ಕರುನಾಡು ಸ್ವರ್ಗವೇನೆ

ಕರುನಾಡು ಸ್ವರ್ಗವೇನೆ
ಕನ್ನಡವು ಜೇನು ತಾನೆ
ಇಂಥ ಮಣ್ಣಲ್ಲಿ ಪಡೆದ ಕಣ್ಣಲ್ಲಿ
ಏನಿಲ್ಲ ಹೇಳು ನೀನೆ!

ನೂರಾರು ಕವಿಗಳಿಲ್ಲಿ
ಸಾವಿರದ ಪದಗಳಲ್ಲಿ
ಬೆಳೆದ ಹಸಿರಲಿ ಪಡೆದ ಉಸಿರಲಿ
ಚಿರವಾಯ್ತು ಕಲ್ಪವಲ್ಲಿ;
ಕರಿಮಣ್ಣ ಒಡಲಿನಲ್ಲಿ

ನೂರಾರು ರಾಗ ಇಲ್ಲಿ
ದಣಿವಿರದ ಮೋಡಿಯಲ್ಲಿ
ಜಗವ ಸೆಳೆಯಿತು ಮಧುರ ಮಾಡಿತು
ಎಲ್ಲೆಲ್ಲು ಸ್ವರವ ಚೆಲ್ಲಿ;
ಸರಿಗಮದ ಹನಿಗಳಲ್ಲಿ

ತ್ಯಾಗಕ್ಕೆ ಹೆಸರು ಗೊಮ್ಟ
ಅಚಲತೆಗೆ ಗೋಲ ಗುಮ್ಟ
ಶಿಲ್ಪ ಕುಣಿವುದು ಬುದ್ದಿ ಮಣಿವುದು
ಬೇಲೂರು ಹಂಪೆಯಲ್ಲಿ;
ತಕಧಿಮಿತೊ ತಾಳದಲ್ಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪದಿಂದ ದೀಪ ಹಚ್ಚು
Next post ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys