ಎಲ್ಲಿ ಹುಡುಕಲಿ

ಎಲ್ಲಿ ಹುಡುಕಲಿ ತಾಯಿ ಎಂತು ಹುಡುಕಲೀ
ಕಲ್ಲು ಮನವ ಮಾಡಿಕೊಂಡು ಎಲ್ಲೋ ಏನೊ ಕುಳಿತುಕೊಂಡಿ || ಪ ||

ಭೂಮಿ ಸೀಮೆಯೆಲ್ಲ ಸುತ್ತಿ ಸೂರೆ ಮಾಡಲೆ
ಗಗನದಾಳಕೇರಿ ಚಿಕ್ಕೆಗಳಲಿ ಹುಡುಕಲೆ
ಸಸ್ಯ ಜೀವರಾಶಿಗಳಲಿ ಎಣಿಸಿ ಗುಣಿಸಲೆ
ಜ್ಞಾನ ಸಾಗರದಲೀಜಿ ಹರವ ನೋಡಲೆ || ೧ ||

ಗಾನದೆಳೆಯ ಹಿಡಿದು ನಾದಲೋಕ ಸೇರಲೆ
ಮೌನವಾಗಿ ಕುಳಿತು ಧ್ಯಾನ ತಪವ ಗೈಯಲೆ
ವರ್ಣರೇಖೆ ನ್ಯಾಸಗಳಲಿ ಕೆದಕಿ ಕಾಣಲೆ
ಲಕ್ಷ್ಮಿಯೊಡನೆ ನೂರು ದಾರಿಗಳಲಿ ಕುಣಿಯಲೆ || ೨ ||

ಕರ್ಮದೊಡನೆ ಮುಳುಗಿ ಜಗವ ಮರೆತು ದುಡಿಯಲೆ
ಹೃದಯ ಹೂವುಗಳನು ಹೊಕ್ಕು ಪ್ರೇಮ ಕುಡಿಯಲೆ
ಕಠಿಣಕಲ್ಲ ಕೆಣಕಿ ಒಳಗೆ ಮೂರ್ತಿ ನೋಡಲೆ
ಎಲ್ಲ ಬಿಟ್ಟು ಅಡವಿ ಸೇರಿ ಬೆಡಗ ಬೆದಕಲೆ || ೩ ||

ಭಿಕ್ಷೆಯಿಂದ ಲಕ್ಷ ಲಕ್ಷ ಮನೆಯ ತಿರಿಯಲೆ
ಬೋಧೆಯಿಂದ ಕಲಿತು ಕಲಿಸಿ ಕಲೆತು ಹೋಗಲೆ
ಶೋಧದಿಂದ ತಿಣುಕಿ ಇಣುಕಿ ಸತ್ಯವರಸಲೆ
ಬಾಧೆ ಪಡುವ ಜೀವಿಗಳಿಗೆ ತಂಪನೆರಚಲೆ || ೪ ||

ಎಷ್ಟೊ ತಿಂದು ಎಷ್ಟೋ ಕುಡಿದು ಹಸಿವು ತೀರದು
ನಿನ್ನ ಕಾಣದಂತೆ ಎಲ್ಲ ಪೂರ್ಣವಾಗದು
ಪ್ರಭುವಿನೊಡನೆ ಸರಸವಾಡುತಿರುವೆ ಮರೆಯೊಳು
ಎಷ್ಟು ಕರೆಯಲಿ ತಾಯಿ ಕಂದ ಕೊರಳೊಳು ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಜ್ಞವಲ್ಕ್ಯನೂ ಮೃತ್ರೇಯಿಯೂ
Next post ಹಿಂದೂಮುಸಲ್ಮಾನರ ಐಕ್ಯ – ೪

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…