Home / ಕವನ / ಕವಿತೆ / ಎಲ್ಲಿ ಹುಡುಕಲಿ

ಎಲ್ಲಿ ಹುಡುಕಲಿ

ಎಲ್ಲಿ ಹುಡುಕಲಿ ತಾಯಿ ಎಂತು ಹುಡುಕಲೀ
ಕಲ್ಲು ಮನವ ಮಾಡಿಕೊಂಡು ಎಲ್ಲೋ ಏನೊ ಕುಳಿತುಕೊಂಡಿ || ಪ ||

ಭೂಮಿ ಸೀಮೆಯೆಲ್ಲ ಸುತ್ತಿ ಸೂರೆ ಮಾಡಲೆ
ಗಗನದಾಳಕೇರಿ ಚಿಕ್ಕೆಗಳಲಿ ಹುಡುಕಲೆ
ಸಸ್ಯ ಜೀವರಾಶಿಗಳಲಿ ಎಣಿಸಿ ಗುಣಿಸಲೆ
ಜ್ಞಾನ ಸಾಗರದಲೀಜಿ ಹರವ ನೋಡಲೆ || ೧ ||

ಗಾನದೆಳೆಯ ಹಿಡಿದು ನಾದಲೋಕ ಸೇರಲೆ
ಮೌನವಾಗಿ ಕುಳಿತು ಧ್ಯಾನ ತಪವ ಗೈಯಲೆ
ವರ್ಣರೇಖೆ ನ್ಯಾಸಗಳಲಿ ಕೆದಕಿ ಕಾಣಲೆ
ಲಕ್ಷ್ಮಿಯೊಡನೆ ನೂರು ದಾರಿಗಳಲಿ ಕುಣಿಯಲೆ || ೨ ||

ಕರ್ಮದೊಡನೆ ಮುಳುಗಿ ಜಗವ ಮರೆತು ದುಡಿಯಲೆ
ಹೃದಯ ಹೂವುಗಳನು ಹೊಕ್ಕು ಪ್ರೇಮ ಕುಡಿಯಲೆ
ಕಠಿಣಕಲ್ಲ ಕೆಣಕಿ ಒಳಗೆ ಮೂರ್ತಿ ನೋಡಲೆ
ಎಲ್ಲ ಬಿಟ್ಟು ಅಡವಿ ಸೇರಿ ಬೆಡಗ ಬೆದಕಲೆ || ೩ ||

ಭಿಕ್ಷೆಯಿಂದ ಲಕ್ಷ ಲಕ್ಷ ಮನೆಯ ತಿರಿಯಲೆ
ಬೋಧೆಯಿಂದ ಕಲಿತು ಕಲಿಸಿ ಕಲೆತು ಹೋಗಲೆ
ಶೋಧದಿಂದ ತಿಣುಕಿ ಇಣುಕಿ ಸತ್ಯವರಸಲೆ
ಬಾಧೆ ಪಡುವ ಜೀವಿಗಳಿಗೆ ತಂಪನೆರಚಲೆ || ೪ ||

ಎಷ್ಟೊ ತಿಂದು ಎಷ್ಟೋ ಕುಡಿದು ಹಸಿವು ತೀರದು
ನಿನ್ನ ಕಾಣದಂತೆ ಎಲ್ಲ ಪೂರ್ಣವಾಗದು
ಪ್ರಭುವಿನೊಡನೆ ಸರಸವಾಡುತಿರುವೆ ಮರೆಯೊಳು
ಎಷ್ಟು ಕರೆಯಲಿ ತಾಯಿ ಕಂದ ಕೊರಳೊಳು ||೫||
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...