ನಾನಲ್ಲ ನೀನಲ್ಲ

ನಾನಲ್ಲ ನೀನಲ್ಲ
ಇವನಲ್ಲ ಅವನಲ್ಲ
ಆತ್ಮ ನೀನೇ ನೀನು
ಇದು ಸತ್ಯಾವತಾರ
ನಿತ್ಯಾವತಾರ ||

ಅವನಲ್ಲ ಇವನಲ್ಲ
ಅವನ ಇವನ
ಬೆರೆತ ಭಾವ ನೂರು ||

ಸ್ವರ ಏಳು ಕೇಳು
ನಾದ ನಾಕು ತಂತಿ
ನುಡಿಸುವ ವೈಣಿಕನಾರು ||

ಸಾವು ಒಂಭತ್ತು
ಜನುಮವು ಒಂದು
ಸಂತೆಗೆ ಮಾಳಿಗೆ ಸಾವಿರ ||

ದಾರದ ಎಳೆ ಒಂದು
ತರತರ ಹೂ ಬಂಧ
ಬಣ್ಣ ಭೇದ ಬೇರಿಲ್ಲವೋ ||

ಹರಿದ ಸೆಲೆಗೆ
ಕೆಳೆಯೆ ಉಸಿರು
ಅಲೆ ತೆರೆಯ ಅಂಬಿಗ… ||

ಐದರ ಕೊಡಕ್ಕೆ
ಬೆಳ್ಳಿ ಚಿನ್ನದ ತಗಡು
ಗುರು ಒಬ್ಬನೆ ಮೋಕ್ಷಕೆ… ||

ಮನವೆಂಬ ಹಕ್ಕಿ
ನಂಟಿನ ತಾರೆಗೆ
ಬಹುದೂರ ಬಿಟ್ಟು ಬಂದೆ ||

ಹದಿನಾರ ಇಪ್ಪತ್ತು
ಇಪ್ಪತ್ತ ಮೂರು ಕೇಳೆ
ನೂರೊಂದು ಶಿಶು ಹಾಡೆವೆ ||

ಏಳರ ಒಂಭತ್ತು
ಐದರ ಗಿಲಕಿ ಕಾಯಕ
ನಾರಾಯಣ ಶಿಶು ಹಂಸಾ ಕೇಳೆ ||

ಜೋಳಿಗೆ ತುಂಬಿ
ನಾಲ್ಕರ ಕಟ್ಟಿಗೆ
ತಾಂಬೂಲ ಇರಿಸಿ ಕಳುಹಿಸಿದೆ ||

ಅವನಿಗಿವನ ಇವನಿಗವನ
ಬಾಡಿಗೆ ತೆರಬೇಕು
ಇವನವನ ಋಣವು.. ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧಾರವಾಡದ ಅಶ್ವರತ್ನ
Next post ಧೂರ್ತ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys