ಕರುನಾಡು ಸ್ವರ್ಗವೇನೆ

ಕರುನಾಡು ಸ್ವರ್ಗವೇನೆ
ಕನ್ನಡವು ಜೇನು ತಾನೆ
ಇಂಥ ಮಣ್ಣಲ್ಲಿ ಪಡೆದ ಕಣ್ಣಲ್ಲಿ
ಏನಿಲ್ಲ ಹೇಳು ನೀನೆ!

ನೂರಾರು ಕವಿಗಳಿಲ್ಲಿ
ಸಾವಿರದ ಪದಗಳಲ್ಲಿ
ಬೆಳೆದ ಹಸಿರಲಿ ಪಡೆದ ಉಸಿರಲಿ
ಚಿರವಾಯ್ತು ಕಲ್ಪವಲ್ಲಿ;
ಕರಿಮಣ್ಣ ಒಡಲಿನಲ್ಲಿ

ನೂರಾರು ರಾಗ ಇಲ್ಲಿ
ದಣಿವಿರದ ಮೋಡಿಯಲ್ಲಿ
ಜಗವ ಸೆಳೆಯಿತು ಮಧುರ ಮಾಡಿತು
ಎಲ್ಲೆಲ್ಲು ಸ್ವರವ ಚೆಲ್ಲಿ;
ಸರಿಗಮದ ಹನಿಗಳಲ್ಲಿ

ತ್ಯಾಗಕ್ಕೆ ಹೆಸರು ಗೊಮ್ಟ
ಅಚಲತೆಗೆ ಗೋಲ ಗುಮ್ಟ
ಶಿಲ್ಪ ಕುಣಿವುದು ಬುದ್ದಿ ಮಣಿವುದು
ಬೇಲೂರು ಹಂಪೆಯಲ್ಲಿ;
ತಕಧಿಮಿತೊ ತಾಳದಲ್ಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪದಿಂದ ದೀಪ ಹಚ್ಚು
Next post ಸಾಹಿತ್ಯ ಸಮ್ಮೇಳನಗಳು ಮತ್ತು ವಿವಾದಗಳು

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…