Home / ಲೇಖನ / ವಿಜ್ಞಾನ / ವಿನೂತನ ಫರ್ನಿಚರ್‌ಗಳು

ವಿನೂತನ ಫರ್ನಿಚರ್‌ಗಳು

ಮೂಲತಃ ಮರದ ಕುರ್ಚಿ, ಟೇಬಲ್‌ಗಳಿಂದ ಮನೆಯನ್ನು ಶಂಗರಿಸಲಾಗುತಿತ್ತು. (ಇಂದಿಗೂ) ನಂತರ ಈ ಸ್ಥಳವನ್ನು ಸ್ಟೀಲ್ ತುಂಬಿತು. ಇದೂ ಕೂಡ ಅನೇಕ ಕಾರಣಗಳಿಗಾಗಿ ಬೇಡವೆನಿಸಿ ಷ್ಟಾಸ್ಟಿಕ್, ಟೇಬಲ್, ಕುರ್ಚಿಗಳು ಬಂದವು. ಇವು ಯಾವವನ್ನು ಪೂರ್ಣ ತಿರಸ್ಕರಿಸಲಾಗದಿದ್ದರೂ ಹೊಸ ಆವಿಷ್ಕಾರಗಳು ದಿನೇ ದಿನೇ ಆಗುತ್ತಿರುವುದರ ಪರಿಣಾಮವಾಗಿ ನೂತನ ತಂತ್ರಜ್ಞಾನ ಮತ್ತು ಯಂತ್ರಗಳಿಂದ ದೊಡ್ಡಪ್ರಮಾಣದಲ್ಲಿ ಉತ್ತಮ ಗುಣಮಟ್ಟದೆಂದು ಕರೆಯಿಸಿಕೊಳ್ಳುವ ಫರ್ನಿಚರ್‌ಗಳು ತಯಾರಾಗುತ್ತಲಿದೆ.

ಹುಸೈಫಾ ಫರ್ನಿಚರ್ ಇಂಡಸ್ತ್ರೀಸ್ ಈ ತರಹ ಹೊಸ ಫರ್ನೀಚರ್ ತಯಾರಿಸುವ ಒಂದು ಸಂಸ್ಥೆ. ಇಟಾಲಿಯನ್ ಮಾದರಿ ಫರ್ನಿಚರ್‌ಗಳ ಪ್ರಾಯಶಃ ಏಕಮಾತ್ರ ತಯಾರಿಕರಾದ ಇವರ ಉತ್ಪನ್ನಗಳು ರೆಸಿಡೆನ್ಸಿ ರಸ್ತೆಯ ಶೋರೂಮ್ ಹುಸೈಫಾ ಡೆಕೋರ್‌ನಲ್ಲಿ “ಇಂಡೋಲೈನ್” ಎಂಬ ಬ್ರ್ಯಾಂಡ್‌ನಲ್ಲಿ ದೊರೆಯುತ್ತವೆ. ಅಂದವಾಗಿ ಕಾಣುವ ದೀರ್ಘವಾಗಿ ಬಾಳಿಕೆ ಬರುವ, ಸುಲಭವಾಗಿ ನಿರ್ವಹಿಸಲ್ಪಡುವ ಇವುಗಳ ಮಾರಾಟದ ಬೆಲೆಯೂ ಕೂಡ ದುಬಾರಿ ಅಲ್ಲವೆಂದು ತಯಾರಕರು ಹೇಳುತ್ತಾರೆ.

ಹುಸೈಫಾ ಡೆಕೋರಾದಲ್ಲಿ ಸಿಜನ್ ಮಾಡಿದ ಹಾಗೂ ಟ್ರೀಟ್ ಮಾಡಿದ ರಬ್ಬರ್ ಮರ ಮತ್ತು ಎಂ.ಡಿ.ಎಫ್ (ಮಿಡಿಯಂ ಡೆನ್ಸಿಟಿ ಪೈಬರ ಬೋರ್ಡ್‌, ಇದನ್ನು ಅಮೇರಿಕಾದಲ್ಲಿ ಮರಕ್ಕೆ ಸಮಾನವೆಂದು ತಿಳಿಯುತ್ತಾರೆ) ನಲ್ಲಿ ಕುರ್ಚಿ, ಟೇಬಲ್‌ಗಳು ದೊರೆಯುತ್ತವೆ. ಆಧುನಿಕ ಯಂತ್ರಗಳಿಂದ ತಯಾರಾದ ಫರ್ನಿಚರ್‌ಗಳಿಗೆ ವೆನಿರ್ ಅಥವಾ ಪೇಂಟ್ ಹಚ್ಚಿ ಪಾಲಿಯರಿಥೇನ್ ಕೋಟಿಂಗ್ ಕೊಟ್ಟಿರುವುದರಿಂವ ಇದು ಫರ್ನಿಚರ್ ಅನ್ನು ರಕ್ಷಿಸುತ್ತದೆ. ಸುಲಭದರದ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸಾಟಿಯಾಗಿ ನಿಲ್ಲುವ ೨೧ನೇ ಶತಮಾನದ ಸಿದ್ಧ ಫರ್ನಿಚರ್‌ಗಳು ಇವು ಆಗಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...