ಲಕ್ಷ್ಮಿಯೇ ನೀನೊಲಿದರೇನೇ

ಲಕ್ಷ್ಮಿಯೇ ನೀನೊಲಿದರೇನೇ
ನಮ್ಮಯ ಬಾಳು ಹಸನವು|
ಲಕ್ಷ್ಮಿಯೇ ನೀ ಒಲಿಯದಿರೆ
ನಮ್ಮಯ ಬಾಳು ಬರೀ ವ್ಯಸನವು||

ಲಕ್ಷ್ಮಿಯೇ ನಿನ್ನ ಕರುಣೆಯಿಂದ
ತಾನೇ ಸಕಲ ಸಂಪದವು|
ಲಕ್ಷ್ಮಿಯೇ ನಿನ್ನ ಆಗಮನದಿಂದ
ಏನೋ ಮನಕಾನಂದವು|
ಲಕ್ಷ್ಮಿಯೇ ನಿನ್ನಾ ದಯೆಯಿಂದ
ಧನ ಧಾನ್ಯ ಸಿರಿ ಸಂತಾನವು|
ಲಕ್ಷ್ಮಿಯೇ ನಿನ್ನ ಅಭಯದಿಂದ
ತಾನೇ ನಮ್ಮಯ ಆರೋಗ್ಯಭಾಗ್ಯವು||

ಲಕ್ಷ್ಮಿಯೇ ನಿನಗಾಗೆ ಕೆಂದಾವರೆ
ಹೂ ಮಾಲೆಯ ತಂದಿರುವೆನು|
ಲಕ್ಷ್ಮಿಯೇ ನಿನ್ನ ಮೆಚ್ಚಿಸೆ
ಮಲ್ಲಿಗೆಯ ಮಂಟಪವಕಟ್ಟಿರುವೆನು|
ನಿನ್ನ ನೈವೇದ್ಯಕೆ ತರ ತರದ
ಫಲಹಾರವನು ಮಾಡಿರುವೆನು|
ಶ್ರೀಹರಿ ಸಮೇತ ನೀಬಂದು
ದಯತೋರಿ ನಮ್ಮಲ್ಲಿ
ಇದನ್ನೆಲ್ಲ ಸ್ವೀಕರಿಸಿ ಹರಸೆಮ್ಮನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಖದ ಮರೀಚಿಕೆ
Next post ನಾ ನಿನ್ನ ಪಾದ ಧೂಳಿ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…