ದೀಪದಿಂದ ದೀಪ ಹಚ್ಚು

ದೀಪದಿಂದ ದೀಪ ಹಚ್ಚು
ಬೆಳಗಲಿ ಬಾಳದೀವಿಗೆ
ಕಳೆದು ತಿಮಿರ ಬೆಳಕು ಬರಲಿ
ನಿತ್ಯ ನಮ್ಮ ಬಾಳಿಗೆ ||

ದೈವನಿತ್ತ ಪ್ರಕೃತಿ ನಮಗೆ
ಅದುವೆ ನಮಗೆ ತಾಯಿಯು
ಜೀವವುಳಿಸಿ ಬಾಳು ಕೊಡುವ
ಅದಕೆ ನಮಿಸು ನಿತ್ಯವು ||

ಸೂರ್ಯ ಚಂದ್ರ ತಾರಾಗಣವು
ನೋಡಲೆಷ್ಟು ಸುಂದರ
ಬೆಟ್ಟ ಗುಡ್ಡ ನದಿಯು ಜಲಧಿ
ದೇವ ಕೊಟ್ಟ ಸಿರಿವರ ||

ಮಳೆಯು ಇರಲಿ ಚಳಿಯು ಇರಲಿ
ಬಿಸಿಲು, ಗಾಳಿ ಬೀಸಲಿ
ಹದದ ಬಾಳೆ ಮುದವ ಕೊಡುವ
ಇವೆಲ್ಲವಿರಲಿ ಜೊತೆಯಲಿ ||

ಉಲಿವ ಹಕ್ಕಿ ಬೆಳಗೂ ಚುಕ್ಕಿ
ಬೆಳದಿಂಗಳ ಮೋದವು
ಎಂಥ ಚೆಲುವು ಎಂಥ ಮುದವು
ಎಂಥಹ ಸೌಂದರ್ಯವು ||

ಬೊಚ್ಚು ಬಾಯಿ ಹಾಲುಗಲ್ಲ
ಮಗುವ ನಗುವು ಸುಂದರ
ತರುವ ತಬ್ಬಿ ಬೆಳೆವ ಲತೆಗೆ
ಒಡಲೆಲ್ಲೆಡೆ ಕಾತುರ ||

ಇಷ್ಟು ಕೊಡುಗೆ ನೀಡಿದ
ಆ ದೈವ ನಮಗೆ ಅಗೋಚರ
ಭಕ್ತಿ ಭಾವದಿಂದ ಅವನ
ಭಜಿಸಿ ನಮಿಸೆ ಗೋಚರ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಸಲ ಹೀಗಾಯಿತು
Next post ಕರುನಾಡು ಸ್ವರ್ಗವೇನೆ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys