ಷಣ್‍ಮುಖ


ಕೋಳಿ ಕೂಗೋದು ಕಾದು
ಬಾಳ ತಂಗಳು ತಿಂದು
ಹೊತ್ತಿನ ಜತ್ಯಾಗೆ ಹೊಲದಾಕೆ ಬಂದು
ಬಿತ್ತಿದ್ದು ಒಣ ನವಣೆ
ಬೆಳೆದದ್ದು ಬರೀ ಬವಣೆ.


ಹಾರಕ ತಂದು ನೆಲತುಂಬ ಹೊಯ್ದರೂ
ಸುರಕೊಂಡಿದ್ದು ಮಾತ್ರ ಹತ್ತಾರು ಸೇರು
ತಿಂದು ಕುಂತರೆ ಈಗ
ಮುಂದೆ ಬೀಜಕ್ಕೆ ಕಾಳಿಲ್ಲ
ಹೊಟ್ಟೆ ಕಟ್ಟಿದರೂ ಹಾರಕಕ್ಕೆ ಬೆಲೆಯಿಲ್ಲ.


ಕಡಲೆ ಕಾಯಿಯ ಬೀಜ
ಒಣ ಹೂಲದ ರಾಜ
ಬಿತ್ತಿ, ಬೆಳೆಯಿತು ಆಸೆ.

ಹರಡಿಕೊಂಡು ಗಿಡ
ನೂರು ಬೇರಿನ ಬುಡ
ರೆಪ್ಪೆಯಂಚಿನ ಒಳಗೆ
ಬಿರಿದ ಕಮಲ
ಕಣ್ಣು ತೆರೆದರೆ ಅಲ್ಲಿ
ಉರಿಗಣ್ಣ ಸೂರ್ಯನಿಗೆ
ಸೀದು ಹೋದ ಹಸಿರು
ಹೊಲವೆಲ್ಲ ನಿಟ್ಟುಸಿರು.


ರಾಗಿ ಪೈರಿನ ಬೆಳಸು
ತೂಗಿ ತೊನೆಯುವ ತೆನೆ
ಎದೆಯಾಗೆ ಮೂಡಿದವು
ರಾಶಿರಾಶಿ ಮುದ್ದೆ.

ಕುಣಿದು ಕುಪ್ಪಳಿಸಿ
ಕೈ ಚಾಚಿದರೆ
ಬಂಧನದ ಬೇಡಿ
ತೆನೆ ರುಂಡ ತಂದು
ಒಂದರ ಹಿಂದೊಂದು
ತುಂಬಿದ ಗಾಡಿ.


ಭತ್ತ ಬೆಳೆಯೋಣೆಂದರೆ
ಬಾವಿಯಿಲ್ಲ
ಕೆರೆಯ ಹಿಂದುಗಡೆ
ಗದ್ದೆಯಿಲ್ಲ.

ಅಕ್ಕಿ ಹಕ್ಕಿಯ ರೆಕ್ಕೆ
ಸುಟ್ಟು ಬಿದ್ದಿತು ನೆಲಕೆ
ಅನ್ನ ತಿನ್ನುವ ಆಸೆ
ಬಂಜೆ ಬಯಕೆ.


ನವಣೆ ಹಾರಕವಿಲ್ಲ
ಕಡಲೆಕಾಯಿ ಬೀಜವಿಲ್ಲ
ಅಕ್ಕಿ ರಾಗಿಯ ಹೆಸರು
ಎತ್ತೊ ಹಂಗಿಲ್ಲ.

ಕಂಡೂರ ಹೊಲದಾಗೆ
ಕೂಲಿ ಮಾಡಿದರುಂಟು
ಎತ್ತು ನೇಗಿಲಿಗೆಲ್ಲ
ಬಾಡಿಗೆ ನಂಟು.

ನೋವು ತುಂಬಿದ ನಾನು
ಏನ ಪ್ರೀತಿಸಲಿನ್ನು
ನೆಲವೂ ಇಲ್ಲ, ನೇಗಿಲೂ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಸಾರ್ ಅಹಮದ್‌ ಅವರ ಕೆಲವು ಕವಿತೆಗಳು
Next post ಸಮಯ ಸಂದರ್ಭ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…