ಯಾರು ಯಾರಿಗಾಗಿ

ಯಾರು ಯಾರಿಗಾಗಿ ನೀನು
ಯಾರಿಗಾಗಿ ಹೊಗಳಿದೆ
ಯಾರಿಗಾಗಿ ತೆಗಳಿದೆ
ಯಾರಿಗಾಗಿ ನಗಿಸಿ ಅಳಿಸಿದೆ
ಯಾರ್‍ಯಾರು ಬಲ್ಲರೂ ನೀನು ಹೇಳು ||

ಯಾರಿಗಾಗಿ ಜೀವ ತಳೆದೆ
ಯಾರಿಗಾಗಿ ಬಂದು ನಿಂದೇ
ಯಾರಿಗಾಗಿ ಜೀವ ಸವೆದೇ
ಯಾರು ಯಾರಿಗಾಗಿ ಮನುಜ ನೀನು ಹೇಳು ||

ಜೀವ ಉಸಿರಾಟಕೆ
ಸ್ನೇಹ ಜೀವಿಯಾಗಿ ಬೆಸೆದೇ
ಎಲ್ಲಿಂದ ಬಂದೆ ಎಲ್ಲಿಗೆ ಹೋದೇ
ಯಾರ್‍ಯಾರು ಯಾರು ಬಲ್ಲರು ನೀನು ಹೇಳು ||

ಕಳವುದಿಲ್ಲಿ ಮೂರು ದಿನ
ನಡೆವುದಿಲ್ಲಿ ಮೂರು ದಿನ
ಯಾವ ಊರಿನವನು ಯಾವ
ಕೇರಿಯವನು ಯಾರ್‍ಯಾರು ಯಾರು ನೀನು ಹೇಳು ||

ಎಲ್ಲಿಗೆ ಪಯಣ
ಎಲ್ಲಿಯವರೆಗೆ ಋಣ
ಹೆಸರಲ್ಲಿ ಹೆಸರು ಲಿಖಿತ
ಕುಲಗೋತ್ರವ ಅಂಟಿಕೊಂಡವನು
ಯಾರ್‍ಯಾರು ಯಾರು ನೀನು ಹೇಳು ||

ದೇವರಲ್ಲಿ ದೇವ ಪುರಾಣ
ವೇದ ವಾಕ್ಯ ಸಿದ್ಧ ಕಣ
ಶುದ್ಧ ನಡತೆ ನೀತಿ ನೇಮ
ಬುತ್ತಿಕಟ್ಟಿ ಹೊತ್ತವನು
ಯಾರ್‍ಯಾರು ಯಾರು ನೀನು ಹೇಳು ||

ನೂರು ಪೂಜೆ ನೂರು ದಾರಿ
ನೆಟ್ಟವನು ಕತ್ತಲೆ ಬೆಳಕಿನಾಟದಲ್ಲಿ
ಸೂಜಿದಾರ ಪೋಣಿಸಿದವನು
ಸಂತೆಗೆ ನೂರು ಹಾದಿ ಕಂಡವನು
ಎಲ್ಲಿಂದ ಬಂದೆ ಎಲ್ಲಿಗೆ ಹೋದೆ
ಯಾರು ನೀನು ಹೇಳು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂವತ್ತೈದು ಪೈಸೆಗೊಂದು ಮಸಾಲೆದೋಸೆ…!?
Next post ವಿಕ್ಷಿಪ್ತ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys