Home / ಕವನ / ಕವಿತೆ / ಛಿ! ನಾನೊಬ್ಬ ಕೃತಘ್ನಳು

ಛಿ! ನಾನೊಬ್ಬ ಕೃತಘ್ನಳು

ನನ್ನಮ್ಮ ಬಂದಳು ನನ್ನಪ್ಪ ಬಂದರು
ನನ್ನಣ್ಣ ತಮ್ಮದಿರು ನನ್ನಕ್ಕ ತಂಗೇರು,
ನನ್ನವರು ಬಂದರೆಂದು ಸಂಭ್ರಮ ಪಡುವಂಗಿಲ್ಲ
ಸ್ವತಂತ್ರವಾಗಿ ಒಂದು ಕರ್ರಂದು ಬೆಳ್ಳಂದು ಮಾಡಿಡುವಂಗಿಲ್ಲ
ಕಷ್ಟ, ನಷ್ಟ ಅಂದರೆ ಕೈಲಾದ್ದ ಮಾಡುವಂಗಿಲ್ಲ
ಆದರೂ… ಈ ಮನೆ, ಆಸ್ತಿಯ ಸಹ ಯಜಮಾನಿ!

ಅಪ್ಪ ಅಮ್ಮನ ದಿನಗಳು ಆಗುತ್ತ ಬಂದವು
ಸಾಕೋದು, ಸೇವೆ ಮಾಡುವುದಂತೂ ಆಗಲಿಲ್ಲ
ಎಡಕ್ಕೂ ಬಲಕ್ಕೂ ಹೋಗಿ ನೋಡಿಕೊಂಡು, ಮಾತಾಡಿಸಿಕೊಂಡು
ಬರೋಣಾಂದ್ರೆ

ನನ್ನಿಚ್ಛೆಯಲ್ಲ,
ಇವರ ಮರ್ಜಿ ಹಿಡಿಬೇಕು
ಕಟ್ಟು ಮಾಡಿದಂಗೆ ಬಂದು ಬಿಡಬೇಕು
ತಪ್ಪಿದರೆ ಇದೇ ಕೊನೆ ಅಂಡ್ಕೊಂಡು ಬಿಡಬೇಕು,
ಇದು ನನ್ನ ಅವಸ್ಥೆ ನೋಡಿ,
ಅನ್ನ ನಾನು ತಿಂದರೆ ನನ್ನನ್ನು ಅನ್ನ ತಿನ್ನುತ್ತಿದೆ-
ಕಡುಕಷ್ಟ ಅನುಭವಿಸಿ ಜನ್ಮ ಕೊಟ್ಟವರು
ಬಿದ್ದರೆ ಎದ್ದರೆ ತಮಗೇ ನೋವಾಯಿತೆಂದವರು
ನಡೆ, ನುಡಿ ಕಲಿಸಿ
ಮಾಂಸದ ಮುದ್ದೆಯೊಂದನ್ನು ಮನುಷ್ಯಳನ್ನಾಗಿ ತಿದ್ದಿದವರು
ಆಸ್ಥೆಯಿಂದ ಹತ್ತಾರು ಕಡೆ ನೋಡಿ, ಮಾಡಿ, ಕುದುರಿಸಿ,
ಖರ್ಚುಮಾಡಿ,
ಹುಡುಗಾಟವಲ್ಲ ಇದು!
ಮುಕ್ಕಣ್ಣನ ರೀತಿ ತಾವು ವಿಷವುಂಡು
ನನಗೆ ಅಮೃತ ಉಣಿಸಿದವರು, ಅವರ
ಅವರ ರಕ್ತ ಮಾಂಸವೇ ಆದ ನಾನು
ಅವರಿಗೆ ಮಾಡಿದ್ದೇನು?-
ಸತ್ತಾಗ ಒಂದು ಕಾಯಿ, ಕಡ್ಡಿ,
ಬೊಗಸೆ, ಬೊಗಸೆ ಕಣ್ಣೀರು ಅಷ್ಟೆ!

ಛಿ! ನಾನೊಬ್ಬ ಕೃತಘ್ಞಳು.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...