ತಳಮಳ

ನೂರೆಂಟು ತಾಪತ್ರಯಗಳ ತಂಗಳು ವಾಸನೆ
ವಾಕರಿಕೆ ವಾಂತಿ
ಹಸಿರ ಹೊಂಗೆಯಲ್ಲಿ ಕೆನ್ನಾಲಿಗೆ ಕತ್ತಿ.

ಚಿತ್ತದಲ್ಲಿ ಚಿತ್ತವಿಟ್ಟು ಬರೆಯುತ್ತ ಬಂದ ಬಾಳ ಬುಕ್ಕಿನಲ್ಲಿ
ಹೊತ್ತೇರುವ ಹೊತ್ತಿಗೇ ಅಲ್ಲಲ್ಲಿ ಚಿತ್ತು;
ಪುಸ್ತಕದ ಪಿನ್ನು ಕಳಚಿ ಹಾಳೆಗಳು ಚೂರುಚೂರು.
ಪೂರ್ಣತೆಯ ಫಲಕ್ಕೆ ಕನಸುತ್ತ ಕುಳಿತಿದ್ದಾಗ
ಹಲಸಿನ ಹಣ್ಣು ದೊಪ್ಪೆಂದು ಬಿತ್ತು;
ಭಗ್ನತೊಳೆ ಚಲ್ಲಾಪಿಲ್ಲಿ ಅಲ್ಲಿ ನೂರಾರು

ಸುಧೆ ಬಯಸಿದ್ದ ಎದೆಯಲ್ಲಿ ಸ್ಕ್ರೂಕೊರೆತ
ಸುತ್ತಿ ಸುತ್ತೇಳುವ ಉಂಗುರುಂಗುರ ಸಿಬರು; ರಕ್ತದೊರೆತ.

ಮಲಗಿದ್ದವನ ಮೈಯ ಮೇಲೆತ್ತಿ ಬಿಟ್ಟಂತೆ
ಮಾಂತ್ರಿಕನ ಮಂತ್ರದಂಡ
ಒಳಗೆಲ್ಲ ಏರಿಳಿತ ಹೊರಗೆಲ್ಲ ಕಡಿತ
ಹುಣ್ಣಿಮೆಯ ಸಾಗರ ಇಡೀ ಬ್ರಹ್ಮಾಂಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂಮುಸಲ್ಮಾನರ ಐಕ್ಯ – ೪
Next post ಸುಖದ ಮರೀಚಿಕೆ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…