Home / ಕವನ / ಕವಿತೆ / ಎದೆಯಾಳದುಲುಹು

ಎದೆಯಾಳದುಲುಹು

ಋಷಿಗಳ ಮನದಾಗೆ ಓಂಕಾರ ಹರದಂಗೆ
ಬೆಸಲಾಗಿ ನಡೆದಾವೆ ತುಂತುಂಬಿ ಮೋಡ
ನಿಂತಂಗೆ ನಿಂತಲ್ಲಿ ಕುಂತಂಗೆ ಕುಂತಲ್ಲೆ
ಚಿಂತ್ಯಾಗೆ ಮೈಮರೆತ ಹಸಿರಿನ ಕಾಡ || ೧ ||

ಧ್ಯಾನದಾಗ ಸ್ವರ್ಗಾನ ಕಂಡಾಗ ತುಟಿಯಾಗೆ
ಎಳೆನಗೆ ಚಿಗತಂಗ ನಗತಾದ ಹುಲ್ಲು
ಹಗಲೆಲ್ಲ ಗಾಳೆಪ್ಪ ಗೋಳಿಸಿ ಹೋಗ್ಯಾನೆ
ಮೌನಗೌರಿ ಆಗ್ಯಾದೆ ಸೃಷ್ಟಿ ಸೊಲ್ಲು || ೨ ||

ಏನೇನೂ ಭಾವ ಹರದಾಡತಾವೆ
ನಾನೇನ ಬಲ್ಲೆನಮ್ಮ
ಧ್ಯಾನಾದಿ ನೀನು ಕುಳಿತಾಗ ನಾನು
ನನ್ನನ್ನೆ ಮರೆವೆನಮ್ಮಾ || ೩ ||

ಇದು ಬರೀ ಶಾಂತಿ ಇಲ್ಲಿಲ್ಲ ಗುಲ್ಲು
ಸೊಲ್ಲೆಲ್ಲ ಮೌನದಲ್ಲೆ
ಕದಡಿರುವ ನೀರು ತಿಳಿಯಾಗಿ ನಿಂತು
ಆಕಾಶ ಹೃದಯದಲ್ಲೆ || ೪ ||

ನಿನ್ನಿಂದ ದೂರ ಬಲುದೂರ ಹೋದೆ
ಪಡಬಾರದಂಥ ಕಷ್ಟ
ತಾಯನ್ನು ತೊರೆದು ಗಿಳಿಮರಿಯು ಬೀಳೆ
ನಾಯಿನರಿಗದುವೆ ಇಷ್ಟ || ೫ ||

ಬಹುದಿನಕೆ ನಿನ್ನ ಮೊಗನೋಡುವಂಥ
ಸಿಗಲಾರದಂಥ ಸೊಗವು
ಎಂದಾದರೊಮ್ಮೆ ಸಿಕ್ಕಾಗ ಎದೆಯು
ಅಳುವೆಲ್ಲ ಹರಿವ ನಗುವು || ೬ ||

ಒಂಟಿತನ ಸಾಕು ಅದು ನರಕ ಸಮವು
ನಾನಾದೆ ಕೊಳೆತ ಹುಳುವು
ನೀನೇಕೆ ನನ್ನ ಕೈಹಿಡಿಯದಂತೆ
ದೂಡುತಿಹೆ ತುಂಬಲಳುವು || ೭ ||

ನಿನ್ನನ್ನು ಬಿಟ್ಟು ನಾ ಬರಿಯ ನೆರಳು
ಒಳಹೊರಗೆ ಕಪ್ಪು ಕಪ್ಪೆ
ಏನಿದ್ದರೇನು ಪ್ರಾಣವೇ ಇರದೆ
ಕಸವಾಗಿ ಅಳಿವ ಸೊಪ್ಪೆ || ೮ ||

ಬಿಡಬೇಡ ನನ್ನ ನಾನಿನ್ನ ಹಸುವು
ಪಶುವಾಗದಂತೆ ಸಲಹು
ಏರಿಳುವುಗಳಲಿ ತೊಳಲುತ್ತೆ ಸೋತೆ
ಇದೆ ಎದೆಯ ಆಳದುಲುಹು || ೯ ||
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...