ಯಾರು ಯಾರಿಗಾಗಿ

ಯಾರು ಯಾರಿಗಾಗಿ ನೀನು
ಯಾರಿಗಾಗಿ ಹೊಗಳಿದೆ
ಯಾರಿಗಾಗಿ ತೆಗಳಿದೆ
ಯಾರಿಗಾಗಿ ನಗಿಸಿ ಅಳಿಸಿದೆ
ಯಾರ್‍ಯಾರು ಬಲ್ಲರೂ ನೀನು ಹೇಳು ||

ಯಾರಿಗಾಗಿ ಜೀವ ತಳೆದೆ
ಯಾರಿಗಾಗಿ ಬಂದು ನಿಂದೇ
ಯಾರಿಗಾಗಿ ಜೀವ ಸವೆದೇ
ಯಾರು ಯಾರಿಗಾಗಿ ಮನುಜ ನೀನು ಹೇಳು ||

ಜೀವ ಉಸಿರಾಟಕೆ
ಸ್ನೇಹ ಜೀವಿಯಾಗಿ ಬೆಸೆದೇ
ಎಲ್ಲಿಂದ ಬಂದೆ ಎಲ್ಲಿಗೆ ಹೋದೇ
ಯಾರ್‍ಯಾರು ಯಾರು ಬಲ್ಲರು ನೀನು ಹೇಳು ||

ಕಳವುದಿಲ್ಲಿ ಮೂರು ದಿನ
ನಡೆವುದಿಲ್ಲಿ ಮೂರು ದಿನ
ಯಾವ ಊರಿನವನು ಯಾವ
ಕೇರಿಯವನು ಯಾರ್‍ಯಾರು ಯಾರು ನೀನು ಹೇಳು ||

ಎಲ್ಲಿಗೆ ಪಯಣ
ಎಲ್ಲಿಯವರೆಗೆ ಋಣ
ಹೆಸರಲ್ಲಿ ಹೆಸರು ಲಿಖಿತ
ಕುಲಗೋತ್ರವ ಅಂಟಿಕೊಂಡವನು
ಯಾರ್‍ಯಾರು ಯಾರು ನೀನು ಹೇಳು ||

ದೇವರಲ್ಲಿ ದೇವ ಪುರಾಣ
ವೇದ ವಾಕ್ಯ ಸಿದ್ಧ ಕಣ
ಶುದ್ಧ ನಡತೆ ನೀತಿ ನೇಮ
ಬುತ್ತಿಕಟ್ಟಿ ಹೊತ್ತವನು
ಯಾರ್‍ಯಾರು ಯಾರು ನೀನು ಹೇಳು ||

ನೂರು ಪೂಜೆ ನೂರು ದಾರಿ
ನೆಟ್ಟವನು ಕತ್ತಲೆ ಬೆಳಕಿನಾಟದಲ್ಲಿ
ಸೂಜಿದಾರ ಪೋಣಿಸಿದವನು
ಸಂತೆಗೆ ನೂರು ಹಾದಿ ಕಂಡವನು
ಎಲ್ಲಿಂದ ಬಂದೆ ಎಲ್ಲಿಗೆ ಹೋದೆ
ಯಾರು ನೀನು ಹೇಳು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂವತ್ತೈದು ಪೈಸೆಗೊಂದು ಮಸಾಲೆದೋಸೆ…!?
Next post ವಿಕ್ಷಿಪ್ತ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…