ಷಣ್‍ಮುಖ


ಕೋಳಿ ಕೂಗೋದು ಕಾದು
ಬಾಳ ತಂಗಳು ತಿಂದು
ಹೊತ್ತಿನ ಜತ್ಯಾಗೆ ಹೊಲದಾಕೆ ಬಂದು
ಬಿತ್ತಿದ್ದು ಒಣ ನವಣೆ
ಬೆಳೆದದ್ದು ಬರೀ ಬವಣೆ.


ಹಾರಕ ತಂದು ನೆಲತುಂಬ ಹೊಯ್ದರೂ
ಸುರಕೊಂಡಿದ್ದು ಮಾತ್ರ ಹತ್ತಾರು ಸೇರು
ತಿಂದು ಕುಂತರೆ ಈಗ
ಮುಂದೆ ಬೀಜಕ್ಕೆ ಕಾಳಿಲ್ಲ
ಹೊಟ್ಟೆ ಕಟ್ಟಿದರೂ ಹಾರಕಕ್ಕೆ ಬೆಲೆಯಿಲ್ಲ.


ಕಡಲೆ ಕಾಯಿಯ ಬೀಜ
ಒಣ ಹೂಲದ ರಾಜ
ಬಿತ್ತಿ, ಬೆಳೆಯಿತು ಆಸೆ.

ಹರಡಿಕೊಂಡು ಗಿಡ
ನೂರು ಬೇರಿನ ಬುಡ
ರೆಪ್ಪೆಯಂಚಿನ ಒಳಗೆ
ಬಿರಿದ ಕಮಲ
ಕಣ್ಣು ತೆರೆದರೆ ಅಲ್ಲಿ
ಉರಿಗಣ್ಣ ಸೂರ್ಯನಿಗೆ
ಸೀದು ಹೋದ ಹಸಿರು
ಹೊಲವೆಲ್ಲ ನಿಟ್ಟುಸಿರು.


ರಾಗಿ ಪೈರಿನ ಬೆಳಸು
ತೂಗಿ ತೊನೆಯುವ ತೆನೆ
ಎದೆಯಾಗೆ ಮೂಡಿದವು
ರಾಶಿರಾಶಿ ಮುದ್ದೆ.

ಕುಣಿದು ಕುಪ್ಪಳಿಸಿ
ಕೈ ಚಾಚಿದರೆ
ಬಂಧನದ ಬೇಡಿ
ತೆನೆ ರುಂಡ ತಂದು
ಒಂದರ ಹಿಂದೊಂದು
ತುಂಬಿದ ಗಾಡಿ.


ಭತ್ತ ಬೆಳೆಯೋಣೆಂದರೆ
ಬಾವಿಯಿಲ್ಲ
ಕೆರೆಯ ಹಿಂದುಗಡೆ
ಗದ್ದೆಯಿಲ್ಲ.

ಅಕ್ಕಿ ಹಕ್ಕಿಯ ರೆಕ್ಕೆ
ಸುಟ್ಟು ಬಿದ್ದಿತು ನೆಲಕೆ
ಅನ್ನ ತಿನ್ನುವ ಆಸೆ
ಬಂಜೆ ಬಯಕೆ.


ನವಣೆ ಹಾರಕವಿಲ್ಲ
ಕಡಲೆಕಾಯಿ ಬೀಜವಿಲ್ಲ
ಅಕ್ಕಿ ರಾಗಿಯ ಹೆಸರು
ಎತ್ತೊ ಹಂಗಿಲ್ಲ.

ಕಂಡೂರ ಹೊಲದಾಗೆ
ಕೂಲಿ ಮಾಡಿದರುಂಟು
ಎತ್ತು ನೇಗಿಲಿಗೆಲ್ಲ
ಬಾಡಿಗೆ ನಂಟು.

ನೋವು ತುಂಬಿದ ನಾನು
ಏನ ಪ್ರೀತಿಸಲಿನ್ನು
ನೆಲವೂ ಇಲ್ಲ, ನೇಗಿಲೂ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಸಾರ್ ಅಹಮದ್‌ ಅವರ ಕೆಲವು ಕವಿತೆಗಳು
Next post ಸಮಯ ಸಂದರ್ಭ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…