ಅತ್ತು ಅತ್ತು ಏಕೆ?

ಅತ್ತು ಅತ್ತು ಏಕೆ?
ಕಣ್ಣ ನೀರಲಿ ಕೈಯ ತೊಳೆವೆ|
ಪ್ರಕೃತಿಯ ನಿಯಮ ಮೀರಿ
ಇಲ್ಲಿ ಏನು ನಡೆಯದು||
ನಾವು ಪ್ರಕೃತಿಯನರಿತು
ಬಾಳಿದರೇ ನೋವ ಸಹಿಸಬಹುದು||

ಹುಟ್ಟು ಖಚಿತ
ಸಾವು ನಿಶ್ಚಿತ ಎಂಬಂತೆ,
ನಮ್ಮ ನೆರಳು ನಮ್ಮ ನೆಚ್ಚಿ
ಬರುವಂತೆ
ನೋವು ಸಹ ಸದಾ
ಸುತ್ತಾ ಸುಳಿದಾಡುತಿಹುದು||

ಇಂದು ಸಾಯಲೇ ಬೇಕು
ಇಲ್ಲಿ ಹುಟ್ಟಿರುವುದಕೆ|
ಮುಂದೆ ಹುಟ್ಟಲೇ ಬೇಕು
ಕರ್ಮ ತೀರಿಸಿ ಪುಣ್ಯಗಳಿಸಲಿಕ್ಕೆ||

ಅನ್ನದ ಋಣವು ತೀರಿದ ಮೇಲೆ
ಹೋಗುವವರೆ ಎಲ್ಲಾ|
ಹಣ್ಣು ಮಾಗಿದ ಮೇಲೆ ತೊಟ್ಟು
ಕಳಚಿ ಬೀಳುವ ಹಾಗೆ
ಇಂದು ಇವರು, ನಾಳೆ ನಾವು
ಮುಂದೆ ಅವರು, ಹಿಂದೆ ನಾವು||

ತಂದೆ ತಾಯಿಯ ಜೀವ ದೊಡ್ಡದು
ದೈವಕಿಂತಲೂ ಅವರು ಹಿರಿದು
ಆದರವರೂ ಕಾಲಕ್ಕೆ ಅಧೀನರು|
ಇಲ್ಲಿ ಹುಟ್ಟಿದ ಆ ದೇವರುಗಳೇ
ಕಟ್ಟಕಡೆಗೆ ಶಿಲೆಗಳಾಗಿ ನಿಂತರು||

ದುಃಖ ಸರಿದು ಯೋಚಿಸು
ನಾಳಿನ ಬಾಳ ರೂಪಿಸು|
ಚಿಕ್ಕವರಿಗೆ ಧೈರ್ಯ ತುಂಬಿಸು
ಮಡಿದವರಿಗೆ ನಮಿಸು
ಹೆತ್ತವರ ಪ್ರೀತಿ, ಪ್ರೇಮ,
ತ್ಯಾಗ, ಧ್ಯೇಯಗಳ ಸದಾ ಸ್ಮರಿಸುತಲಿ
ಬಾಳ ಮುಂದುವರೆಸು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿನೂತನ ಫರ್ನಿಚರ್‌ಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೪

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys