Home / ಕವನ / ಕವಿತೆ / ಬಸವ ಶರಣವರೇಣ್ಯ

ಬಸವ ಶರಣವರೇಣ್ಯ

ಬಸವ ನಾಮ ಸ್ಮರಣೆಯೆ ಪುಣ್ಯ
ಬಸವನ ನೆನೆಯುವ ಜನುಮವೆ ಧನ್ಯ || ಪ ||
ಬಸವೇಶ್ಚರ ಬಸವಣ್ಣನೆ ಮಾನ್ಯ
ಗುರುಬಸವೇಶನೆ ಶರಣವರೇಣ್ಯ || ಅ.ಪ.||

ಎಲ್ಲ ಧರ್ಮಗಳ ಸಾರವ ಹೀರುತ
ವೀರಶೈವವನು ರೂಪಿಸಿದೆ
ಜ್ಞಾನ ಭಕ್ತಿ ವೈರಾಗ್ಯ ಕರ್ಮಗಳ
ಸಮಗ್ರ ಧರ್ಮವ ತೋರಿಸಿದೆ || ೧ ||

ಅಂತರಂಗ ಶಿವಧ್ಯಾನವು ತುಂಬಿ
ಬಹಿರಂಗದಿ ಜಗಕಲ್ಯಾಣ
ಇಹಪರ ಎರಡರ ಸೇತುವೆ ಜೋಡಿಸಿ
ಮಾನವ ಜನ್ಮಕೆ ಸನ್ಮಾನ || ೨ ||

ಸಕಲ ಜೀವರಿಗೆ ಲೇಸನ್ನೆಣಿಸಿದೆ
ದೀನ ದಲಿತರಿಗೆ ಮಾನ್ಯತೆಯು
ಗಂಡು ಹೆಣ್ಣುಗಳ ಜಾತಿ ಭೇದಗಳ
ಅಳಿಸಿದೆ ಸಮತೆಯ ಸಾಧನೆಯು || ೩ ||

ಲೌಕಿಕ ಸಂಪದ ಭೋಗ ಭಾಗ್ಯಗಳ
ಶಿವನ ಪ್ರಸಾದವು ಎನ್ನುತ ತಿಳಿದೆ
ಸಮಾಜ ಸೇವೆಗೆ ಎಲ್ಲವು ಮೀಸಲು
ಎನ್ನುತ ಸ್ವಾರ್ಥದ ಬೇರನು ಅಳಿದೆ || ೪ ||

ದುಡಿಯದೆ ಏನೂ ಸಾಗದು ಜಗದಲಿ
ದುಡಿಯದೆ ತಿನ್ನಲು ಅದು ದ್ರೋಹ
ದುಡಿಯುವ ಕಾಯಕ ತತ್ವವ ತೋರಿದೆ
ದುಡಿಮೆಯೆ ಶರಣರ ನಿಜದಾಹ || ೫ ||

ಸತ್ಯದಾಚರಣೆಯು ನಿತ್ಯ ಕಾಯಕವು
ಶಿವನಿಗಿಷ್ಟವೆಂದೆ
ಸರಳ ಸನ್ನಡತೆ ಶಿವನ ಅನುಭಾವ
ಸಾರ್ಥಕವು ಬದುಕಿಗೆಂದೆ || ೬ ||

ಹೇಗೆ ನುಡಿಯುವುದು ಹೇಗೆ ನಡೆಯುವುದು
ಎಂಬ ರೀತಿಗಳ ಜನರಿಗೆ ಕಲಿಸಿದೆ
ನುಡಿದಂತೆ ನಡೆವ ಧೈರ್ಯ ಶ್ರದ್ಧೆಗಳ
ತುಂಬಿದೆ ಕೈಲಾಸವನ್ನಿಲ್ಲಿಳಿಸಿದೆ || ೭ ||

ಸುಳ್ಳು ಕಳವು ಕೊಲೆ ಕೋಪ ಹೇವರಿಕೆ
ಹೊಗಳು ತೆಗಳುಗಳು ಪಾಪ
ನೀತಿ ಸೂತ್ರಗಳ ಜನಕೆ ನೀಡಿದೆಯೊ
ಇದುವೆ ಧರ್ಮ ಕಲಾಪ || ೮ ||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...