ಷಣ್‍ಮುಖ


ಕೋಳಿ ಕೂಗೋದು ಕಾದು
ಬಾಳ ತಂಗಳು ತಿಂದು
ಹೊತ್ತಿನ ಜತ್ಯಾಗೆ ಹೊಲದಾಕೆ ಬಂದು
ಬಿತ್ತಿದ್ದು ಒಣ ನವಣೆ
ಬೆಳೆದದ್ದು ಬರೀ ಬವಣೆ.


ಹಾರಕ ತಂದು ನೆಲತುಂಬ ಹೊಯ್ದರೂ
ಸುರಕೊಂಡಿದ್ದು ಮಾತ್ರ ಹತ್ತಾರು ಸೇರು
ತಿಂದು ಕುಂತರೆ ಈಗ
ಮುಂದೆ ಬೀಜಕ್ಕೆ ಕಾಳಿಲ್ಲ
ಹೊಟ್ಟೆ ಕಟ್ಟಿದರೂ ಹಾರಕಕ್ಕೆ ಬೆಲೆಯಿಲ್ಲ.


ಕಡಲೆ ಕಾಯಿಯ ಬೀಜ
ಒಣ ಹೂಲದ ರಾಜ
ಬಿತ್ತಿ, ಬೆಳೆಯಿತು ಆಸೆ.

ಹರಡಿಕೊಂಡು ಗಿಡ
ನೂರು ಬೇರಿನ ಬುಡ
ರೆಪ್ಪೆಯಂಚಿನ ಒಳಗೆ
ಬಿರಿದ ಕಮಲ
ಕಣ್ಣು ತೆರೆದರೆ ಅಲ್ಲಿ
ಉರಿಗಣ್ಣ ಸೂರ್ಯನಿಗೆ
ಸೀದು ಹೋದ ಹಸಿರು
ಹೊಲವೆಲ್ಲ ನಿಟ್ಟುಸಿರು.


ರಾಗಿ ಪೈರಿನ ಬೆಳಸು
ತೂಗಿ ತೊನೆಯುವ ತೆನೆ
ಎದೆಯಾಗೆ ಮೂಡಿದವು
ರಾಶಿರಾಶಿ ಮುದ್ದೆ.

ಕುಣಿದು ಕುಪ್ಪಳಿಸಿ
ಕೈ ಚಾಚಿದರೆ
ಬಂಧನದ ಬೇಡಿ
ತೆನೆ ರುಂಡ ತಂದು
ಒಂದರ ಹಿಂದೊಂದು
ತುಂಬಿದ ಗಾಡಿ.


ಭತ್ತ ಬೆಳೆಯೋಣೆಂದರೆ
ಬಾವಿಯಿಲ್ಲ
ಕೆರೆಯ ಹಿಂದುಗಡೆ
ಗದ್ದೆಯಿಲ್ಲ.

ಅಕ್ಕಿ ಹಕ್ಕಿಯ ರೆಕ್ಕೆ
ಸುಟ್ಟು ಬಿದ್ದಿತು ನೆಲಕೆ
ಅನ್ನ ತಿನ್ನುವ ಆಸೆ
ಬಂಜೆ ಬಯಕೆ.


ನವಣೆ ಹಾರಕವಿಲ್ಲ
ಕಡಲೆಕಾಯಿ ಬೀಜವಿಲ್ಲ
ಅಕ್ಕಿ ರಾಗಿಯ ಹೆಸರು
ಎತ್ತೊ ಹಂಗಿಲ್ಲ.

ಕಂಡೂರ ಹೊಲದಾಗೆ
ಕೂಲಿ ಮಾಡಿದರುಂಟು
ಎತ್ತು ನೇಗಿಲಿಗೆಲ್ಲ
ಬಾಡಿಗೆ ನಂಟು.

ನೋವು ತುಂಬಿದ ನಾನು
ಏನ ಪ್ರೀತಿಸಲಿನ್ನು
ನೆಲವೂ ಇಲ್ಲ, ನೇಗಿಲೂ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಸಾರ್ ಅಹಮದ್‌ ಅವರ ಕೆಲವು ಕವಿತೆಗಳು
Next post ಸಮಯ ಸಂದರ್ಭ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys