ವಿಕ್ಷಿಪ್ತ

ಗಲ್ಲಕ್ಕೆ ಕೈಹೊತ್ತು ಕೂತರೆ ಬುದ್ಧನಂತೆ
ತಲೆಯಲಿದ್ದುದು ಪೆನ್ನಿಗೆ ಇಳಿದು
ಕಾಗದದ ಮೇಲೆ ಮೂಡುವದಿಲ್ಲ.

ವಿಕ್ಷೇಪ…
ಅನುಕರಣೆಯ ಅಂಟುರೋಗ
ಅಸ್ತವ್ಯಸ್ತ ಮನದ ಒಡಕು
ವಿಚಾರ ಭಾವಗಳ ತೊಡಕು
ವ್ಯಥಾ ಕಾಲಕ್ಷೇಪ…!

ಚಪಲ…
ಇಲ್ಲದುದ ಬೇಕೆಂಬ
ಹುಂಬತನ.

ಮುಖದ ಮೇಲೆ ಕಳೆಯಿಲ್ಲ
ಕಣ್ಣಿನಲಿ ಹೊಳಪಿಲ್ಲ….. ಕಪ್ಪು ವರ್ತುಲ
ಕೂದಲು ತುಂಬಿದ ಗಲ್ಲ.

ಕತ್ತು; ನೀನು ಜಾತಿ ಹಿಪ್ಪಿ ಅಲ್ಲ…..
ಆ ಹೆಣ್ಣಿನ ಅಗಲವಾದ ಬರಿದು ಸೊಂಟವ
ನೋಡಿ ಕಣ್ಣಿನ ಹಸಿವ ತಣಿಸು
ಪರೀಕ್ಷೆ ಬರೆವ ತಲೆ ನಿನಗಿಲ್ಲ
ವಿದ್ಯೆ ನಿನ್ನ ಸೊತ್ತಲ್ಲ….

ಕಾಗದದ ಮೇಲೆ ಪೆನ್ನಿನ ಮಸಿ ಬೀಳುವುದು
ಅಲ್ಲ ವಿಚಾರ ವಸ್ತು
ಅದು ತಲೆಯೊಳಗಿನ ಕಸರತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ಯಾರಿಗಾಗಿ
Next post ಜಾಣಾ ನಾವಾಗದಿದೇನೆಲ್ಲದಕು ತಜ್ಞರವಲಂಬನೆಯೊ?

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys