ತಳಮಳ

ನೂರೆಂಟು ತಾಪತ್ರಯಗಳ ತಂಗಳು ವಾಸನೆ
ವಾಕರಿಕೆ ವಾಂತಿ
ಹಸಿರ ಹೊಂಗೆಯಲ್ಲಿ ಕೆನ್ನಾಲಿಗೆ ಕತ್ತಿ.

ಚಿತ್ತದಲ್ಲಿ ಚಿತ್ತವಿಟ್ಟು ಬರೆಯುತ್ತ ಬಂದ ಬಾಳ ಬುಕ್ಕಿನಲ್ಲಿ
ಹೊತ್ತೇರುವ ಹೊತ್ತಿಗೇ ಅಲ್ಲಲ್ಲಿ ಚಿತ್ತು;
ಪುಸ್ತಕದ ಪಿನ್ನು ಕಳಚಿ ಹಾಳೆಗಳು ಚೂರುಚೂರು.
ಪೂರ್ಣತೆಯ ಫಲಕ್ಕೆ ಕನಸುತ್ತ ಕುಳಿತಿದ್ದಾಗ
ಹಲಸಿನ ಹಣ್ಣು ದೊಪ್ಪೆಂದು ಬಿತ್ತು;
ಭಗ್ನತೊಳೆ ಚಲ್ಲಾಪಿಲ್ಲಿ ಅಲ್ಲಿ ನೂರಾರು

ಸುಧೆ ಬಯಸಿದ್ದ ಎದೆಯಲ್ಲಿ ಸ್ಕ್ರೂಕೊರೆತ
ಸುತ್ತಿ ಸುತ್ತೇಳುವ ಉಂಗುರುಂಗುರ ಸಿಬರು; ರಕ್ತದೊರೆತ.

ಮಲಗಿದ್ದವನ ಮೈಯ ಮೇಲೆತ್ತಿ ಬಿಟ್ಟಂತೆ
ಮಾಂತ್ರಿಕನ ಮಂತ್ರದಂಡ
ಒಳಗೆಲ್ಲ ಏರಿಳಿತ ಹೊರಗೆಲ್ಲ ಕಡಿತ
ಹುಣ್ಣಿಮೆಯ ಸಾಗರ ಇಡೀ ಬ್ರಹ್ಮಾಂಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂಮುಸಲ್ಮಾನರ ಐಕ್ಯ – ೪
Next post ಸುಖದ ಮರೀಚಿಕೆ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys