ಗೀತಾ ರಹಸ್ಯ

ಶ್ರೀ ಕೃಷ್ಣೌವಾಚಃ ಲೊಚ ಲೊಚ
ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದೇನೆಂದರೆ:
ಕೇಳಯ್ಯ ಇಲ್ಲಿ ಭಾವಯ್ಯ ಯದಾ ಯದಾಹಿ ಧರ್ಮಸ್ಯ
ಧರ್ಮಗ್ಲಾನಿ ಕೆಂಪು ನಿಶಾನಿ ಶನಿ ಶನೀ
ಹುಟ್ಟಿ ಬಂದೇನಯ್ಯ ಕುಟುಂಬದ ಎಂಟನೇಯವ
ಕೂರ್ಮಾವತಾರಿ ಚಪಾತಿ ಪೂರೀಬಾಜಿ
ಮತ್ಸ್ಯಾವತಾರಿ ಬೆಳ್ತಿಗೆ ಅಕ್ಕಿ ರೊಟ್ಟಿ
ಬಿರಿಯಾಣಿ ಮತ್ತು ಕುರ್ಮ
ಕರ್ಮಣ್ಯೇವಾಧಿಕಾರಸ್ತೇ
ಮಾ ಫಲೇಶು ಕದಾಚನ-ಈ ವಾಚನ
ಭಗವದ್ಗೀಗೀತೆಯ ರಟ್ಟು
ವಾತ್ಸಾಯನನ ಗುಟ್ಟು
ಇದು ವಿಶ್ವರೂಪದ ಸಿಂಥೆಟಿಕ್ ದರ್ಶನ

ಹಿಟ್ಟಿಗಿಂತ ಹೊಟ್ಟೆ ದೊಡ್ಡದು
ಹೊಟ್ಟೆಗಿಂತ ಮನುಷ್ಯ ದೊಡ್ಡದು
ಮನುಷ್ಯನಿಗಿಂತ ಆತ್ಮ ದೊಡ್ಡದು
ಆತ್ಮಕ್ಕಿಂತ ಪರಮಾತ್ಮ ದೊಡ್ಡದು
ಎಂಬ ಲೆಕ್ಕಾಚಾರದ ಹಿಂದೆ
ಡೊಂಬರಾಟ ಹಾಕಿ
ಫಿಲಾಸಫಿಯ ಕೆಳಗಡೆ ಅಡಗಿ
ಲಾಜಿಕ್ಕಿನ ಸುತ್ತ ಖೊಕ್ಕೊ ಆಡಿ
ಸಿನಿಕನ ಕೆಮ್ಮು ಬೀಡಿಯ ದಮ್ಮು
ಮಿಸ್ಟಿಸಿಸಮಿನ ಮೋರ್ಫಿಯಾ ತಿಂದು ಮಲಗಿ-
ದುರ್ಯೋಧನ ಬಂದು ಈಚೆಗೆ ಜಗ್ಗಿ ಎಳೆದಾಗ
ಚರ್ಮ ಉಳಿಸುವುದಕ್ಕೆ ಎರಡು ಪೆಗ್ ಹಾಕಿ
ಎದ್ದು ಹೋರಾಡುವ ಧರ್ಮ
ಗೀತೆಯ ಮರ್ಮ-ಕೇಳದೇ ಹುಟ್ಟಿ ಬಂದವರು
ಬದುಕಿಗೆ ಅರ್ಧ ಕಾಣದೇ ಹೋಗುವರು
ಕರ್ಮಣ್ಯೇವಾಧಿಕಾರಸ್ತೇ
ಇಂದಿಗೆ ಸಾಕು-ಗುಡ್‌ನಾಯಿಟ್‌-ನಮಸ್ತೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮ ಪರೀಕ್ಷೆಯ ಮಾಪಕ
Next post ಪ್ರಯಾಸ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…