Home / ಕವನ / ಕವಿತೆ / ಬಸವ ಶರಣವರೇಣ್ಯ

ಬಸವ ಶರಣವರೇಣ್ಯ

ಬಸವ ನಾಮ ಸ್ಮರಣೆಯೆ ಪುಣ್ಯ
ಬಸವನ ನೆನೆಯುವ ಜನುಮವೆ ಧನ್ಯ || ಪ ||
ಬಸವೇಶ್ಚರ ಬಸವಣ್ಣನೆ ಮಾನ್ಯ
ಗುರುಬಸವೇಶನೆ ಶರಣವರೇಣ್ಯ || ಅ.ಪ.||

ಎಲ್ಲ ಧರ್ಮಗಳ ಸಾರವ ಹೀರುತ
ವೀರಶೈವವನು ರೂಪಿಸಿದೆ
ಜ್ಞಾನ ಭಕ್ತಿ ವೈರಾಗ್ಯ ಕರ್ಮಗಳ
ಸಮಗ್ರ ಧರ್ಮವ ತೋರಿಸಿದೆ || ೧ ||

ಅಂತರಂಗ ಶಿವಧ್ಯಾನವು ತುಂಬಿ
ಬಹಿರಂಗದಿ ಜಗಕಲ್ಯಾಣ
ಇಹಪರ ಎರಡರ ಸೇತುವೆ ಜೋಡಿಸಿ
ಮಾನವ ಜನ್ಮಕೆ ಸನ್ಮಾನ || ೨ ||

ಸಕಲ ಜೀವರಿಗೆ ಲೇಸನ್ನೆಣಿಸಿದೆ
ದೀನ ದಲಿತರಿಗೆ ಮಾನ್ಯತೆಯು
ಗಂಡು ಹೆಣ್ಣುಗಳ ಜಾತಿ ಭೇದಗಳ
ಅಳಿಸಿದೆ ಸಮತೆಯ ಸಾಧನೆಯು || ೩ ||

ಲೌಕಿಕ ಸಂಪದ ಭೋಗ ಭಾಗ್ಯಗಳ
ಶಿವನ ಪ್ರಸಾದವು ಎನ್ನುತ ತಿಳಿದೆ
ಸಮಾಜ ಸೇವೆಗೆ ಎಲ್ಲವು ಮೀಸಲು
ಎನ್ನುತ ಸ್ವಾರ್ಥದ ಬೇರನು ಅಳಿದೆ || ೪ ||

ದುಡಿಯದೆ ಏನೂ ಸಾಗದು ಜಗದಲಿ
ದುಡಿಯದೆ ತಿನ್ನಲು ಅದು ದ್ರೋಹ
ದುಡಿಯುವ ಕಾಯಕ ತತ್ವವ ತೋರಿದೆ
ದುಡಿಮೆಯೆ ಶರಣರ ನಿಜದಾಹ || ೫ ||

ಸತ್ಯದಾಚರಣೆಯು ನಿತ್ಯ ಕಾಯಕವು
ಶಿವನಿಗಿಷ್ಟವೆಂದೆ
ಸರಳ ಸನ್ನಡತೆ ಶಿವನ ಅನುಭಾವ
ಸಾರ್ಥಕವು ಬದುಕಿಗೆಂದೆ || ೬ ||

ಹೇಗೆ ನುಡಿಯುವುದು ಹೇಗೆ ನಡೆಯುವುದು
ಎಂಬ ರೀತಿಗಳ ಜನರಿಗೆ ಕಲಿಸಿದೆ
ನುಡಿದಂತೆ ನಡೆವ ಧೈರ್ಯ ಶ್ರದ್ಧೆಗಳ
ತುಂಬಿದೆ ಕೈಲಾಸವನ್ನಿಲ್ಲಿಳಿಸಿದೆ || ೭ ||

ಸುಳ್ಳು ಕಳವು ಕೊಲೆ ಕೋಪ ಹೇವರಿಕೆ
ಹೊಗಳು ತೆಗಳುಗಳು ಪಾಪ
ನೀತಿ ಸೂತ್ರಗಳ ಜನಕೆ ನೀಡಿದೆಯೊ
ಇದುವೆ ಧರ್ಮ ಕಲಾಪ || ೮ ||
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...