ನಮ್ಮ ಶತ್ರುವು ನಮಗೆ ಕಾಣುತ್ತಿಲ್ಲ

ನಮ್ಮ ಶತ್ರುವು ನಮಗೆ ಕಾಣುತ್ತಿಲ್ಲ
ವಿಜಯವು ಹೇಗೆ….
ಇನ್ನು ವಿಜಯವು ಹೇಗೆ?
ಕಾಣುವ ದಾರಿ ಕಂಡರೂ ತುಳಿಯುತ್ತಿಲ್ಲ
ಮಾತುಗಳೇಕೆ….
ಇನ್ನು ಭವಿಷ್ಯ ಹೇಗೆ? //ಪ//

ಭೂಮಿಗೆ ಇಲ್ಲ ಬರ; ಆದರೂ ಕೊಳೆಗೇರಿಗಳು
ನದಿಗಳಿಗಿಲ್ಲ ಬರ; ಆದರೂ ಹೋರಾಟಗಳು
ತಪ್ಪಿದೆ ತಾಳ ಎಲ್ಲಿ?
ತಪ್ಪಿವೆ ಹೆಜ್ಜೆಗಳೆಲ್ಲಿ?
ಬಲ್ಲವರಾರು ಇದನು?
ಕೇಳಲು ಇಹರೆ ಇದನು? ||೧||

ಇಲ್ಲಿಯವರೆಗೂ ಗಂಟು; ಬಿಡಿಸಿಕೊಳ್ಳೆವೆ ಇದನು
ನರನೆ ಹಾಕಿದ ಗಂಟು; ಬಿಡಿಸನೆ ನರಮಾನವನು
ಆದರೂ ಗಗನಕೆ ದೃಷ್ಟಿ
ಇದು ಯಾವ್‌ಬಗೆಯ ಸೃಷ್ಟಿ
ತಿಳಿಯದಿದ್ದರೆ ನೆಲವ
ಸೇರಲೆಬೇಕು ತಳವ ||೨||

ಜೊತೆಯವರು ನಡೆದಿರಲು; ಮುಂದಕೆ ಇನ್ನೂ ಮುಂದಕೆ
ನಮ್ಮ ಹೆಜ್ಜೆಗಳು ಯಾಕೆ; ಹಿಂದಕೆ ಇನ್ನೂ ಹಿಂದಕೆ
ಅನ್ಯರಿಗಿರದ ಶತ್ರು
ನಮಗೆ ಮಾತ್ರವೆ ಹೇಳಿ
ಅವರು ಕಾಣಲು ಭವಿಷ್ಯ
ನಮಗೆ ಏತಕೆ ಜೋತಿಷ್ಯ? ||೩||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಛಿ! ನಾನೊಬ್ಬ ಕೃತಘ್ನಳು
Next post ಸಮೂಹ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…