Home / ಲೇಖನ / ವಿಜ್ಞಾನ / ಹೊಂಗೆ, ಬೇವಿನ ಎಣ್ಣೆಯಿಂದ ಪರ್ಯಾಯವಾದ ಡಿಜಲ್ ಉಪಯೋಗ

ಹೊಂಗೆ, ಬೇವಿನ ಎಣ್ಣೆಯಿಂದ ಪರ್ಯಾಯವಾದ ಡಿಜಲ್ ಉಪಯೋಗ

ಅನೇಕ ವನಸ್ಪತಿಗಳಿಂದ, ಆಹಾರಬೆಳೆಗಳಿಂದ ಎಣ್ಣೆಯನ್ನು ತಯಾರಿಸಿ ಔಷಧಿ ರೂಪದಲ್ಲಿಯೂ, ಆಹಾರದಲ್ಲಿಯೂ ಬಳೆಸಲಾಗುತ್ತದೆ. ಇದೀಗ ಹೊಂಗೆ ಮರದ ಬೀಜದಿಂದ, ಬೇವಿನ ಮರದ ಬೀಜದಿಂದ ಉತ್ಪಾದಿಸಲ್ಪಟ್ಟ ಎಣ್ಣೆಗಳಿಂದ ಯಂತ್ರಗಳನ್ನು ನಡೆಸಬಹುದೆಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಂಗಸಂಸ್ಥೆಯಾದ ‘ಸೂತ್ರ’ವು ಕಂಡು ಹಿಡಿದಿದೆ. ಇದರಿಂದ ಮುಂದೊಂದು ದಿನ ವಿದೇಶಿ ಡಿಜಲ್ ಬರದಾಗುತ್ತದೆ ಮತ್ತು ಡಿಜರ್ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಈ ಎಣ್ಣೆಗಳನ್ನೇ ಬಳೆಸುವ ಕಾಲ ಬರಬಹುದು. ಒಂದು ಕೆ.ಜಿ. ಹೊಂಗೆ ಎಣ್ಣೆ ಅಥವಾ ಬೇವಿನ ಎಣ್ಣೆಯ ಉತ್ವಾದನೆಗೆ ೪ ಕೆ.ಜಿ. ಬೀಜಬೇಕಾಗುತ್ತದಷ್ಟೆ. ಡಿಜಲ್ ಯಂತ್ರಗಳಿಗೆ ವಾಹನಗಳಿಗೆ ಈ ಎಣ್ಣೆಯನ್ನು ಬಳೆಸಬಹುದು ಎಂದು ಕಂಡು ಹಿಡಿಯಲಾಗಿದೆ. ಈಗಾಗಲೇ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ವಿದ್ಯುತ್ ಉತ್ಪಾದಿಸಲು ಪ್ರಯೋಗಿಕವಾಗಿ ಈ ಎಣ್ಣೆಯನ್ನು ಬಳೆಸಲಾಗುತ್ತದೆ. ದಿನದಿನವೂ ಹೆಚ್ಚುತ್ತಿರುವ ಡಿಜಲ್ ಬೆಲೆಯ ದುಬಾರಿ ದರದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಈ ಸಂಸ್ಕರಿಸಿದ ಹೊಂಗೆ, ಅಥವಾ ಬೇವಿನ ಎಣ್ಣೆಯನ್ನು ಯಂತ್ರಗಳಿಗೆ ಬಳಸಿ ಸಮಸ್ಯೆಗಳನ್ನು ಪರಿಸರಿಸಿಕೊಳ್ಳಬಹುದು.

ಈ ಎರಡು ತರಹದ ಎಣ್ಣೆ ತೆಗೆಯುವುದರಿಂದ ಬಹಳ ಉಪಯೋಗವು ಕೂಡ ಇರುತ್ತದೆ. ಈ ಎಣ್ಣೆ ತೆಗೆದ ನಂತರ ಇವುಗಳ ಹಿಂಡಿಯನ್ನು ರೈತರು ತಮ್ಮ ತೆಂಗು, ಅಡಿಕೆ, ಬಾಳೆ ತೋಟಗಳಿಗೆ, ಗದ್ದೆಗಳಿಗೆ ಗೊಬ್ಬರವನ್ನಾಗಿಯೂ ಸಹ ಬಳಸಬಹುದು. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಗುವುದರ ಜತೆಗೆ ಗಿಡಗಳಿಗೆ ಯಾವುದೇ ರೋಗ ರುಜೀನಗಳು ಬರುವುದಿಲ್ಲ ಮತ್ತು ಹೆಚ್ಚು ಇಳುವರಿಯೂ ಕೂಡ ಬರುತ್ತದೆ. ಇಂಥಹ ಸಾಹಸವನ್ನು ರೈತರು ಯತೇಚ್ಛೆವಾಗಿ ಮಾಡಿ ಮಾದರಿ ಕೃಷಿಕರಾಗಬಹುದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...