ,
ಅನ್ನ ನಾನು ತಿಂದರೆ ನನ್ನನ್ನು ಅನ್ನ ತಿನ್ನುತ್ತಿದೆ-
ಕಡುಕಷ್ಟ ಅನುಭವಿಸಿ ಜನ್ಮ ಕೊಟ್ಟವರು
ಬಿದ್ದರೆ ಎದ್ದರೆ ತಮಗೇ ನೋವಾಯಿತೆಂದವರು
ನಡೆ, ನುಡಿ ಕಲಿಸಿ
ಮಾಂಸದ ಮುದ್ದೆಯೊಂದನ್ನು ಮನುಷ್ಯಳನ್ನಾಗಿ ತಿದ್ದಿದವರು
ಆಸ್ಥೆಯಿಂದ ಹತ್ತಾರು ಕಡೆ ನೋಡಿ, ಮಾಡಿ, ಕುದುರಿಸಿ,
ಖರ್ಚುಮಾಡಿ,
ಹುಡುಗಾಟವಲ್ಲ ಇದು!
ಮುಕ್ಕಣ್ಣನ ರೀತಿ ತಾವು ವಿಷವುಂಡು
ನನಗೆ ಅಮೃತ ಉಣಿಸಿದವರು, ಅವರ
ಅವರ ರಕ್ತ ಮಾಂಸವೇ ಆದ ನಾನು
ಅವರಿಗೆ ಮಾಡಿದ್ದೇನು?-
ಸತ್ತಾಗ ಒಂದು ಕಾಯಿ, ಕಡ್ಡಿ,
ಬೊಗಸೆ, ಬೊಗಸೆ ಕಣ್ಣೀರು ಅಷ್ಟೆ!

ಛಿ! ನಾನೊಬ್ಬ ಕೃತಘ್ಞಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...