Home / ಕವನ / ಕವಿತೆ / ನಾವು ಮತ್ತು ಹಂದಿಗಳು

ನಾವು ಮತ್ತು ಹಂದಿಗಳು

ನಮ್ಮೂರಲ್ಲಿ
ಹುಡುಕಬೇಕಾಗಿಲ್ಲ
ಕಣ್ಣು ಹೊರಳಿಸಿದಲ್ಲಿ
ನಾನಾ ಗಾತ್ರ, ಗೋತ್ರದ ಹಂದಿಗಳು.

ಅಸಹ್ಯವೆಂಬುದಿಲ್ಲ
ಕಸ ರಸದ ಬೇಧವಿಲ್ಲ
ಹುಡುಕಿ ಹೋಗಿ ತಿನ್ನುತ್ತವೆ.

ಕೊಚ್ಚೆ, ಚರಂಡಿ
ಈಜುಕೊಳ ಮಾಡಿ
ಮನಸ್ವಿ ಉರುಳಾಡಿ, ಹೊರಳಾಡಿ
ಕೆಟ್ಟದ್ದ ಗಟ್ಟಿಯಾಗಿ ಮೆತ್ತಿಕೊಳ್ಳುತ್ತವೆ.

ಕಸ ತಿನ್ನುತ್ತವೆ
ಕೊಚ್ಚೆ ಮೆತ್ತಿಕೊಳ್ಳುತ್ತವೆ
ವಿಸ್ಮಯ!
ಬದುಕಿವೆ; ಆರೋಗ್ಯವಾಗಿವೆ.

ಕರ್ರಗಿನ
ವಿಕೃತ ಗುಡಾಣಾಕಾರದ ಎದೆ, ಹೊಟ್ಟೆಯಿಂದ
ಸೋರುವ ರಾಡಿ
ನಡೆಯಲ್ಲೆಲ್ಲಾ ರಂಗೋಲಿ ಬಿಡಿಸುತ್ವೆ.

ಕಂಪಳ ಕಟ್ಟಿಕೊಂಡು
ಬೀಗುತ್ತಾ
ಗುಟುರು ಹಾಕುತ್ತಾ
ಸಿಕ್ಕಿದ್ದಕ್ಕೆ ಉಜ್ಜಿ ತೀಟೆ ತೀರಿಸಿಕೊಳ್ಳುತ್ತ
ನಿರ್ಭಯವಾಗಿ ಮೆರೆಯುವವು.

ಭ್ರಷ್ಟಾಚಾರಿಗಳಂತೆ
ಪ್ರಜ್ಞೆ ಸ್ವಾಭಿಮಾನ ರಹಿತ ಕ್ಷುದ್ರ ಜಂತುಗಳು
ಗದರಿಸೆ ತಿರುಗಿ ಬೀಳುವವು
ಮಾರಕ ರೋಗ ವಾಹಕಗಳು
ತೊಡರಿ ತೊಡರಿ ಕಾಡುವವು.

ಸ್ವಾಭಾವಿಕ
ಎಡರು ತೊಡರುಗಳು ನೂರಾರು
ಹಂದಿಗಳು, ಅಂತಹವುಗಳ ಜೊತೆ
ಈಚೀಚೆಗೆ
ವನ್ಯ ಮೃಗಗಳ ಅತಿಕ್ರಮಣ ಬೇರೆ ಸೇರಿ
ಬಾಳು ದಿನೇ ದಿನೇ ಸಮಸ್ಯಾತ್ಮಕವಾಗುತ್ತಿದೆ.

ಇವು ಹೆಚ್ಚಿನವು ನಮ್ಮದೇ ತಪ್ಪಿನ ಫಲ!
ಯಾವುದೇ ಇರಲಿ
ನಮಗೆ ಒಳ್ಳೆಯದು ನಾವೇ ಮಾಡಿಕೊಳ್ಳಬೇಕು
ವಿಚಾರಿಸಬೇಕು
ಬದಲಾಗಬೇಕು; ಮುಂದಾಗಬೇಕು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...