ಯುಗಾದಿ ಬರುತಿದೆ

ಯುಗಾದಿ ಬರುತಿದೆ
ಹೊಸಯುಗಾದಿ ಬರುತಿದೆ|
ಎಲ್ಲೆಡೆ ಹಸಿರ ಸಿರಿಯು ಚಿಗುರಿ
ಬೇವುಹೊಮ್ಮಿ ಮಾವು ಚಿಮ್ಮಿ
ನಮಗೆ ಹರುಷ ತರುತಿದೆ
ಹೊಸ ವರುಷ ಬರುತಿದೆ
ನವಯುಗಾದಿ ಬರುತಿದೆ||

ವನರಾಶಿ ನವ್ಯನವಿರಾಗಿ
ಮೈಯತಳೆದು ಬಾಗಿ ತೂಗಿ|
ಸಸ್ಯ ಶ್ಯಾಮಲೆ ಕಂಪಬೀರಿ ಕೈಯಬೀಸಿ
ಕರೆಯುತಿದೆ ಹೊಸವರುಷವ||

ಹಳೆಯ ಕಹಿಯು ಎಲ್ಲಾಮರೆತು
ಬರೀ ಸಿಹಿಯು ಮಾತ್ರ ಉಳಿಯಲಿ|
ಹೊಸ ಬಗೆಯ ಸ್ನೇಹ ಪ್ರೀತಿ ಚಿಗುರಿ
ಸಂಯಮದಲಿ ಎಲ್ಲಾ ಸೇರಿ
ಹೊಸವರ್ಷವ ಸ್ವಾಗತಿಸವ ಬನ್ನಿರಿ||

ಪ್ರಕೃತಿಯಂತೆ ಪ್ರತೀವರ್ಷ
ನಮ್ಮಲಿ ನವಜೀವ ಮೈತುಂಬಲಿ|
ಹೊಸ ಉತ್ಸಾಹದಿಂದ
ನಿತ್ಯಜೀವನ ಸುಗಮ ಸಾಗಲಿ|
ಎಲ್ಲರಿಗೂ ಒಳ್ಳೆಯದಾಗಲೆಂದು
ಬಯಸಿ ಹೊಸಯುಗಾದಿಯ
ಆಚರಿಸುವ ಬನ್ನಿರೆಲ್ಲಾ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಸ್ಯ ಕಾಸಿಯ ಮ್ಯೂಸಿಯಂ
Next post ನಿನ್ನ ತೊರೆದು ಇನ್ನೇನು

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys