Home / ಕಥೆ / ನೀಳ್ಗತೆ / ಹಿಂದೂಮುಸಲ್ಮಾನರ ಐಕ್ಯ – ೪

ಹಿಂದೂಮುಸಲ್ಮಾನರ ಐಕ್ಯ – ೪

ಎಷ್ಟೋ ವರ್ಷಗಳು ಕಳೆದವು. ಶಿವದಾಸನು ಮೃತ್ಯು ಶಯ್ಯೆಯಲ್ಲಿ ಪವಡಿಸಿದ್ದನು. ಅವಸಾನ ಕಾಲಕ್ಕೆ ಅವನು ಗುಲಾಮ ಆಲಿಯನ್ನು ಕರೆಸಿಕೊಂಡು ಮಾಯೆಯ ಕೈಯನ್ನು ಅವನ ಕೈಯಲ್ಲಿತ್ತು, ಗದ್ಗದ ಕಂಠದಿಂದ ಏನೋ ಹೇಳಬೇಕೆಂದನು; ಆದರೆ ಅಷ್ಟರಲ್ಲಿ ಅವನ ವಾಣಿಯೇ ಕುಂಠಿತವಾಗಲು, ಸಾಶನಯನದಿಂದ ಅವರೀರ್ವವರ ಕಡೆಗೆ ನೋಡಹತ್ತಿದನು.

ಸಹೃದಯನಾದ ಗುಲಾಮ ಆಲಿಗೆ ಭ್ರಾತೃಸಮಾನನಾದ ಶಿವದಾಸನ ಆಂತರ್ಭಾವ ತಿಳಿದು ಬಂದಿತು. ಆಗ ಅವನು :- “ಬ್ರಾಹ್ಮಣಶ್ರೇಷ್ಠಾ, ಮಾಯೆಯ ಮಾಯೆಯನ್ನು ಪರಿತ್ಯಜಿಸಿ, ಇಷ್ಟದೇವತೆಯನ್ನು ಸ್ಮರಿಸುವವನಾಗು. ಮಾಯೆಯು ಈಗ ಮನುಷ್ಯಳಾಗಿ ಉಳಿದಿರುವದಿಲ್ಲ. ಅವಳು ನನ್ನ ಪರಮ ದೇವತೆಯಾಗಿರುತ್ತಾಳೆ. ನಾನು ಅವಳನ್ನು ರಕ್ಷಣೆಮಾಡುವೆನೆನ್ನುವದಕ್ಕಿಂತ, ಅವಳೇ ನನ್ನಂಥ ಸಾವಿರಾರು ಗುಲಾಮರನ್ನು ರಕ್ಷಿಸಲು ಸಮರ್ಥಳಾಗಿರುತ್ತಾಳೆ.”

ಮುಸಲ್ಮಾನನ ಈ ವಚನಗಳನ್ನು ಕೇಳಿ, ಶಿವದಾಸನ ಅಂತರಂಗ ದೊಳಗಿನ ಮಾಯೆಯ ವಿಷಯದ ವಾಯುಯು ಕಡಿಯಲು, ಅವನ ಕಣ್ಣೊಳಗಿಂದ ಮಾಯಾಮುಕ್ತಿ ಪ್ರದವಾದ ಆನಂದಬಾಷ್ಪಗಳು ಸುರಿದವು. ಪರ ಕ್ಷಣದಲ್ಲಿಯೇ ಶಿವದಾಸನ ಇಹ ಪರ್ಯವಸಾನವಾಯಿತು. ಶಿವದಾಸನು ಉಲ್ಲಸಿತ ಮೊಗದಿಂದ ಪ್ರಾವಣ ಮಾಡುವಾಗ ಗುಲಾಮ ಆಲಿಯು ಗದ್ದದ ಕಂಠದಿಂದ:- “ಬಾಹ್ಮಣಶ್ರೇಷ್ಠರೇ, ನಡೆಯಿರಿ – ನಡೆಯುರಿನ್ನು ಸ್ವರ್ಗಕ್ಕೆ, ಪರಕ್ಷಣದಲ್ಲಿ ಸ್ವರ್ಗಸುಖಗಳಲ್ಲಿ ನಿರತರಾಗುವ ನೀವು, ನಿಮ್ಮೀ ಗುಲಾಮನನ್ನು ಶೀಘ್ರವಾಗಿ ನಿಮ್ಮೆಡೆಗೆ ಬರಮಾಡಿಕೊಳ್ಳಲಿಕ್ಕೆ ಮರಯಬೇಡಿರಿ” ಎಂದು ಪ್ರಾರ್ಥಿಸಿದನು.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...