Home / ಕವನ / ಕವಿತೆ / ಡೀಸೆಲ್ ಫ್ಯಾಕ್ಟರಿಯ ಹಿಂಬೆಳಕಿನಲಿ

ಡೀಸೆಲ್ ಫ್ಯಾಕ್ಟರಿಯ ಹಿಂಬೆಳಕಿನಲಿ

 

ಅಲ್ಲಿ-ಗಾಲಿಗಳಿಲ್ಲದ, ಮುರಿದ ನೂರಾರು ಟ್ರಾಲಿಗಳು ಯುದ್ಧದಲ್ಲಿ
ಮಡಿದ ವೀರಯೋಧರ ಹೆಣಗಳ ರಾಶಿಯಂತೆ ಒಂದರ
ಮೇಲೊಂದು ಬಿದ್ದಿವೆ. ಲಾನ್‌ಮೂವರ್ ಹಿಡಿದು ಹುಲ್ಲು ಕತ್ತರಿಸುವ
ಕೂಲಿಹೆಣ್ಣುಗಳು ಮಧ್ಯಾಹ್ನದ ಹಿಮದ ಮಳೆಯಲ್ಲೂ
ಸಂಜೆಯ ರೊಟ್ಟಿ ಕುರಿತಾಗಿಯೇ ದುಡಿಯುತ್ತಾರೆ;
ರಾತ್ರಿಯ ಸಂಭೋಗಕ್ಕಾಗಿಯೇ ತುಕ್ಕಿಡಿಯದ ಉಕ್ಕಿನಂತೆ ಗಡಸಾಗುತ್ತಾರೆ.
ಡೀಸೆಲ್‌ನಿಂದ ತೊಯ್ದು ತೊಪ್ಪೆಯಾದ ಕಾರ್ಮಿಕನೊಬ್ಬನ
ಬಟ್ಟೆಗಳ ಮೇಲೆ ತೇಲಾಡುವ ಬಣ್ಣದ ಚಿಟ್ಟೆಗಳನ್ನು ಹೆಣ್ಣೊಬ್ಬಳು
ಯಾಕೋ ದಿನವೂ ಹಿಡಿದು ಕೊಲ್ಲುತ್ತಿರುತ್ತಾಳೆ.

ಸಂಜೆಯ ಸೈರನ್ ಪಕ್ಕದ ಗ್ರಾಮದ ಎಲ್ಲ ವರಸೆಗಳನ್ನು ಎಂದಿನಂತೆ
ಆರಂಭಿಸಿ ಬೆಚ್ಚಗೆ ಉಳಿದುಬಿಡುತ್ತದೆ.

ಅಷ್ಟೊತ್ತಿಗಾಗಲೇ ಅಲ್ಲಿ ನೂಕು ನುಗ್ಗಲು-ಬದುಕ ಬಯಸಿದವರಲ್ಲಿ.
ಕನಸುಗಳು ಒಲೆಯೊಳಗಿನ ಕೆಂಡಗಳಂತೆ ರಂಜಿಸತೊಡಗುತ್ತವೆ!
ನೀರು ಬಿದ್ದೊಡನೆ ಆರಿಹೋಗಿ, ಇದ್ದಿಲುಗಳಾಗಿ ಮಾರಾಟಕ್ಕಿಳಿಯುತ್ತವೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...