Home / ಲೇಖನ / ವಿಜ್ಞಾನ / ವಿನೂತನ ಫರ್ನಿಚರ್‌ಗಳು

ವಿನೂತನ ಫರ್ನಿಚರ್‌ಗಳು

ಮೂಲತಃ ಮರದ ಕುರ್ಚಿ, ಟೇಬಲ್‌ಗಳಿಂದ ಮನೆಯನ್ನು ಶಂಗರಿಸಲಾಗುತಿತ್ತು. (ಇಂದಿಗೂ) ನಂತರ ಈ ಸ್ಥಳವನ್ನು ಸ್ಟೀಲ್ ತುಂಬಿತು. ಇದೂ ಕೂಡ ಅನೇಕ ಕಾರಣಗಳಿಗಾಗಿ ಬೇಡವೆನಿಸಿ ಷ್ಟಾಸ್ಟಿಕ್, ಟೇಬಲ್, ಕುರ್ಚಿಗಳು ಬಂದವು. ಇವು ಯಾವವನ್ನು ಪೂರ್ಣ ತಿರಸ್ಕರಿಸಲಾಗದಿದ್ದರೂ ಹೊಸ ಆವಿಷ್ಕಾರಗಳು ದಿನೇ ದಿನೇ ಆಗುತ್ತಿರುವುದರ ಪರಿಣಾಮವಾಗಿ ನೂತನ ತಂತ್ರಜ್ಞಾನ ಮತ್ತು ಯಂತ್ರಗಳಿಂದ ದೊಡ್ಡಪ್ರಮಾಣದಲ್ಲಿ ಉತ್ತಮ ಗುಣಮಟ್ಟದೆಂದು ಕರೆಯಿಸಿಕೊಳ್ಳುವ ಫರ್ನಿಚರ್‌ಗಳು ತಯಾರಾಗುತ್ತಲಿದೆ.

ಹುಸೈಫಾ ಫರ್ನಿಚರ್ ಇಂಡಸ್ತ್ರೀಸ್ ಈ ತರಹ ಹೊಸ ಫರ್ನೀಚರ್ ತಯಾರಿಸುವ ಒಂದು ಸಂಸ್ಥೆ. ಇಟಾಲಿಯನ್ ಮಾದರಿ ಫರ್ನಿಚರ್‌ಗಳ ಪ್ರಾಯಶಃ ಏಕಮಾತ್ರ ತಯಾರಿಕರಾದ ಇವರ ಉತ್ಪನ್ನಗಳು ರೆಸಿಡೆನ್ಸಿ ರಸ್ತೆಯ ಶೋರೂಮ್ ಹುಸೈಫಾ ಡೆಕೋರ್‌ನಲ್ಲಿ “ಇಂಡೋಲೈನ್” ಎಂಬ ಬ್ರ್ಯಾಂಡ್‌ನಲ್ಲಿ ದೊರೆಯುತ್ತವೆ. ಅಂದವಾಗಿ ಕಾಣುವ ದೀರ್ಘವಾಗಿ ಬಾಳಿಕೆ ಬರುವ, ಸುಲಭವಾಗಿ ನಿರ್ವಹಿಸಲ್ಪಡುವ ಇವುಗಳ ಮಾರಾಟದ ಬೆಲೆಯೂ ಕೂಡ ದುಬಾರಿ ಅಲ್ಲವೆಂದು ತಯಾರಕರು ಹೇಳುತ್ತಾರೆ.

ಹುಸೈಫಾ ಡೆಕೋರಾದಲ್ಲಿ ಸಿಜನ್ ಮಾಡಿದ ಹಾಗೂ ಟ್ರೀಟ್ ಮಾಡಿದ ರಬ್ಬರ್ ಮರ ಮತ್ತು ಎಂ.ಡಿ.ಎಫ್ (ಮಿಡಿಯಂ ಡೆನ್ಸಿಟಿ ಪೈಬರ ಬೋರ್ಡ್‌, ಇದನ್ನು ಅಮೇರಿಕಾದಲ್ಲಿ ಮರಕ್ಕೆ ಸಮಾನವೆಂದು ತಿಳಿಯುತ್ತಾರೆ) ನಲ್ಲಿ ಕುರ್ಚಿ, ಟೇಬಲ್‌ಗಳು ದೊರೆಯುತ್ತವೆ. ಆಧುನಿಕ ಯಂತ್ರಗಳಿಂದ ತಯಾರಾದ ಫರ್ನಿಚರ್‌ಗಳಿಗೆ ವೆನಿರ್ ಅಥವಾ ಪೇಂಟ್ ಹಚ್ಚಿ ಪಾಲಿಯರಿಥೇನ್ ಕೋಟಿಂಗ್ ಕೊಟ್ಟಿರುವುದರಿಂವ ಇದು ಫರ್ನಿಚರ್ ಅನ್ನು ರಕ್ಷಿಸುತ್ತದೆ. ಸುಲಭದರದ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸಾಟಿಯಾಗಿ ನಿಲ್ಲುವ ೨೧ನೇ ಶತಮಾನದ ಸಿದ್ಧ ಫರ್ನಿಚರ್‌ಗಳು ಇವು ಆಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...