Home / ಕಥೆ / ನೀಳ್ಗತೆ / ಹಿಂದೂಮುಸಲ್ಮಾನರ ಐಕ್ಯ – ೪

ಹಿಂದೂಮುಸಲ್ಮಾನರ ಐಕ್ಯ – ೪

ಎಷ್ಟೋ ವರ್ಷಗಳು ಕಳೆದವು. ಶಿವದಾಸನು ಮೃತ್ಯು ಶಯ್ಯೆಯಲ್ಲಿ ಪವಡಿಸಿದ್ದನು. ಅವಸಾನ ಕಾಲಕ್ಕೆ ಅವನು ಗುಲಾಮ ಆಲಿಯನ್ನು ಕರೆಸಿಕೊಂಡು ಮಾಯೆಯ ಕೈಯನ್ನು ಅವನ ಕೈಯಲ್ಲಿತ್ತು, ಗದ್ಗದ ಕಂಠದಿಂದ ಏನೋ ಹೇಳಬೇಕೆಂದನು; ಆದರೆ ಅಷ್ಟರಲ್ಲಿ ಅವನ ವಾಣಿಯೇ ಕುಂಠಿತವಾಗಲು, ಸಾಶನಯನದಿಂದ ಅವರೀರ್ವವರ ಕಡೆಗೆ ನೋಡಹತ್ತಿದನು.

ಸಹೃದಯನಾದ ಗುಲಾಮ ಆಲಿಗೆ ಭ್ರಾತೃಸಮಾನನಾದ ಶಿವದಾಸನ ಆಂತರ್ಭಾವ ತಿಳಿದು ಬಂದಿತು. ಆಗ ಅವನು :- “ಬ್ರಾಹ್ಮಣಶ್ರೇಷ್ಠಾ, ಮಾಯೆಯ ಮಾಯೆಯನ್ನು ಪರಿತ್ಯಜಿಸಿ, ಇಷ್ಟದೇವತೆಯನ್ನು ಸ್ಮರಿಸುವವನಾಗು. ಮಾಯೆಯು ಈಗ ಮನುಷ್ಯಳಾಗಿ ಉಳಿದಿರುವದಿಲ್ಲ. ಅವಳು ನನ್ನ ಪರಮ ದೇವತೆಯಾಗಿರುತ್ತಾಳೆ. ನಾನು ಅವಳನ್ನು ರಕ್ಷಣೆಮಾಡುವೆನೆನ್ನುವದಕ್ಕಿಂತ, ಅವಳೇ ನನ್ನಂಥ ಸಾವಿರಾರು ಗುಲಾಮರನ್ನು ರಕ್ಷಿಸಲು ಸಮರ್ಥಳಾಗಿರುತ್ತಾಳೆ.”

ಮುಸಲ್ಮಾನನ ಈ ವಚನಗಳನ್ನು ಕೇಳಿ, ಶಿವದಾಸನ ಅಂತರಂಗ ದೊಳಗಿನ ಮಾಯೆಯ ವಿಷಯದ ವಾಯುಯು ಕಡಿಯಲು, ಅವನ ಕಣ್ಣೊಳಗಿಂದ ಮಾಯಾಮುಕ್ತಿ ಪ್ರದವಾದ ಆನಂದಬಾಷ್ಪಗಳು ಸುರಿದವು. ಪರ ಕ್ಷಣದಲ್ಲಿಯೇ ಶಿವದಾಸನ ಇಹ ಪರ್ಯವಸಾನವಾಯಿತು. ಶಿವದಾಸನು ಉಲ್ಲಸಿತ ಮೊಗದಿಂದ ಪ್ರಾವಣ ಮಾಡುವಾಗ ಗುಲಾಮ ಆಲಿಯು ಗದ್ದದ ಕಂಠದಿಂದ:- “ಬಾಹ್ಮಣಶ್ರೇಷ್ಠರೇ, ನಡೆಯಿರಿ – ನಡೆಯುರಿನ್ನು ಸ್ವರ್ಗಕ್ಕೆ, ಪರಕ್ಷಣದಲ್ಲಿ ಸ್ವರ್ಗಸುಖಗಳಲ್ಲಿ ನಿರತರಾಗುವ ನೀವು, ನಿಮ್ಮೀ ಗುಲಾಮನನ್ನು ಶೀಘ್ರವಾಗಿ ನಿಮ್ಮೆಡೆಗೆ ಬರಮಾಡಿಕೊಳ್ಳಲಿಕ್ಕೆ ಮರಯಬೇಡಿರಿ” ಎಂದು ಪ್ರಾರ್ಥಿಸಿದನು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...