Home / ಕವನ / ಕವಿತೆ / ಬಸವ ಶರಣವರೇಣ್ಯ

ಬಸವ ಶರಣವರೇಣ್ಯ

ಬಸವ ನಾಮ ಸ್ಮರಣೆಯೆ ಪುಣ್ಯ
ಬಸವನ ನೆನೆಯುವ ಜನುಮವೆ ಧನ್ಯ || ಪ ||
ಬಸವೇಶ್ಚರ ಬಸವಣ್ಣನೆ ಮಾನ್ಯ
ಗುರುಬಸವೇಶನೆ ಶರಣವರೇಣ್ಯ || ಅ.ಪ.||

ಎಲ್ಲ ಧರ್ಮಗಳ ಸಾರವ ಹೀರುತ
ವೀರಶೈವವನು ರೂಪಿಸಿದೆ
ಜ್ಞಾನ ಭಕ್ತಿ ವೈರಾಗ್ಯ ಕರ್ಮಗಳ
ಸಮಗ್ರ ಧರ್ಮವ ತೋರಿಸಿದೆ || ೧ ||

ಅಂತರಂಗ ಶಿವಧ್ಯಾನವು ತುಂಬಿ
ಬಹಿರಂಗದಿ ಜಗಕಲ್ಯಾಣ
ಇಹಪರ ಎರಡರ ಸೇತುವೆ ಜೋಡಿಸಿ
ಮಾನವ ಜನ್ಮಕೆ ಸನ್ಮಾನ || ೨ ||

ಸಕಲ ಜೀವರಿಗೆ ಲೇಸನ್ನೆಣಿಸಿದೆ
ದೀನ ದಲಿತರಿಗೆ ಮಾನ್ಯತೆಯು
ಗಂಡು ಹೆಣ್ಣುಗಳ ಜಾತಿ ಭೇದಗಳ
ಅಳಿಸಿದೆ ಸಮತೆಯ ಸಾಧನೆಯು || ೩ ||

ಲೌಕಿಕ ಸಂಪದ ಭೋಗ ಭಾಗ್ಯಗಳ
ಶಿವನ ಪ್ರಸಾದವು ಎನ್ನುತ ತಿಳಿದೆ
ಸಮಾಜ ಸೇವೆಗೆ ಎಲ್ಲವು ಮೀಸಲು
ಎನ್ನುತ ಸ್ವಾರ್ಥದ ಬೇರನು ಅಳಿದೆ || ೪ ||

ದುಡಿಯದೆ ಏನೂ ಸಾಗದು ಜಗದಲಿ
ದುಡಿಯದೆ ತಿನ್ನಲು ಅದು ದ್ರೋಹ
ದುಡಿಯುವ ಕಾಯಕ ತತ್ವವ ತೋರಿದೆ
ದುಡಿಮೆಯೆ ಶರಣರ ನಿಜದಾಹ || ೫ ||

ಸತ್ಯದಾಚರಣೆಯು ನಿತ್ಯ ಕಾಯಕವು
ಶಿವನಿಗಿಷ್ಟವೆಂದೆ
ಸರಳ ಸನ್ನಡತೆ ಶಿವನ ಅನುಭಾವ
ಸಾರ್ಥಕವು ಬದುಕಿಗೆಂದೆ || ೬ ||

ಹೇಗೆ ನುಡಿಯುವುದು ಹೇಗೆ ನಡೆಯುವುದು
ಎಂಬ ರೀತಿಗಳ ಜನರಿಗೆ ಕಲಿಸಿದೆ
ನುಡಿದಂತೆ ನಡೆವ ಧೈರ್ಯ ಶ್ರದ್ಧೆಗಳ
ತುಂಬಿದೆ ಕೈಲಾಸವನ್ನಿಲ್ಲಿಳಿಸಿದೆ || ೭ ||

ಸುಳ್ಳು ಕಳವು ಕೊಲೆ ಕೋಪ ಹೇವರಿಕೆ
ಹೊಗಳು ತೆಗಳುಗಳು ಪಾಪ
ನೀತಿ ಸೂತ್ರಗಳ ಜನಕೆ ನೀಡಿದೆಯೊ
ಇದುವೆ ಧರ್ಮ ಕಲಾಪ || ೮ ||
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್