ನಿನ್ನ ತೊರೆದು ಇನ್ನೇನು

ನನ್ನ ಮನವ ಭುಗಿಲೆದ್ದ ಆಸೆಗಳಿಗೆಲ್ಲ
ಹರಿಯೇ ನೀನೆ ನಿವಾರಿಸು
ನಿನ್ನ ತೊರೆದು ಇನ್ನೇನು ಕೋರಲಿ
ನನ್ನ ಜನುಮ ದುಕ್ಕನಿ ತಾರಿಸು

ತಾಯಿಯ ತೊರೆದು ಪ್ರೀತಿ ಅರೆಸಿದಂತೆ
ನಿನ್ನ ತೊರೆದು ಸಂಪತ್ತು ಏಕೆ!
ಹಗಲಿರುಳು ನಿನ್ನ ಧ್ಯಾನವೊಂದೇ
ನನ್ನ ಮನಃ ಶಾಂತಿಗೆ ಸಾಕೆ

ಸುಖದ ಮರೀಚಿಕೆಗೆ ಹಂಬಲಿಸಿನಾ
ಕಾಳ್ಗಿಚ್ಚು ನಾನು ಎದೆಗಪ್ಪಿದಂತೆ
ಸೋಲುಗಳಲ್ಲಿ ಗೆಲುವಿನ ಮೆಟ್ಟಿಲೆಂದು
ಭವ ಸಾಗರದಾಳಕೆ ಜಾರಿದಂತೆ

ಕನ್ಸುಗಳೆಲ್ಲವೂಗಳಿಗೆ ಅರ್ಥ ಹುಡುಕಿ
ಗಾಳಿ ಗೋಪುರದ ಮೇಲೆ ಏರಿದಂತೆ
ಹರಿಗಾಗಿ ಹಂಬಲಿಸಿ ಧ್ಯಾನಿಸಿ
ಪಾಪಗೈದರೆ ಮಾಣಿಕ್ಯ ವಿಠಲನ ಮರೆತಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುಗಾದಿ ಬರುತಿದೆ
Next post ಮೂವತ್ತೈದು ಪೈಸೆಗೊಂದು ಮಸಾಲೆದೋಸೆ…!?

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…