ಸೃಷ್ಟಿಯಲ್ಲಿ ಎಲ್ಲರೂ ಸುಖವಾಗಿರುವರಾ ಎಂದು ಪರೀಕ್ಷಿಸಲು ದೇವರು ಬಂದ. ಕಡಲಿನಲ್ಲಿ ಈಜುತ್ತಿದ್ದ ಮೀನನ್ನು ಕೇಳಿದ- “ನೀನು ಸುಖವಾಗಿರುವೆಯಾ?” “ನನಗೆ ನೀರಿನಲ್ಲಿ ಬಾಳು ಹಾಯಾಗಿದೆ” ಎಂದಿತು. ಆಕಾಶದಲ್ಲಿ ಹಾರುವ ಹಕ್ಕಿಗೆ ಇದೇ ಪ್ರಶ್ನೆ ಮಾಡಿದ. “ನೀಲ ಆಗಸದಲ್ಲಿ ಹಾರಾಡಿ, ಗಿಡದಿಂದ ಗಿಡಕ್ಕೆ ಹೋಗಿ ಹಣ್ಣು ತಿಂದು ಗೂಡು ಕಟ್ಟಿ ಕೊಂಡು ಹಾಯಾಗಿರುವೆ” ಎಂದಿತು. ಇದೇ ಪ್ರಶ್ನೆಯನ್ನು ಮನುಷ್ಯನಿಗೂ ಕೇಳಿದ, “ಮನುಜ ನೀನು ಸುಖವಾಗಿರುವೆಯಾ?” ಎಂದ. “ನಾನು ಖಂಡಿತ ಸುಖವಾಗಿಲ್ಲ. ಸಾವಿರಾರು ತೀರದ ಆಶೆಗಳು, ಬಗೆಹರಿಯದ ಸಮಸ್ಯೆಗಳು” ಎಂದು ಹೇಳುವುದರಲ್ಲಿ ದೇವರು ಮಾಯವಾಗಿಬಿಟ್ಟ. ಮಾನವನು ಯುಗ ಯುಗಗಳಿಂದಲೂ ಸುಖದ ಮರೀಚಿಕೆಯಲ್ಲಿ ಬೇಯುತ್ತಿದ್ದಾನೆ.
*****
Related Post
ಸಣ್ಣ ಕತೆ
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
-
ರಾಧೆಯ ಸ್ವಗತ
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
-
ಮೇಷ್ಟ್ರು ವೆಂಕಟಸುಬ್ಬಯ್ಯ
ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…