ಯಾರು ಯಾರಿಗಾಗಿ

ಯಾರು ಯಾರಿಗಾಗಿ ನೀನು
ಯಾರಿಗಾಗಿ ಹೊಗಳಿದೆ
ಯಾರಿಗಾಗಿ ತೆಗಳಿದೆ
ಯಾರಿಗಾಗಿ ನಗಿಸಿ ಅಳಿಸಿದೆ
ಯಾರ್‍ಯಾರು ಬಲ್ಲರೂ ನೀನು ಹೇಳು ||

ಯಾರಿಗಾಗಿ ಜೀವ ತಳೆದೆ
ಯಾರಿಗಾಗಿ ಬಂದು ನಿಂದೇ
ಯಾರಿಗಾಗಿ ಜೀವ ಸವೆದೇ
ಯಾರು ಯಾರಿಗಾಗಿ ಮನುಜ ನೀನು ಹೇಳು ||

ಜೀವ ಉಸಿರಾಟಕೆ
ಸ್ನೇಹ ಜೀವಿಯಾಗಿ ಬೆಸೆದೇ
ಎಲ್ಲಿಂದ ಬಂದೆ ಎಲ್ಲಿಗೆ ಹೋದೇ
ಯಾರ್‍ಯಾರು ಯಾರು ಬಲ್ಲರು ನೀನು ಹೇಳು ||

ಕಳವುದಿಲ್ಲಿ ಮೂರು ದಿನ
ನಡೆವುದಿಲ್ಲಿ ಮೂರು ದಿನ
ಯಾವ ಊರಿನವನು ಯಾವ
ಕೇರಿಯವನು ಯಾರ್‍ಯಾರು ಯಾರು ನೀನು ಹೇಳು ||

ಎಲ್ಲಿಗೆ ಪಯಣ
ಎಲ್ಲಿಯವರೆಗೆ ಋಣ
ಹೆಸರಲ್ಲಿ ಹೆಸರು ಲಿಖಿತ
ಕುಲಗೋತ್ರವ ಅಂಟಿಕೊಂಡವನು
ಯಾರ್‍ಯಾರು ಯಾರು ನೀನು ಹೇಳು ||

ದೇವರಲ್ಲಿ ದೇವ ಪುರಾಣ
ವೇದ ವಾಕ್ಯ ಸಿದ್ಧ ಕಣ
ಶುದ್ಧ ನಡತೆ ನೀತಿ ನೇಮ
ಬುತ್ತಿಕಟ್ಟಿ ಹೊತ್ತವನು
ಯಾರ್‍ಯಾರು ಯಾರು ನೀನು ಹೇಳು ||

ನೂರು ಪೂಜೆ ನೂರು ದಾರಿ
ನೆಟ್ಟವನು ಕತ್ತಲೆ ಬೆಳಕಿನಾಟದಲ್ಲಿ
ಸೂಜಿದಾರ ಪೋಣಿಸಿದವನು
ಸಂತೆಗೆ ನೂರು ಹಾದಿ ಕಂಡವನು
ಎಲ್ಲಿಂದ ಬಂದೆ ಎಲ್ಲಿಗೆ ಹೋದೆ
ಯಾರು ನೀನು ಹೇಳು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂವತ್ತೈದು ಪೈಸೆಗೊಂದು ಮಸಾಲೆದೋಸೆ…!?
Next post ವಿಕ್ಷಿಪ್ತ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…