ಎಲ್ಲಿ ಹುಡುಕಲಿ

ಎಲ್ಲಿ ಹುಡುಕಲಿ ತಾಯಿ ಎಂತು ಹುಡುಕಲೀ
ಕಲ್ಲು ಮನವ ಮಾಡಿಕೊಂಡು ಎಲ್ಲೋ ಏನೊ ಕುಳಿತುಕೊಂಡಿ || ಪ ||

ಭೂಮಿ ಸೀಮೆಯೆಲ್ಲ ಸುತ್ತಿ ಸೂರೆ ಮಾಡಲೆ
ಗಗನದಾಳಕೇರಿ ಚಿಕ್ಕೆಗಳಲಿ ಹುಡುಕಲೆ
ಸಸ್ಯ ಜೀವರಾಶಿಗಳಲಿ ಎಣಿಸಿ ಗುಣಿಸಲೆ
ಜ್ಞಾನ ಸಾಗರದಲೀಜಿ ಹರವ ನೋಡಲೆ || ೧ ||

ಗಾನದೆಳೆಯ ಹಿಡಿದು ನಾದಲೋಕ ಸೇರಲೆ
ಮೌನವಾಗಿ ಕುಳಿತು ಧ್ಯಾನ ತಪವ ಗೈಯಲೆ
ವರ್ಣರೇಖೆ ನ್ಯಾಸಗಳಲಿ ಕೆದಕಿ ಕಾಣಲೆ
ಲಕ್ಷ್ಮಿಯೊಡನೆ ನೂರು ದಾರಿಗಳಲಿ ಕುಣಿಯಲೆ || ೨ ||

ಕರ್ಮದೊಡನೆ ಮುಳುಗಿ ಜಗವ ಮರೆತು ದುಡಿಯಲೆ
ಹೃದಯ ಹೂವುಗಳನು ಹೊಕ್ಕು ಪ್ರೇಮ ಕುಡಿಯಲೆ
ಕಠಿಣಕಲ್ಲ ಕೆಣಕಿ ಒಳಗೆ ಮೂರ್ತಿ ನೋಡಲೆ
ಎಲ್ಲ ಬಿಟ್ಟು ಅಡವಿ ಸೇರಿ ಬೆಡಗ ಬೆದಕಲೆ || ೩ ||

ಭಿಕ್ಷೆಯಿಂದ ಲಕ್ಷ ಲಕ್ಷ ಮನೆಯ ತಿರಿಯಲೆ
ಬೋಧೆಯಿಂದ ಕಲಿತು ಕಲಿಸಿ ಕಲೆತು ಹೋಗಲೆ
ಶೋಧದಿಂದ ತಿಣುಕಿ ಇಣುಕಿ ಸತ್ಯವರಸಲೆ
ಬಾಧೆ ಪಡುವ ಜೀವಿಗಳಿಗೆ ತಂಪನೆರಚಲೆ || ೪ ||

ಎಷ್ಟೊ ತಿಂದು ಎಷ್ಟೋ ಕುಡಿದು ಹಸಿವು ತೀರದು
ನಿನ್ನ ಕಾಣದಂತೆ ಎಲ್ಲ ಪೂರ್ಣವಾಗದು
ಪ್ರಭುವಿನೊಡನೆ ಸರಸವಾಡುತಿರುವೆ ಮರೆಯೊಳು
ಎಷ್ಟು ಕರೆಯಲಿ ತಾಯಿ ಕಂದ ಕೊರಳೊಳು ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಜ್ಞವಲ್ಕ್ಯನೂ ಮೃತ್ರೇಯಿಯೂ
Next post ಹಿಂದೂಮುಸಲ್ಮಾನರ ಐಕ್ಯ – ೪

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…