ಭೂಕಂಪದ ಬದುಕು

ಬದುಕುವುದು ಭೀಕರವೆಂದರೆ
ನಿಜವೆನ್ನೋಣ; ಆದರೆ
ಸಾವೂ ಭೀಕರವಾಗಬೇಕೆ?
ಕರೆದುಕೊಂಡಂತೆ ಸೀತೆಯನ್ನು
ಭೂಮಿ ಅಮ್ಮನಾಗಬಾರದೇಕೆ?
ಸಾಯಿಸುವುದಕ್ಕೂ ಸಿಟ್ಟಾಗಿ ಆಕೆ
ಕೆಂಡಮಂಡಲವಾಗಬೇಕೆ?

ಸಿಟ್ಟೆಂದರೆ ಎಂಥ ಸಿಟ್ಟು!
ಹಾವಂತೆ ಹರಿದಾಡಿದ ಗುಟ್ಟು
ಸಾವಿನ ಎಡೆ ಕೇಳುತ್ತ ಹೆಡೆಯತ್ತಿ
ಬುಸ್ಸೆಂದು ಬಿರುಕು ಬಿಟ್ಟಾಗ
ಅಂತಃಕರಣದ ಆಪೋಶನ
ವಿಷನರ್ತನ!

ಕುಣಿದ ಕಾಲ್ತುಳಿತಕ್ಕೆ
ನೆಲ ನೆತ್ತರ ಕಾರಿತು
ಕತ್ತಲೆಯಿಂದ ಬೆಳಕಿಗೆ
ಬೆಳಕಿನಿಂದ ಕತ್ತಲೆಗೆ
ಕಟ್ಟಿದ ಸೇತುವೆ
ಗಪ್ಪನೆ ಕುಸಿಯಿತು.
ಕಾಲನ ಜೊತೆ ಕಾಳಗವಾಡುತ್ತ
ಬೆವರಾಗಿ ಹರಿದ
ಕರಿಮೈ ಕಾಲುವೆ
ಬತ್ತಿಹೋಯಿತು.

ನಸುನಗೆಯ ಚಂದಿರ
ಚಿಂದಿಚಿಂದಿಯಾದ.
ಉರಿಗಣ್ಣ ಸೂರ್ಯ
ಸುಟ್ಟು ಕರಕಾದ
ಹಗಲು ರಾತ್ರಿಗಳಿಲ್ಲದ
ನೆಲದಲ್ಲಿ ಬಿಲಕ್ಕಾಗಿ
ಬಾಯ್ದೆರೆದ ಜೀವಗಳು
ಒಡೆದ ಗಡಿಗೆಯಲ್ಲಿ ನೀರು ಹೊತ್ತು
ದಾವರ ಹಿಂಗಿಸ ಹೊರಟ
ತುಂಬಿದ ಭಾವಗಳು.

ಭೂಕಂಪದ ಬದುಕಿನಲ್ಲಿ
ನಡುಗುತ್ತಿದೆ ಭಾರತ
ನೊಂದವರೇ ನಂದಾದೀಪವಾಗಿ
ಮುನ್ನಡೆಯುತ್ತದೆ ಖಂಡಿತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನೇ ಬಂದರೂ
Next post ಬಂಗಲೆಯ ಭಾಗ್ಯ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys