Home / ಕವನ / ಕವಿತೆ / ನಾವು ಮತ್ತು ಹಂದಿಗಳು

ನಾವು ಮತ್ತು ಹಂದಿಗಳು

ನಮ್ಮೂರಲ್ಲಿ
ಹುಡುಕಬೇಕಾಗಿಲ್ಲ
ಕಣ್ಣು ಹೊರಳಿಸಿದಲ್ಲಿ
ನಾನಾ ಗಾತ್ರ, ಗೋತ್ರದ ಹಂದಿಗಳು.

ಅಸಹ್ಯವೆಂಬುದಿಲ್ಲ
ಕಸ ರಸದ ಬೇಧವಿಲ್ಲ
ಹುಡುಕಿ ಹೋಗಿ ತಿನ್ನುತ್ತವೆ.

ಕೊಚ್ಚೆ, ಚರಂಡಿ
ಈಜುಕೊಳ ಮಾಡಿ
ಮನಸ್ವಿ ಉರುಳಾಡಿ, ಹೊರಳಾಡಿ
ಕೆಟ್ಟದ್ದ ಗಟ್ಟಿಯಾಗಿ ಮೆತ್ತಿಕೊಳ್ಳುತ್ತವೆ.

ಕಸ ತಿನ್ನುತ್ತವೆ
ಕೊಚ್ಚೆ ಮೆತ್ತಿಕೊಳ್ಳುತ್ತವೆ
ವಿಸ್ಮಯ!
ಬದುಕಿವೆ; ಆರೋಗ್ಯವಾಗಿವೆ.

ಕರ್ರಗಿನ
ವಿಕೃತ ಗುಡಾಣಾಕಾರದ ಎದೆ, ಹೊಟ್ಟೆಯಿಂದ
ಸೋರುವ ರಾಡಿ
ನಡೆಯಲ್ಲೆಲ್ಲಾ ರಂಗೋಲಿ ಬಿಡಿಸುತ್ವೆ.

ಕಂಪಳ ಕಟ್ಟಿಕೊಂಡು
ಬೀಗುತ್ತಾ
ಗುಟುರು ಹಾಕುತ್ತಾ
ಸಿಕ್ಕಿದ್ದಕ್ಕೆ ಉಜ್ಜಿ ತೀಟೆ ತೀರಿಸಿಕೊಳ್ಳುತ್ತ
ನಿರ್ಭಯವಾಗಿ ಮೆರೆಯುವವು.

ಭ್ರಷ್ಟಾಚಾರಿಗಳಂತೆ
ಪ್ರಜ್ಞೆ ಸ್ವಾಭಿಮಾನ ರಹಿತ ಕ್ಷುದ್ರ ಜಂತುಗಳು
ಗದರಿಸೆ ತಿರುಗಿ ಬೀಳುವವು
ಮಾರಕ ರೋಗ ವಾಹಕಗಳು
ತೊಡರಿ ತೊಡರಿ ಕಾಡುವವು.

ಸ್ವಾಭಾವಿಕ
ಎಡರು ತೊಡರುಗಳು ನೂರಾರು
ಹಂದಿಗಳು, ಅಂತಹವುಗಳ ಜೊತೆ
ಈಚೀಚೆಗೆ
ವನ್ಯ ಮೃಗಗಳ ಅತಿಕ್ರಮಣ ಬೇರೆ ಸೇರಿ
ಬಾಳು ದಿನೇ ದಿನೇ ಸಮಸ್ಯಾತ್ಮಕವಾಗುತ್ತಿದೆ.

ಇವು ಹೆಚ್ಚಿನವು ನಮ್ಮದೇ ತಪ್ಪಿನ ಫಲ!
ಯಾವುದೇ ಇರಲಿ
ನಮಗೆ ಒಳ್ಳೆಯದು ನಾವೇ ಮಾಡಿಕೊಳ್ಳಬೇಕು
ವಿಚಾರಿಸಬೇಕು
ಬದಲಾಗಬೇಕು; ಮುಂದಾಗಬೇಕು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...