ಸಮಯ ಸಂದರ್ಭ

ಸಮಯ ಸಂದರ್ಭ
ಸಿಕ್ಕಾಗಲೆಲ್ಲಾ ಆ ದೇವರಿಗೊಂದು
ಕೃತಜ್ಞತೆ ಅರ್ಪಿಸುವುದೇ ಸೂಕ್ತ|
ಅವಕಾಶ ದೊರೆತಾಗಲೆಲ್ಲ
ಜನ್ಮನೀಡಿದ ತಂದೆತಾಯಿಗಳಿಗೆ
ಕೈಜೋಡಿಸಿ ನಮಿಸುವುದೇ ಸಮ್ಮತ||

ಎಂಥಹಾ ವಿಸ್ಮಯ ಈ ಜಗತ್ತು
ಇಲ್ಲಿ ಮನುಜನಾಗಿ ಜನ್ಮ
ತಳೆಯುವುದೇ ಪುಣ್ಯದ ಸ್ವತ್ತು|
ಈ ನರಜನ್ಮದ ಹಿರಿಮೆ ಅಪಾರ
ಈಜಿ ದಡಸೇರಬೇಕು ಈ ಸಂಸಾರ||

ಅತೀ ಸುಂದರ ಈ ಕರುನಾಡು
ನೀ ಜನಿಸಿರುವುದಕಿಲ್ಲಿ ಹೆಮ್ಮೆಪಡು|
ಶಾಂತಿಯ ನಾಡು ಸವೃದ್ಧಿಯಬೀಡು
ಬದುಕು ಬಲು ಸುಲಭ ಸುಂದರ
ಸರಳತೆಯಿಂದಲಿ ನೋಡಲೊಮ್ಮೆ
ತಿಳಿವುದಿದರ ಮಹಿಮೆ ಅಪಾರ||

ಬರಿಯ ತುತ್ತಿನ ಚೀಲವ
ತುಂಬುವುದೇ ಜೀವನವಲ್ಲ|
ಅದರಾಚೆಗಿನ ಜೀವನದಿ
ಪಾಪ ಕರ್ಮವ ಕಳೆಯೆ
ಸತ್ಕಾರ್ಯದಿ ಪುಣ್ಯ ಗಳಿಸುವ
ಬಾಳದಾರಿಯಲಿ ಸಾಗುವುದೇ ಜೀವನ|
ಸತ್ಯ ದರ್ಶನ, ದೈವ ಸಾಕ್ಷಾತ್ಕಾರದಿಂದಲಿ
ಈ ಜನ್ಮದ ಈ ಜೀವ ಪಾವನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಷಣ್‍ಮುಖ
Next post ಒಲವಿನಾಟ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys