ಮುಖವಾಡಗಳ ಕವಿಗೆ

ಸಾಕು ನಿಲ್ಲಿಸು
ನಾಗರಿಕ ಭಾಷೆಯಲ್ಲಿ ಮಾತಾಡು
ಮನುಷ್ಯರ ಹಾಗೆ ಮಾತಾಡು
ಪ್ರತಿಮೆ ಪ್ರತೀಕ ಪ್ರಾಕಾರ ಎಂದು
ಮೇಜಿಕ್ಕು ಕಾವ್ಯ ಗೀಚುತ್ತೀಯಾ
ಆಮೇಲೆ ಲಾಜಿಕ್ಕು ಬೊಗಳುತ್ತೀಯಾ
ಸ್ವಂತ ಗೋಷ್ಟಿಗಳಲ್ಲಿ ಚೇಷ್ಟೆ ಮಾಡುತ್ತೀಯಾ
ಗುಂಪುಗಾರಿಕೆ ನಡೆಸುತ್ತೀಯಾ
ಹೆಚ್ಚು ಹಾರಾಡಬೇಡ
ಟೈಟ್ ಪ್ಯಾಂಟುಧಾರಿ ನವ್ಯದ ಮರಿ-
ತರಕಾರಿ ತೋಟದ ಕ್ರಿಮಿ-ತಕರಾರುಕಾರಿ
ವಿನಾಶಕಾರಿ ದುರಹಂಕಾರಿ ಬೀದಿಭಿಕಾರಿ

ಬೀದಿಯ ಮಧ್ಯೆ ನಿಂತು ಭಾಷಣ ಮಾಡಿ
ಹಳೆ ಹುಲಿಗಳನ್ನು ಇಲಿ ಇಲಿ ಎಂದು ಕೂಗಿ
ಜಗಳಕ್ಕೆ ಕರೆದು ತಮಾಷೆ ನೋಡಿ-
ಅಲ್ಲಾ, ಏನಾಗಿದೆ ನಿನಗೇ ಅಂತ ?
ಸದಾ ಯಾಕೆ ಕಿರಿಕಿರಿ ಮಾಡ್ತೀಯಾ ?
ಸುಮ್ಮನೆ ಪಾಪದವರ ಹಾಗೆ, ಎಲ್ಲರ ಹಾಗೆ
ಇರಬಾರದೇ ನಿನಗೆ ನಾವು ಹೇಳಿದ ಹಾಗೆ ?
ಅಲ್ಲಾ, ಗುಟ್ಟಿನಲ್ಲಿ ಹೇಳಿಬಿಡಪ್ಪಾ;
ಸುಮ್ಮನಿರಬೇಕಾದರೆ ನಿನಗೆ ಏನು ಬೇಕೂಂತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಂಗೆ, ಬೇವಿನ ಎಣ್ಣೆಯಿಂದ ಪರ್ಯಾಯವಾದ ಡಿಜಲ್ ಉಪಯೋಗ
Next post ನಿನ್ನದು

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…