ಏನೇ ಬಂದರೂ

ಏನೇ ಬಂದರೂ
ಎದುರುಸಿ ಸಾಗುವ
ಆತ್ಮವಿಶ್ವಾಸವ ನೀಡೆನಗೆ ದೇವಾ|
ಕರುಣಿಸಿ ನಿನ್ನ ಕರುಣೆಯ
ಕವಚವ ಸದಾ ಕಾಯೆನ್ನ ಜೀವ||

ಹಸಿದ ಹೆಬ್ಬುಲಿ ಗರ್ಜಿಸಿದಂತೆ
ಗರ್ಜಿಸಲಿ ಬಾಳ ಕೆಡುಕು|
ಕಡಲುಬ್ಬರಿಸಿ ಅಬ್ಬರಿಸುವಂತೆ
ಅಬ್ಬರಿಸಲಿ ಬದುಕು|
ಕಾರ್ಮೋಡ ಕವಿದು ಮಿಂಚು,
ಗುಡುಗು, ಬರಸಿಡಿಲುಗಳು
ಆರ್ಭಟಿಸುವಂತೆ ಆರ್ಭಟಿಸಲಿ ಜೀವನ|
ನಿನ್ನೊಂದು ಕರುಣೆಯ ಕಿರಣ
ಆಶಾಕಿರಣವಾಗಿರಲು ಭಯಪಡೆನು ನಾನು||

ಸಾವಿಗೆದರದೆ, ಅಧರ್ಮಕ್ಕಂಜದೆ,
ಕಪಟ ಮೋಸಗಳಿಗೆ ಎದೆಗುಂದದೆ
ಹೋರಾಡುವುದ ಕಲಿಸೆನಗೆ|
ಅನ್ಯಾಯಿಗಳ ನಿರ್ದಯದೆ
ಹುಟ್ಟಡಗಿಸೆ ಶಕ್ತಿ ನೀಡೆನಗೆ|
ಗುರಿ ಇರಿಸು, ಅದ ನೆರವೇರಿಸೆ
ಹುರಿದುಂಬಿಸು, ಆಶೀರ್ವದಿಸು
ಜಯದ ಹಿಂದೆ ಜಯಗೊಳಿಸು
ನೀ ಸದಾ ಇಲ್ಲಿ ವಿಜೃಂಭಿಸು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರೀಕ್ಷಲ್ಲೊಂದು ನಗರ
Next post ಭೂಕಂಪದ ಬದುಕು

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys