ಸಮಯ ಸಂದರ್ಭ

ಸಮಯ ಸಂದರ್ಭ
ಸಿಕ್ಕಾಗಲೆಲ್ಲಾ ಆ ದೇವರಿಗೊಂದು
ಕೃತಜ್ಞತೆ ಅರ್ಪಿಸುವುದೇ ಸೂಕ್ತ|
ಅವಕಾಶ ದೊರೆತಾಗಲೆಲ್ಲ
ಜನ್ಮನೀಡಿದ ತಂದೆತಾಯಿಗಳಿಗೆ
ಕೈಜೋಡಿಸಿ ನಮಿಸುವುದೇ ಸಮ್ಮತ||

ಎಂಥಹಾ ವಿಸ್ಮಯ ಈ ಜಗತ್ತು
ಇಲ್ಲಿ ಮನುಜನಾಗಿ ಜನ್ಮ
ತಳೆಯುವುದೇ ಪುಣ್ಯದ ಸ್ವತ್ತು|
ಈ ನರಜನ್ಮದ ಹಿರಿಮೆ ಅಪಾರ
ಈಜಿ ದಡಸೇರಬೇಕು ಈ ಸಂಸಾರ||

ಅತೀ ಸುಂದರ ಈ ಕರುನಾಡು
ನೀ ಜನಿಸಿರುವುದಕಿಲ್ಲಿ ಹೆಮ್ಮೆಪಡು|
ಶಾಂತಿಯ ನಾಡು ಸವೃದ್ಧಿಯಬೀಡು
ಬದುಕು ಬಲು ಸುಲಭ ಸುಂದರ
ಸರಳತೆಯಿಂದಲಿ ನೋಡಲೊಮ್ಮೆ
ತಿಳಿವುದಿದರ ಮಹಿಮೆ ಅಪಾರ||

ಬರಿಯ ತುತ್ತಿನ ಚೀಲವ
ತುಂಬುವುದೇ ಜೀವನವಲ್ಲ|
ಅದರಾಚೆಗಿನ ಜೀವನದಿ
ಪಾಪ ಕರ್ಮವ ಕಳೆಯೆ
ಸತ್ಕಾರ್ಯದಿ ಪುಣ್ಯ ಗಳಿಸುವ
ಬಾಳದಾರಿಯಲಿ ಸಾಗುವುದೇ ಜೀವನ|
ಸತ್ಯ ದರ್ಶನ, ದೈವ ಸಾಕ್ಷಾತ್ಕಾರದಿಂದಲಿ
ಈ ಜನ್ಮದ ಈ ಜೀವ ಪಾವನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಷಣ್‍ಮುಖ
Next post ಒಲವಿನಾಟ

ಸಣ್ಣ ಕತೆ

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…