ಮುಖವಾಡಗಳ ಕವಿಗೆ

ಸಾಕು ನಿಲ್ಲಿಸು
ನಾಗರಿಕ ಭಾಷೆಯಲ್ಲಿ ಮಾತಾಡು
ಮನುಷ್ಯರ ಹಾಗೆ ಮಾತಾಡು
ಪ್ರತಿಮೆ ಪ್ರತೀಕ ಪ್ರಾಕಾರ ಎಂದು
ಮೇಜಿಕ್ಕು ಕಾವ್ಯ ಗೀಚುತ್ತೀಯಾ
ಆಮೇಲೆ ಲಾಜಿಕ್ಕು ಬೊಗಳುತ್ತೀಯಾ
ಸ್ವಂತ ಗೋಷ್ಟಿಗಳಲ್ಲಿ ಚೇಷ್ಟೆ ಮಾಡುತ್ತೀಯಾ
ಗುಂಪುಗಾರಿಕೆ ನಡೆಸುತ್ತೀಯಾ
ಹೆಚ್ಚು ಹಾರಾಡಬೇಡ
ಟೈಟ್ ಪ್ಯಾಂಟುಧಾರಿ ನವ್ಯದ ಮರಿ-
ತರಕಾರಿ ತೋಟದ ಕ್ರಿಮಿ-ತಕರಾರುಕಾರಿ
ವಿನಾಶಕಾರಿ ದುರಹಂಕಾರಿ ಬೀದಿಭಿಕಾರಿ

ಬೀದಿಯ ಮಧ್ಯೆ ನಿಂತು ಭಾಷಣ ಮಾಡಿ
ಹಳೆ ಹುಲಿಗಳನ್ನು ಇಲಿ ಇಲಿ ಎಂದು ಕೂಗಿ
ಜಗಳಕ್ಕೆ ಕರೆದು ತಮಾಷೆ ನೋಡಿ-
ಅಲ್ಲಾ, ಏನಾಗಿದೆ ನಿನಗೇ ಅಂತ ?
ಸದಾ ಯಾಕೆ ಕಿರಿಕಿರಿ ಮಾಡ್ತೀಯಾ ?
ಸುಮ್ಮನೆ ಪಾಪದವರ ಹಾಗೆ, ಎಲ್ಲರ ಹಾಗೆ
ಇರಬಾರದೇ ನಿನಗೆ ನಾವು ಹೇಳಿದ ಹಾಗೆ ?
ಅಲ್ಲಾ, ಗುಟ್ಟಿನಲ್ಲಿ ಹೇಳಿಬಿಡಪ್ಪಾ;
ಸುಮ್ಮನಿರಬೇಕಾದರೆ ನಿನಗೆ ಏನು ಬೇಕೂಂತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಂಗೆ, ಬೇವಿನ ಎಣ್ಣೆಯಿಂದ ಪರ್ಯಾಯವಾದ ಡಿಜಲ್ ಉಪಯೋಗ
Next post ನಿನ್ನದು

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys