ನಮ್ಮ ಶತ್ರುವು ನಮಗೆ ಕಾಣುತ್ತಿಲ್ಲ

ನಮ್ಮ ಶತ್ರುವು ನಮಗೆ ಕಾಣುತ್ತಿಲ್ಲ
ವಿಜಯವು ಹೇಗೆ….
ಇನ್ನು ವಿಜಯವು ಹೇಗೆ?
ಕಾಣುವ ದಾರಿ ಕಂಡರೂ ತುಳಿಯುತ್ತಿಲ್ಲ
ಮಾತುಗಳೇಕೆ….
ಇನ್ನು ಭವಿಷ್ಯ ಹೇಗೆ? //ಪ//

ಭೂಮಿಗೆ ಇಲ್ಲ ಬರ; ಆದರೂ ಕೊಳೆಗೇರಿಗಳು
ನದಿಗಳಿಗಿಲ್ಲ ಬರ; ಆದರೂ ಹೋರಾಟಗಳು
ತಪ್ಪಿದೆ ತಾಳ ಎಲ್ಲಿ?
ತಪ್ಪಿವೆ ಹೆಜ್ಜೆಗಳೆಲ್ಲಿ?
ಬಲ್ಲವರಾರು ಇದನು?
ಕೇಳಲು ಇಹರೆ ಇದನು? ||೧||

ಇಲ್ಲಿಯವರೆಗೂ ಗಂಟು; ಬಿಡಿಸಿಕೊಳ್ಳೆವೆ ಇದನು
ನರನೆ ಹಾಕಿದ ಗಂಟು; ಬಿಡಿಸನೆ ನರಮಾನವನು
ಆದರೂ ಗಗನಕೆ ದೃಷ್ಟಿ
ಇದು ಯಾವ್‌ಬಗೆಯ ಸೃಷ್ಟಿ
ತಿಳಿಯದಿದ್ದರೆ ನೆಲವ
ಸೇರಲೆಬೇಕು ತಳವ ||೨||

ಜೊತೆಯವರು ನಡೆದಿರಲು; ಮುಂದಕೆ ಇನ್ನೂ ಮುಂದಕೆ
ನಮ್ಮ ಹೆಜ್ಜೆಗಳು ಯಾಕೆ; ಹಿಂದಕೆ ಇನ್ನೂ ಹಿಂದಕೆ
ಅನ್ಯರಿಗಿರದ ಶತ್ರು
ನಮಗೆ ಮಾತ್ರವೆ ಹೇಳಿ
ಅವರು ಕಾಣಲು ಭವಿಷ್ಯ
ನಮಗೆ ಏತಕೆ ಜೋತಿಷ್ಯ? ||೩||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಛಿ! ನಾನೊಬ್ಬ ಕೃತಘ್ನಳು
Next post ಸಮೂಹ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys