ಸಮಯ ಸಂದರ್ಭ

ಸಮಯ ಸಂದರ್ಭ
ಸಿಕ್ಕಾಗಲೆಲ್ಲಾ ಆ ದೇವರಿಗೊಂದು
ಕೃತಜ್ಞತೆ ಅರ್ಪಿಸುವುದೇ ಸೂಕ್ತ|
ಅವಕಾಶ ದೊರೆತಾಗಲೆಲ್ಲ
ಜನ್ಮನೀಡಿದ ತಂದೆತಾಯಿಗಳಿಗೆ
ಕೈಜೋಡಿಸಿ ನಮಿಸುವುದೇ ಸಮ್ಮತ||

ಎಂಥಹಾ ವಿಸ್ಮಯ ಈ ಜಗತ್ತು
ಇಲ್ಲಿ ಮನುಜನಾಗಿ ಜನ್ಮ
ತಳೆಯುವುದೇ ಪುಣ್ಯದ ಸ್ವತ್ತು|
ಈ ನರಜನ್ಮದ ಹಿರಿಮೆ ಅಪಾರ
ಈಜಿ ದಡಸೇರಬೇಕು ಈ ಸಂಸಾರ||

ಅತೀ ಸುಂದರ ಈ ಕರುನಾಡು
ನೀ ಜನಿಸಿರುವುದಕಿಲ್ಲಿ ಹೆಮ್ಮೆಪಡು|
ಶಾಂತಿಯ ನಾಡು ಸವೃದ್ಧಿಯಬೀಡು
ಬದುಕು ಬಲು ಸುಲಭ ಸುಂದರ
ಸರಳತೆಯಿಂದಲಿ ನೋಡಲೊಮ್ಮೆ
ತಿಳಿವುದಿದರ ಮಹಿಮೆ ಅಪಾರ||

ಬರಿಯ ತುತ್ತಿನ ಚೀಲವ
ತುಂಬುವುದೇ ಜೀವನವಲ್ಲ|
ಅದರಾಚೆಗಿನ ಜೀವನದಿ
ಪಾಪ ಕರ್ಮವ ಕಳೆಯೆ
ಸತ್ಕಾರ್ಯದಿ ಪುಣ್ಯ ಗಳಿಸುವ
ಬಾಳದಾರಿಯಲಿ ಸಾಗುವುದೇ ಜೀವನ|
ಸತ್ಯ ದರ್ಶನ, ದೈವ ಸಾಕ್ಷಾತ್ಕಾರದಿಂದಲಿ
ಈ ಜನ್ಮದ ಈ ಜೀವ ಪಾವನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಷಣ್‍ಮುಖ
Next post ಒಲವಿನಾಟ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…