Home / ಕವನ / ಕವಿತೆ / ಪ್ರೀತಿಯ ಟೈಲರ್

ಪ್ರೀತಿಯ ಟೈಲರ್

ಗೆಳೆಯ ಟೈಲರ್ ಇದ್ದ ಆರೂವರೆ ಅಡಿ
ವಿರಗಿ ವಿರಾಹಿ ನಿರಾಶಾವಾದಿ
ಕಳೆದಿಹನು ಏಳೂವರೆ ದಶಕ
ವಾಕಿಂಗು, ಜಾಗಿಂಗ್‌ನಲಿ ಬೆರೆಯುತ್ತಿದ್ದನೆಲ್ಲರ
ಅನುಮಾನದಿ ಕಾಣುತ್ತಿದ್ದ ಅವರಿವರನು
ಆದರೂ ನಂಬಿ ಇವನ ಬಳಿ
ಸುಳಿವ ಗಿರಾಕಿ ಸ್ನೇಹಿತರನೇಕರು

ಸಮಯಕೆ ಅಂಗಿ ಹೊಲಿದು ಕೊಡಲಿಲ್ಲೆಂದು
ಹೋದವರೆಷ್ಟೋ ಗಿರಾಕಿಗಳು ಕೋಪ ತಾಪದಲಿ
ಸಮಯಕೆ ಬಟ್ಟೆ ಕೊಡುವ ಪರಿಯಿಲ್ಲೆಂದರು
ಪೇಟೆಯವರಷ್ಟೇ ಅಲ್ಲ ಹಳ್ಳಿಯವರೂ
ಬಾರಿ ಬಾರಿ ಕನಲಿ ಪ್ರೀತಿಯಲಿ
ಇವ ಹೊಲಿದಂಗಿಯೇ ಬೇಕೆನ್ನುವರು

ಎಲ್ಲರಂತಿವನಲ್ಲ ಈ ಟೈಲರ್
ಭೀಮಣ್ಣ, ರಘಣ್ಣ, ಮಲ್ಲಿಕಣ್ಣ, ಶ್ರೀಧರ
ಗುಡಿಗಾರ ನಾರಾಯಣಪ್ಪ, ಪ್ರಕಾಶ್‌, ಸೇನಾಪತಿ
ಹೀಗೆ ಅನೇಕರ ಸ್ನೇಹ ಮಾಡಿದ
ಇವ ಯಾರ ಹಂಗಿಲ್ಲದಂತಿದ್ದ
ಆದರಿವ ಟೈಲರೊಳಗುತ್ತಮ ಟೈಲರ್
ಸದಾ ಹೂವಿನಂತೆ ಹಸನ್ಮುಖಿ
ನಡು ನಡುವೆ ಒಮ್ಮೊಮ್ಮೆ ಸಿಡುಕುತ್ತಿದ್ದ
ಆದರೂ ನಮ್ಮೆಲ್ಲರ ಪ್ರೀತಿಯ ಟೈಲರ್

ಎಳೆಯರ ಹಿರಿಯರ, ಹೆಂಗಳೆಯರ
ಮನವ ಗೆಲಿದಿಹನು ನಮ್ರ ಮಾತಿನಲಿ
ನೇರ ನಡೆ ನುಡಿಯುವನೀತ ತೀಕ್ಷಣದಲಿ
ಜೀವನದಲಿ ಹಿಗ್ಗರಿಸಿ ಮುಗ್ಗರಿಸಿ
ಗಿರಾಕಿಗಳ ರಂಜಿಸಿ ಪ್ರೀತಿಯ ಕಾಣುತಲಿ
ಸಲ್ಲಿಸುತಿಹನು ಉಚಿತ ಸೇವೆಯ

ಶವದ ಚೀಲ ಹೊಲಿದು ಕೊಡುತ
ಕಾಗೆಗಳಿಗೆ ಬ್ರೆಡ್‌ ಮಂಡಕ್ಕಿ ಹಾಕುತ
ಕಾಗೆಗಳೊಂದಿಗೆ ಪ್ರೀತಿಯ ಗಳಿಸಿದ

ಇವ ಎಲ್ಲರಿಗೂ ಮಾದರಿ ಟೈಲರ್
ಸಾಗರದ ಎಸ್ಸೆನ್ ನಗರದಲ್ಲೊಂದು
ಖರೀದಿಸಿದ ನಿವೇಶನದಲಿ
ವಾಸ ಮಾಡ ತೊಡಗಿದ
ಚಿಕ್ಕದಾದ ಚೊಕ್ಕದಾದ ಎರಡು
ರೂಮಿನ ಮನೆಯ ಕಟ್ಟಿಸಿ

ವಯಸ್ಸು ನಿಲ್ಲುವುದೇ
ಆರೋಗ್ಯ ಹದಗೆಟ್ಟಿತು ಒಂಟಿ ಜೀವಕೆ
ಅಂದುರಾತ್ರಿ ಹನ್ನೆರಡು ಬಡಿದಿತ್ತು
ಓಡಿದ ಗೆಳೆಯ ಮಲ್ಲಿಕಣ್ಣನ ಮನೆಗೆ
ಹೊಟ್ಟೆ ಸರಿಯಿಲ್ಲೆಂದ ಸೀರಿಯಸ್ಸೆಂದ ಅವನೆಬ್ಬಿಸಿ
ಸರಿ, ನಡೆ ಎಂದವನ ಸೇರಿಸಿದರು
ಆಸ್ಪತ್ರೆಗೆ ಸರಿರಾತ್ರಿಯಲಿ

ಶ್ರೀಧರನ ಕರೆಸಿದರೂ ಜಗ್ಗಲಿಲ್ಲ
ಭೀಮಣ್ಣನ, ರಘಣ್ಣನ ಕರೆಯಿಸಿದರು
ಸ್ನೇಹಿತನ ಸಹಾಯಕ್ಕೆ ಧಾವಿಸಿದರೆಲ್ಲರೂ
ಬೆಂಗಳೂರಿನಲ್ಲಿದ್ದ ಹೆಂಡತಿ ಮಕ್ಕಳಿಗೆ
ಫೋನಾಯಿಸಿದರು ಆದೀತೆಂದು ಹೆಚ್ಚು ಕಡಿಮೆ
ಬಂದ ಬಂಧುಗಳು ಕರೆದೊಯ್ದರು
ಅಲ್ಲಿಯೂ ಅವರನ್ನು ಕಂಡ ಅನುಮಾನದಿ

ಒಂದು ದಿನ ಇದ್ದಕ್ಕಿದ್ದಂತೆ ಇವ ಮಾಯ
ಗಾಬರಿ ಮನೆಯವರೆಲ್ಲ
ಎಲ್ಲಿ ಹೋದರೆಂದು ತಿಳಿಯಲಿಲ್ಲ
ನೀಡಿದರು ಕಂಪ್ಲೆಂಟು
ಎಷ್ಟು ಹುಡುಕಿದರೂ
ಪ್ರೀತಿಯ ಟೈಲರ್ ಸಿಗಲೇ ಇಲ್ಲ

ಯಾರಿಗೂ ತಿಳಿಸದೇ ಸೇರಿದ್ದ ವೃದ್ಧಾಶ್ರಮ
ನಾನು ಅನಾಥ ನನಗೆ ಯಾರೂ ಇಲ್ಲೆಂದ
ಅಲ್ಲಿಯೂ ತರಲೆ ಸಿಡುಕುತನ ಜಗಳ
ಅರೆ ಹುಚ್ಚುತನದಲಿ ಆಗಿಬಿಟ್ಟ ಪ್ರೀತಿಯ ಟೈಲರ್

‘ನನ್ನ ತಮ್ಮ ರಮೇಶ
ಶಿಕಾರಿಪುರದಲಿ ಪೋಲೀಸ್‌ ಎಂದು’
ಬಿಟ್ಟ ಬಾಯಿ ಈ ಟೈಲರ್
ತಮ್ಮನ ಕರೆಯಿಸಿ ಅವನಿಗೊಪ್ಪಿಸಿದರು
ಅಂತೂ ಮೂವತ್ತೈದು ನಾಲ್ವತ್ತು ವರ್ಷಗಳಿಂದ ಬಿಟ್ಟಿದ್ದ
ಹೆಂಡತಿಯೊಂದಿಗೆ ಸೇರಿಸಿದಾಕ್ಷಣದಲಿ
ಮೋಕ್ಷಕೆ ದಾರಿಯಾಯಿತು ಸುಗಮ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ