ಪ್ರೀತಿಯ ಟೈಲರ್

ಗೆಳೆಯ ಟೈಲರ್ ಇದ್ದ ಆರೂವರೆ ಅಡಿ
ವಿರಗಿ ವಿರಾಹಿ ನಿರಾಶಾವಾದಿ
ಕಳೆದಿಹನು ಏಳೂವರೆ ದಶಕ
ವಾಕಿಂಗು, ಜಾಗಿಂಗ್‌ನಲಿ ಬೆರೆಯುತ್ತಿದ್ದನೆಲ್ಲರ
ಅನುಮಾನದಿ ಕಾಣುತ್ತಿದ್ದ ಅವರಿವರನು
ಆದರೂ ನಂಬಿ ಇವನ ಬಳಿ
ಸುಳಿವ ಗಿರಾಕಿ ಸ್ನೇಹಿತರನೇಕರು

ಸಮಯಕೆ ಅಂಗಿ ಹೊಲಿದು ಕೊಡಲಿಲ್ಲೆಂದು
ಹೋದವರೆಷ್ಟೋ ಗಿರಾಕಿಗಳು ಕೋಪ ತಾಪದಲಿ
ಸಮಯಕೆ ಬಟ್ಟೆ ಕೊಡುವ ಪರಿಯಿಲ್ಲೆಂದರು
ಪೇಟೆಯವರಷ್ಟೇ ಅಲ್ಲ ಹಳ್ಳಿಯವರೂ
ಬಾರಿ ಬಾರಿ ಕನಲಿ ಪ್ರೀತಿಯಲಿ
ಇವ ಹೊಲಿದಂಗಿಯೇ ಬೇಕೆನ್ನುವರು

ಎಲ್ಲರಂತಿವನಲ್ಲ ಈ ಟೈಲರ್
ಭೀಮಣ್ಣ, ರಘಣ್ಣ, ಮಲ್ಲಿಕಣ್ಣ, ಶ್ರೀಧರ
ಗುಡಿಗಾರ ನಾರಾಯಣಪ್ಪ, ಪ್ರಕಾಶ್‌, ಸೇನಾಪತಿ
ಹೀಗೆ ಅನೇಕರ ಸ್ನೇಹ ಮಾಡಿದ
ಇವ ಯಾರ ಹಂಗಿಲ್ಲದಂತಿದ್ದ
ಆದರಿವ ಟೈಲರೊಳಗುತ್ತಮ ಟೈಲರ್
ಸದಾ ಹೂವಿನಂತೆ ಹಸನ್ಮುಖಿ
ನಡು ನಡುವೆ ಒಮ್ಮೊಮ್ಮೆ ಸಿಡುಕುತ್ತಿದ್ದ
ಆದರೂ ನಮ್ಮೆಲ್ಲರ ಪ್ರೀತಿಯ ಟೈಲರ್

ಎಳೆಯರ ಹಿರಿಯರ, ಹೆಂಗಳೆಯರ
ಮನವ ಗೆಲಿದಿಹನು ನಮ್ರ ಮಾತಿನಲಿ
ನೇರ ನಡೆ ನುಡಿಯುವನೀತ ತೀಕ್ಷಣದಲಿ
ಜೀವನದಲಿ ಹಿಗ್ಗರಿಸಿ ಮುಗ್ಗರಿಸಿ
ಗಿರಾಕಿಗಳ ರಂಜಿಸಿ ಪ್ರೀತಿಯ ಕಾಣುತಲಿ
ಸಲ್ಲಿಸುತಿಹನು ಉಚಿತ ಸೇವೆಯ

ಶವದ ಚೀಲ ಹೊಲಿದು ಕೊಡುತ
ಕಾಗೆಗಳಿಗೆ ಬ್ರೆಡ್‌ ಮಂಡಕ್ಕಿ ಹಾಕುತ
ಕಾಗೆಗಳೊಂದಿಗೆ ಪ್ರೀತಿಯ ಗಳಿಸಿದ

ಇವ ಎಲ್ಲರಿಗೂ ಮಾದರಿ ಟೈಲರ್
ಸಾಗರದ ಎಸ್ಸೆನ್ ನಗರದಲ್ಲೊಂದು
ಖರೀದಿಸಿದ ನಿವೇಶನದಲಿ
ವಾಸ ಮಾಡ ತೊಡಗಿದ
ಚಿಕ್ಕದಾದ ಚೊಕ್ಕದಾದ ಎರಡು
ರೂಮಿನ ಮನೆಯ ಕಟ್ಟಿಸಿ

ವಯಸ್ಸು ನಿಲ್ಲುವುದೇ
ಆರೋಗ್ಯ ಹದಗೆಟ್ಟಿತು ಒಂಟಿ ಜೀವಕೆ
ಅಂದುರಾತ್ರಿ ಹನ್ನೆರಡು ಬಡಿದಿತ್ತು
ಓಡಿದ ಗೆಳೆಯ ಮಲ್ಲಿಕಣ್ಣನ ಮನೆಗೆ
ಹೊಟ್ಟೆ ಸರಿಯಿಲ್ಲೆಂದ ಸೀರಿಯಸ್ಸೆಂದ ಅವನೆಬ್ಬಿಸಿ
ಸರಿ, ನಡೆ ಎಂದವನ ಸೇರಿಸಿದರು
ಆಸ್ಪತ್ರೆಗೆ ಸರಿರಾತ್ರಿಯಲಿ

ಶ್ರೀಧರನ ಕರೆಸಿದರೂ ಜಗ್ಗಲಿಲ್ಲ
ಭೀಮಣ್ಣನ, ರಘಣ್ಣನ ಕರೆಯಿಸಿದರು
ಸ್ನೇಹಿತನ ಸಹಾಯಕ್ಕೆ ಧಾವಿಸಿದರೆಲ್ಲರೂ
ಬೆಂಗಳೂರಿನಲ್ಲಿದ್ದ ಹೆಂಡತಿ ಮಕ್ಕಳಿಗೆ
ಫೋನಾಯಿಸಿದರು ಆದೀತೆಂದು ಹೆಚ್ಚು ಕಡಿಮೆ
ಬಂದ ಬಂಧುಗಳು ಕರೆದೊಯ್ದರು
ಅಲ್ಲಿಯೂ ಅವರನ್ನು ಕಂಡ ಅನುಮಾನದಿ

ಒಂದು ದಿನ ಇದ್ದಕ್ಕಿದ್ದಂತೆ ಇವ ಮಾಯ
ಗಾಬರಿ ಮನೆಯವರೆಲ್ಲ
ಎಲ್ಲಿ ಹೋದರೆಂದು ತಿಳಿಯಲಿಲ್ಲ
ನೀಡಿದರು ಕಂಪ್ಲೆಂಟು
ಎಷ್ಟು ಹುಡುಕಿದರೂ
ಪ್ರೀತಿಯ ಟೈಲರ್ ಸಿಗಲೇ ಇಲ್ಲ

ಯಾರಿಗೂ ತಿಳಿಸದೇ ಸೇರಿದ್ದ ವೃದ್ಧಾಶ್ರಮ
ನಾನು ಅನಾಥ ನನಗೆ ಯಾರೂ ಇಲ್ಲೆಂದ
ಅಲ್ಲಿಯೂ ತರಲೆ ಸಿಡುಕುತನ ಜಗಳ
ಅರೆ ಹುಚ್ಚುತನದಲಿ ಆಗಿಬಿಟ್ಟ ಪ್ರೀತಿಯ ಟೈಲರ್

‘ನನ್ನ ತಮ್ಮ ರಮೇಶ
ಶಿಕಾರಿಪುರದಲಿ ಪೋಲೀಸ್‌ ಎಂದು’
ಬಿಟ್ಟ ಬಾಯಿ ಈ ಟೈಲರ್
ತಮ್ಮನ ಕರೆಯಿಸಿ ಅವನಿಗೊಪ್ಪಿಸಿದರು
ಅಂತೂ ಮೂವತ್ತೈದು ನಾಲ್ವತ್ತು ವರ್ಷಗಳಿಂದ ಬಿಟ್ಟಿದ್ದ
ಹೆಂಡತಿಯೊಂದಿಗೆ ಸೇರಿಸಿದಾಕ್ಷಣದಲಿ
ಮೋಕ್ಷಕೆ ದಾರಿಯಾಯಿತು ಸುಗಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪವರ್‍ಸ್
Next post ಆಪಾದಿತೆ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…