ಪ್ರಯಾಸ

ಗುಡ್ಡವನು ಹತ್ತಿ ಆಯಾಸಗೊಂಡ ಕಂಡದ್ದು ನಿನ್ನನೇನು
ಹೆಡ್ಡರಾ ಗೊಂಬೆ ಜನರನ್ನು ತಿಂಬೆ ನನ್ನನ್ನು ನಂಬಲೇನು || ೧ ||

ಕಂಡದ್ದು ಅಲ್ಲಿ ಕಣ್ಣುಗಳ ಕುಕ್ಕಿ ಇರಿವಂಥ ಚಿನ್ನ ಬೆಳ್ಳಿ
ಉಂಡದ್ದು ಧೂಳು ಕುರುಡುತನ ನೀರು ನಾಚಿಕೆಯ ಹೊರಗೆ ತಳ್ಳಿ || ೨ ||

ನೀನಿಲ್ಲ ಅಲ್ಲಿ ಆ ಗುಂಪಿನಲ್ಲಿ, ನೀನುಸಿರು ಕಟ್ಟಿ ಇಹೆಯಾ
ನಾನಿಹೆನು ನೋಡ ಪಂಜರದ ಹಕ್ಕಿ ನನ್ನದಿದು ಬಂಧಕಾಯ || ೩ ||

ದಾರಿಯಲಿ ಹೊರಗೆ ಹಾರುತ್ತ ದೂರ ದಿಟ್ಟಿಯನು ಹಾಯಿಸಿದ್ದೆ
ಮೇಲಿರಲು ಬಾನು, ಗಿರಿಸಾಲು ಸಾಲು ಸೃಷ್ಟಿಯದು ಹಸಿರ ಮುದ್ದೆ || ೪ ||

ಇಲ್ಲೆಲ್ಲು ಇಲ್ಲ ಎಂದುಸಿರ ಬಿಟ್ಟು ಗುಡ್ಡವನು ಇಳಿದು ಬಂದೆ
ಸೊಲ್ಲಿಲ್ಲವಲ್ಲ ನಿನ್ನದೆಂದೆನುತ ಕಣ್ತುಂಬ ನೀರು ತಂದೆ || ೫ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೀತಾ ರಹಸ್ಯ
Next post ಹರಿಹರನ ರಗಳೆಗಳು : ಸಾಂಸ್ಕೃತಿಕ ಮುಖಾಮುಖಿ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys