Home / ಲೇಖನ / ವಿಜ್ಞಾನ / ಹೊಂಗೆ, ಬೇವಿನ ಎಣ್ಣೆಯಿಂದ ಪರ್ಯಾಯವಾದ ಡಿಜಲ್ ಉಪಯೋಗ

ಹೊಂಗೆ, ಬೇವಿನ ಎಣ್ಣೆಯಿಂದ ಪರ್ಯಾಯವಾದ ಡಿಜಲ್ ಉಪಯೋಗ

ಅನೇಕ ವನಸ್ಪತಿಗಳಿಂದ, ಆಹಾರಬೆಳೆಗಳಿಂದ ಎಣ್ಣೆಯನ್ನು ತಯಾರಿಸಿ ಔಷಧಿ ರೂಪದಲ್ಲಿಯೂ, ಆಹಾರದಲ್ಲಿಯೂ ಬಳೆಸಲಾಗುತ್ತದೆ. ಇದೀಗ ಹೊಂಗೆ ಮರದ ಬೀಜದಿಂದ, ಬೇವಿನ ಮರದ ಬೀಜದಿಂದ ಉತ್ಪಾದಿಸಲ್ಪಟ್ಟ ಎಣ್ಣೆಗಳಿಂದ ಯಂತ್ರಗಳನ್ನು ನಡೆಸಬಹುದೆಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಂಗಸಂಸ್ಥೆಯಾದ ‘ಸೂತ್ರ’ವು ಕಂಡು ಹಿಡಿದಿದೆ. ಇದರಿಂದ ಮುಂದೊಂದು ದಿನ ವಿದೇಶಿ ಡಿಜಲ್ ಬರದಾಗುತ್ತದೆ ಮತ್ತು ಡಿಜರ್ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಈ ಎಣ್ಣೆಗಳನ್ನೇ ಬಳೆಸುವ ಕಾಲ ಬರಬಹುದು. ಒಂದು ಕೆ.ಜಿ. ಹೊಂಗೆ ಎಣ್ಣೆ ಅಥವಾ ಬೇವಿನ ಎಣ್ಣೆಯ ಉತ್ವಾದನೆಗೆ ೪ ಕೆ.ಜಿ. ಬೀಜಬೇಕಾಗುತ್ತದಷ್ಟೆ. ಡಿಜಲ್ ಯಂತ್ರಗಳಿಗೆ ವಾಹನಗಳಿಗೆ ಈ ಎಣ್ಣೆಯನ್ನು ಬಳೆಸಬಹುದು ಎಂದು ಕಂಡು ಹಿಡಿಯಲಾಗಿದೆ. ಈಗಾಗಲೇ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ವಿದ್ಯುತ್ ಉತ್ಪಾದಿಸಲು ಪ್ರಯೋಗಿಕವಾಗಿ ಈ ಎಣ್ಣೆಯನ್ನು ಬಳೆಸಲಾಗುತ್ತದೆ. ದಿನದಿನವೂ ಹೆಚ್ಚುತ್ತಿರುವ ಡಿಜಲ್ ಬೆಲೆಯ ದುಬಾರಿ ದರದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಈ ಸಂಸ್ಕರಿಸಿದ ಹೊಂಗೆ, ಅಥವಾ ಬೇವಿನ ಎಣ್ಣೆಯನ್ನು ಯಂತ್ರಗಳಿಗೆ ಬಳಸಿ ಸಮಸ್ಯೆಗಳನ್ನು ಪರಿಸರಿಸಿಕೊಳ್ಳಬಹುದು.

ಈ ಎರಡು ತರಹದ ಎಣ್ಣೆ ತೆಗೆಯುವುದರಿಂದ ಬಹಳ ಉಪಯೋಗವು ಕೂಡ ಇರುತ್ತದೆ. ಈ ಎಣ್ಣೆ ತೆಗೆದ ನಂತರ ಇವುಗಳ ಹಿಂಡಿಯನ್ನು ರೈತರು ತಮ್ಮ ತೆಂಗು, ಅಡಿಕೆ, ಬಾಳೆ ತೋಟಗಳಿಗೆ, ಗದ್ದೆಗಳಿಗೆ ಗೊಬ್ಬರವನ್ನಾಗಿಯೂ ಸಹ ಬಳಸಬಹುದು. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಗುವುದರ ಜತೆಗೆ ಗಿಡಗಳಿಗೆ ಯಾವುದೇ ರೋಗ ರುಜೀನಗಳು ಬರುವುದಿಲ್ಲ ಮತ್ತು ಹೆಚ್ಚು ಇಳುವರಿಯೂ ಕೂಡ ಬರುತ್ತದೆ. ಇಂಥಹ ಸಾಹಸವನ್ನು ರೈತರು ಯತೇಚ್ಛೆವಾಗಿ ಮಾಡಿ ಮಾದರಿ ಕೃಷಿಕರಾಗಬಹುದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...