ಬಸವ ಶರಣವರೇಣ್ಯ

ಬಸವ ನಾಮ ಸ್ಮರಣೆಯೆ ಪುಣ್ಯ
ಬಸವನ ನೆನೆಯುವ ಜನುಮವೆ ಧನ್ಯ || ಪ ||
ಬಸವೇಶ್ಚರ ಬಸವಣ್ಣನೆ ಮಾನ್ಯ
ಗುರುಬಸವೇಶನೆ ಶರಣವರೇಣ್ಯ || ಅ.ಪ.||

ಎಲ್ಲ ಧರ್ಮಗಳ ಸಾರವ ಹೀರುತ
ವೀರಶೈವವನು ರೂಪಿಸಿದೆ
ಜ್ಞಾನ ಭಕ್ತಿ ವೈರಾಗ್ಯ ಕರ್ಮಗಳ
ಸಮಗ್ರ ಧರ್ಮವ ತೋರಿಸಿದೆ || ೧ ||

ಅಂತರಂಗ ಶಿವಧ್ಯಾನವು ತುಂಬಿ
ಬಹಿರಂಗದಿ ಜಗಕಲ್ಯಾಣ
ಇಹಪರ ಎರಡರ ಸೇತುವೆ ಜೋಡಿಸಿ
ಮಾನವ ಜನ್ಮಕೆ ಸನ್ಮಾನ || ೨ ||

ಸಕಲ ಜೀವರಿಗೆ ಲೇಸನ್ನೆಣಿಸಿದೆ
ದೀನ ದಲಿತರಿಗೆ ಮಾನ್ಯತೆಯು
ಗಂಡು ಹೆಣ್ಣುಗಳ ಜಾತಿ ಭೇದಗಳ
ಅಳಿಸಿದೆ ಸಮತೆಯ ಸಾಧನೆಯು || ೩ ||

ಲೌಕಿಕ ಸಂಪದ ಭೋಗ ಭಾಗ್ಯಗಳ
ಶಿವನ ಪ್ರಸಾದವು ಎನ್ನುತ ತಿಳಿದೆ
ಸಮಾಜ ಸೇವೆಗೆ ಎಲ್ಲವು ಮೀಸಲು
ಎನ್ನುತ ಸ್ವಾರ್ಥದ ಬೇರನು ಅಳಿದೆ || ೪ ||

ದುಡಿಯದೆ ಏನೂ ಸಾಗದು ಜಗದಲಿ
ದುಡಿಯದೆ ತಿನ್ನಲು ಅದು ದ್ರೋಹ
ದುಡಿಯುವ ಕಾಯಕ ತತ್ವವ ತೋರಿದೆ
ದುಡಿಮೆಯೆ ಶರಣರ ನಿಜದಾಹ || ೫ ||

ಸತ್ಯದಾಚರಣೆಯು ನಿತ್ಯ ಕಾಯಕವು
ಶಿವನಿಗಿಷ್ಟವೆಂದೆ
ಸರಳ ಸನ್ನಡತೆ ಶಿವನ ಅನುಭಾವ
ಸಾರ್ಥಕವು ಬದುಕಿಗೆಂದೆ || ೬ ||

ಹೇಗೆ ನುಡಿಯುವುದು ಹೇಗೆ ನಡೆಯುವುದು
ಎಂಬ ರೀತಿಗಳ ಜನರಿಗೆ ಕಲಿಸಿದೆ
ನುಡಿದಂತೆ ನಡೆವ ಧೈರ್ಯ ಶ್ರದ್ಧೆಗಳ
ತುಂಬಿದೆ ಕೈಲಾಸವನ್ನಿಲ್ಲಿಳಿಸಿದೆ || ೭ ||

ಸುಳ್ಳು ಕಳವು ಕೊಲೆ ಕೋಪ ಹೇವರಿಕೆ
ಹೊಗಳು ತೆಗಳುಗಳು ಪಾಪ
ನೀತಿ ಸೂತ್ರಗಳ ಜನಕೆ ನೀಡಿದೆಯೊ
ಇದುವೆ ಧರ್ಮ ಕಲಾಪ || ೮ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಲಿವರನ ಯಾತ್ರೆಗಳು
Next post ಒಂದು ಸಲ ಹೀಗಾಯಿತು

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

cheap jordans|wholesale air max|wholesale jordans|wholesale jewelry|wholesale jerseys