ಹಿಂದೂಮುಸಲ್ಮಾನರ ಐಕ್ಯ – ೪

ಹಿಂದೂಮುಸಲ್ಮಾನರ ಐಕ್ಯ – ೪

ಎಷ್ಟೋ ವರ್ಷಗಳು ಕಳೆದವು. ಶಿವದಾಸನು ಮೃತ್ಯು ಶಯ್ಯೆಯಲ್ಲಿ ಪವಡಿಸಿದ್ದನು. ಅವಸಾನ ಕಾಲಕ್ಕೆ ಅವನು ಗುಲಾಮ ಆಲಿಯನ್ನು ಕರೆಸಿಕೊಂಡು ಮಾಯೆಯ ಕೈಯನ್ನು ಅವನ ಕೈಯಲ್ಲಿತ್ತು, ಗದ್ಗದ ಕಂಠದಿಂದ ಏನೋ ಹೇಳಬೇಕೆಂದನು; ಆದರೆ ಅಷ್ಟರಲ್ಲಿ ಅವನ ವಾಣಿಯೇ ಕುಂಠಿತವಾಗಲು, ಸಾಶನಯನದಿಂದ ಅವರೀರ್ವವರ ಕಡೆಗೆ ನೋಡಹತ್ತಿದನು.

ಸಹೃದಯನಾದ ಗುಲಾಮ ಆಲಿಗೆ ಭ್ರಾತೃಸಮಾನನಾದ ಶಿವದಾಸನ ಆಂತರ್ಭಾವ ತಿಳಿದು ಬಂದಿತು. ಆಗ ಅವನು :- “ಬ್ರಾಹ್ಮಣಶ್ರೇಷ್ಠಾ, ಮಾಯೆಯ ಮಾಯೆಯನ್ನು ಪರಿತ್ಯಜಿಸಿ, ಇಷ್ಟದೇವತೆಯನ್ನು ಸ್ಮರಿಸುವವನಾಗು. ಮಾಯೆಯು ಈಗ ಮನುಷ್ಯಳಾಗಿ ಉಳಿದಿರುವದಿಲ್ಲ. ಅವಳು ನನ್ನ ಪರಮ ದೇವತೆಯಾಗಿರುತ್ತಾಳೆ. ನಾನು ಅವಳನ್ನು ರಕ್ಷಣೆಮಾಡುವೆನೆನ್ನುವದಕ್ಕಿಂತ, ಅವಳೇ ನನ್ನಂಥ ಸಾವಿರಾರು ಗುಲಾಮರನ್ನು ರಕ್ಷಿಸಲು ಸಮರ್ಥಳಾಗಿರುತ್ತಾಳೆ.”

ಮುಸಲ್ಮಾನನ ಈ ವಚನಗಳನ್ನು ಕೇಳಿ, ಶಿವದಾಸನ ಅಂತರಂಗ ದೊಳಗಿನ ಮಾಯೆಯ ವಿಷಯದ ವಾಯುಯು ಕಡಿಯಲು, ಅವನ ಕಣ್ಣೊಳಗಿಂದ ಮಾಯಾಮುಕ್ತಿ ಪ್ರದವಾದ ಆನಂದಬಾಷ್ಪಗಳು ಸುರಿದವು. ಪರ ಕ್ಷಣದಲ್ಲಿಯೇ ಶಿವದಾಸನ ಇಹ ಪರ್ಯವಸಾನವಾಯಿತು. ಶಿವದಾಸನು ಉಲ್ಲಸಿತ ಮೊಗದಿಂದ ಪ್ರಾವಣ ಮಾಡುವಾಗ ಗುಲಾಮ ಆಲಿಯು ಗದ್ದದ ಕಂಠದಿಂದ:- “ಬಾಹ್ಮಣಶ್ರೇಷ್ಠರೇ, ನಡೆಯಿರಿ – ನಡೆಯುರಿನ್ನು ಸ್ವರ್ಗಕ್ಕೆ, ಪರಕ್ಷಣದಲ್ಲಿ ಸ್ವರ್ಗಸುಖಗಳಲ್ಲಿ ನಿರತರಾಗುವ ನೀವು, ನಿಮ್ಮೀ ಗುಲಾಮನನ್ನು ಶೀಘ್ರವಾಗಿ ನಿಮ್ಮೆಡೆಗೆ ಬರಮಾಡಿಕೊಳ್ಳಲಿಕ್ಕೆ ಮರಯಬೇಡಿರಿ” ಎಂದು ಪ್ರಾರ್ಥಿಸಿದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿ ಹುಡುಕಲಿ
Next post ತಳಮಳ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…